ಕರ್ನಾಟಕ

karnataka

ETV Bharat / state

Bengaluru crime: ಹೋಟೆಲ್​ಗೆ ನೀರು ಹಾಕಲು ಬರುತ್ತಿದ್ದವನ ಪರಿಚಯ.. ಪತಿ ಹತ್ಯೆಗೆ ಪತ್ನಿಯ ಸಾಥ್: ತಲಘಟ್ಟಪುರ ಪೊಲೀಸರಿಂದ ಐವರು ಆರೋಪಿಗಳ ಬಂಧನ - ನೈಸ್ ರಸ್ತೆಯ ಫ್ಲೈಓರ್

ಅನಾಥ ಶವವಾಗಿ ಸಿಕ್ಕ ದೇಹದ ಹಿಂದಿನ ಕೊಲೆಯ ರಹಸ್ಯವನ್ನು ಪೊಲೀಸರು ಭೇದಿಸಿದ್ದು ಕೊಲೆಗೆ ಪತ್ನಿಯೇ ಕಾರಣ ಎಂಬ ವಿಚಾರ ಬಯಲಾಗಿದೆ.

arun
ಅರುಣ್

By

Published : Jul 3, 2023, 4:27 PM IST

ಬೆಂಗಳೂರು: ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದ ಸ್ಥಿತಿಯಲ್ಲಿ ಶವ ಪತ್ತೆಯಾದ ಪ್ರಕರಣದ ತನಿಖೆ ಕೈಗೊಂಡ ತಲಘಟ್ಟಪುರ ಠಾಣಾ ಪೊಲೀಸರು, ಅದರ ಹಿಂದೆ ಕೊಲೆಗಾರರಿಗೆ ಹೋಟೆಲ್​ ಮಾಲೀಕನ ಪತ್ನಿಯ ಪರಿಚಯ ಇರುವ ಕಾರಣ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಈ ಕೇಸ್​ನಲ್ಲಿ ಅನಾಥ ಶವವಾಗಿ ಸಿಕ್ಕ ದೇಹದ ಸಾವಿನ ಹಿಂದಿನ ರಹಸ್ಯವನ್ನು ಪೊಲೀಸರು ಬಯಲಿಗೆಳೆದಿದ್ದಾರೆ.

ಪ್ರಕರಣದ ಹಿನ್ನೆಲೆ.. ಜೂನ್ 29ರಂದು ಗೊಟ್ಟಿಗೆರೆ ಪಾಳ್ಯದ ನೈಸ್ ರಸ್ತೆಯ ಫ್ಲೈಓರ್ ಕೆಳಭಾಗದಲ್ಲಿ ಪತ್ತೆಯಾದ ಶವ ಚನ್ನಪಟ್ಟಣ ಮೂಲದ ಅರುಣ್ (43) ಅವರದ್ದು ಎಂದು ತಿಳಿದು ಬಂದಿತ್ತು. ಪ್ರಾಥಮಿಕ ತನಿಖೆಯಲ್ಲಿ ಪೊಲೀಸರಿಗೆ ಇದು ಉದ್ದೇಶಪೂರ್ವಕವಾಗಿ ಮಾಡಿದ ಕೊಲೆ ಎಂಬುದು ಅರಿವಿಗೆ ಬಂದಿತ್ತು. ಈ ಉದ್ದೇಶ ಏನು ಎಂಬುದನ್ನು ಪತ್ತೆಹಚ್ಚಲು ಮುಂದಾದ ಪೊಲೀಸರಿಗೆ ಹತ್ಯೆಯ ಹಿಂದಿದ್ದ ಆತನ ಪತ್ನಿ‌ ರಂಜಿತಾ ಹಾಗೂ ಆಕೆಯ ಪರಿಚಯಸ್ಥ ಗಣೇಶ್ ಎಂಬದು ಗೊತ್ತಾಗಿದೆ. ಅದರಂತೆ ಮಾಹಿತಿ ಕಲೆ ಹಾಕಿದ ಪೊಲೀಸರು ರಂಜಿತಾ ಹಾಗೂ ಗಣೇಶ್ ಸಹಿತ ಐವರು ಆರೋಪಿಗಳನ್ನ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು

