ಕರ್ನಾಟಕ

karnataka

ಲಾಕ್​​ಡೌನ್, ಮುಷ್ಕರದಿಂದ ಸಾರಿಗೆ ನಿಗಮಗಳಿಗೆ ಭಾರಿ ನಷ್ಟ, ಸಂಬಳಕ್ಕೂ ದುಡ್ಡಿಲ್ಲ!

By

Published : Jun 7, 2021, 1:19 PM IST

ಕೋವಿಡ್ ಒಂದು ಮತ್ತು ಎರಡನೇ ಅಲೆ, ಪದೇ ಪದೇ ಸಾರಿಗೆ ನೌಕರರ ಮುಷ್ಕರಗಳಿಂದಾಗಿ ಇತ್ತೀಚಿನ ದಿನಗಳಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮಗಳು ಭಾರೀ ನಷ್ಟ ಅನುಭವಿಸುತ್ತಿವೆ. ಅದರಲ್ಲೂ, ಕಳೆದ 40 ದಿನಗಳ ಲಾಕ್​ ಡೌನ್​ನಿಂದಾಗಿ 4 ಸಾರಿಗೆ ನಿಗಮಗಳಿಗೆ ಕೋಟ್ಯಾಂತರ ರೂ. ನಷ್ಟ ಉಂಟಾಗಿದೆ.

Road Transport Corporation
ಸಾರಿಗೆ ನಿಗಮಗಳಿಗೆ ನಷ್ಟ

ಬೆಂಗಳೂರು : ಕೋವಿಡ್ ಲಾಕ್​​ಡೌನ್​, ನೌಕರರ ಮುಷ್ಕರ ಸೇರಿದಂತೆ ನಾನಾ ಸಮಸ್ಯೆಗಳಿಂದ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಭಾರೀ ನಷ್ಟ ಉಂಟಾಗಿದೆ.

ಲಾಕ್​ಡೌನ್ ಜಾರಿಯಾದಾಗಿನಿಂದ ಇಲ್ಲಿಯವರೆಗೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ಬರೋಬ್ಬರಿ 560 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಇದರಿಂದ ನೌಕರರಿಗೆ ವೇತನ ಕೊಡಲೂ ಹೆಣಗಾಡುವಂತಾಗಿದೆ.

ಯಾವ ನಿಗಮಗಳಿಗೆ ಎಷ್ಟು ನಷ್ಟ?ಒಂದು ದಿನ ಬಸ್ ಕಾರ್ಯಾಚರಣೆ ಸ್ಥಗಿತವಾದರೆ ನಾಲ್ಕು ನಿಗಮಗಳಿಗೆ ಸುಮಾರು 14 ಕೋಟಿ ರೂ. ನಷ್ಟವಾಗುತ್ತದೆ. ಲಾಕ್​​ ಡೌನ್​ ಜಾರಿಯಾಗಿ 40 ದಿನಗಳು ಕಳೆದಿದೆ. ಈ ಅವಧಿಯಲ್ಲಿ ಕೇವಲ ಬಿಎಂಟಿಸಿಗೆ ಮಾತ್ರ 120 ಕೋಟಿ ರೂ. ನಷ್ಟ ಉಂಟಾಗಿದೆ. ಬಿಎಂಟಿಸಿಯ ಪ್ರಸ್ತುತ ಆದಾಯ ಸುಮಾರು 2.5 ರಿಂದ 3 ಕೋಟಿ ರೂ. ಇದೆ.

ಕೆಎಸ್​ಆರ್​ಟಿಸಿಯ ನಿತ್ಯದ ಆದಾಯ 7 ಕೋಟಿ ರೂ. ಈಗ 40 ದಿನದ ಲಾಕ್​ಡೌನ್​ನಿಂದ ಆಗಿರುವ ಒಟ್ಟು ನಷ್ಟ 280 ಕೋಟಿ ರೂ. ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪ್ರಸ್ತುತ ದಿನದ ಆದಾಯ 2 ಕೋಟಿ ರೂ. 40 ದಿನದಲ್ಲಿ ಆದ ನಷ್ಟ 80 ಕೋಟಿ ರೂ. ಈಶಾನ್ಯ ಸಾರಿಗೆ ಸಂಸ್ಥೆಯ ದಿನದ ಆದಾಯ 2 ಕೋಟಿ ರೂ. 40 ದಿನದಲ್ಲಿ 80 ಕೋಟಿ ರೂ. ನಷ್ಟ ಸಂಭವಿಸಿದೆ.

ಏಪ್ರಿಲ್ 28 ರಿಂದ ಇಂದಿನವರೆಗಿನ (ಜೂನ್7) ನಷ್ಟದ ಮಾಹಿತಿ ಇದಾಗಿದೆ. ಲಾಕ್​​ಡೌನ್​​ನಿಂದ ಬಸ್​ಗಳು ರಸ್ತೆಗಿಳಯದೆ ನಾಲ್ಕೂ ನಿಗಮಗಳಿಗೆ ಸಾಲದ ಭಾರೀ ನಷ್ಟದ ಹೊರೆ ಬಿದ್ದಿದೆ.

ಓದಿ : ಉತ್ತರ ಕನ್ನಡದಲ್ಲಿ ಶತಕ ಬಾರಿಸಿದ ಪೆಟ್ರೋಲ್ ದರ: ಜನರ ಆಕ್ರೋಶ

ABOUT THE AUTHOR

...view details