ಆರು ವರ್ಷದ ಹಿಂದೆ ರಂಜಿತಾಳನ್ನು ಮದುವೆಯಾಗಿದ್ದ ಅರುಣ್ ಬೆಂಗಳೂರಿನಲ್ಲಿ ವಾಸವಿದ್ದುಕೊಂಡು ಆರ್. ಆರ್. ನಗರದಲ್ಲಿ ಗೌಡ್ರು ಬೀಗರೂಟ ಎಂಬ ಹೆಸರಿನ ಹೋಟೆಲ್ ನಡೆಸುತ್ತಿದ್ದರು. ಅದೇ ಹೋಟೆಲಿಗೆ ನೀರು ಹಾಕಲು ಬರುತ್ತಿದ್ದ ಗಣೇಶನೊಂದಿಗೆ ಅರುಣ್ ಪತ್ನಿ ರಂಜಿತಾ ಪರಿಚಯ ಮಾಡಿಕೊಂಡಿದ್ದರು. ಇಬ್ಬರ ಪರಿಚಯಕ್ಕೆ ಅರುಣ್ ಅಡ್ಡವಾಗಿದ್ದಾರೆ ಎಂದು ಇಬ್ಬರೂ ಸೇರಿ ಆತನನ್ನು ಮುಗಿಸಲು ಸಂಚು ರೂಪಿಸಿದ್ದರು.

ಇದನ್ನೂ ಓದಿ:Doddaballapur Crime: ಕುಡಿದು ಬಂದು ನಿತ್ಯ ಕಿರುಕುಳ, ತಾಯಿ ಮೇಲೆ ಹಲ್ಲೆ.. ಪುತ್ರನನ್ನು ಮರಕ್ಕೆ ಕಟ್ಟಿಹಾಕಿ ಬೆಂಕಿ ಹಚ್ಚಿ ಕೊಂದ ತಂದೆ

ಅದರಂತೆ ಹತ್ಯೆಗೆ ಒಂದು ದಿನ ಮೊದಲೇ ರಂಜಿತಾ ತನ್ನ ಹುಟ್ಟೂರು ಮಂಡ್ಯಕ್ಕೆ ತೆರಳಿದ್ದರು. ಇತ್ತ ಜೂನ್ 28ರಂದು ರಾತ್ರಿ 11 ಗಂಟೆ ಸುಮಾರಿಗೆ 'ಪಾರ್ಟಿ ಮಾಡೋಣ, ಜೊತೆಗೆ ಉದ್ಯಮಕ್ಕೆ ಸ್ವಲ್ಪ ಹಣ ಕೊಡಿಸುತ್ತೇನೆ' ಅಂತಾ ಅರುಣ್ ಅವರನ್ನು ಗಣೇಶ ಕರೆಸಿಕೊಂಡಿದ್ದ. ಅರುಣ್ ಬರುವ ಮುನ್ನವೇ ಆತನ ಹತ್ಯೆಗಾಗಿ ಶಿವಾನಂದ, ದೀಪು ಹಾಗೂ ಶರತ್ ಎಂಬುವವರನ್ನ ಗಣೇಶ ತನ್ನ ಜೊತೆ ಸೇರಿಸಿಕೊಂಡಿದ್ದ. ಅರುಣ್ ಬರುತ್ತಿದ್ದಂತೆ ಆತನ ಕಣ್ಣಿಗೆ ಖಾರದಪುಡಿ ಎರಚಿ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆಗೈದಿದ್ದ. ಕೊಲೆ ಮಾಡಿದ ನಂತರ ಆರೋಪಿಗಳು, ಅರುಣ್​ ಶವವನ್ನು ಅಜ್ಞಾತ ಸ್ಥಳದಲ್ಲಿ ಎಸೆದು ಪರಾರಿಯಾಗಿದ್ದರು.

ಮಾರನೇ ದಿನ ಶವವನ್ನ ಕಂಡ ಸಾರ್ವಜನಿಕರು ತಲಘಟ್ಟಪುರ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದಾಗ ಆರಂಭದಲ್ಲಿ ಇದೊಂದು ಹಣದ ವ್ಯವಹಾರದ ಜಿದ್ದಿಗೆ ನಡೆದಿರಬಹುದಾದ ಹತ್ಯೆ ಎಂದು ಪೊಲೀಸರು ಅನುಮಾನ ಪಟ್ಟಿದ್ದರು. ಆದರೆ ಮತ್ತಷ್ಟು ತನಿಖೆ ಕೈಗೊಂಡಾಗ ಪತ್ನಿಗೆ ಪರಿಚಯವಿದ್ದವರಿಂದ ನಡೆದ ಕೃತ್ಯ ಎಂಬುದು ಬಯಲಾಗಿದೆ. ಸದ್ಯ ಗಣೇಶ್, ರಂಜಿತಾ, ಶಿವಾನಂದ, ದೀಪು ಹಾಗೂ ಶರತ್ ಎಂಬುವರನ್ನು ತಲಘಟ್ಟಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ABOUT THE AUTHOR

...view details