ಕರ್ನಾಟಕ

karnataka

ETV Bharat / state

ಕೂಡಿಟ್ಟ ಹಣ ಕರಗಿತು; ಕೆಲಸವಿಲ್ಲದೆ ಬದುಕಾಯ್ತು ಬರ್ಬಾದ್‌: ಬಡ, ಮಧ್ಯಮ ವರ್ಗಕ್ಕೆ ಶಾಪವಾದ ಕೊರೊನಾ

ಕೊರೊನಾ ವೈರಸ್​ ರೂಪಾಂತರಗೊಂಡು ಜನಜೀವನವನ್ನು ಸಂಕಷ್ಟಕ್ಕೀಡು ಮಾಡಿದೆ. ಸೋಂಕು ನಿಯಂತ್ರಣಕ್ಕೆ ಸರ್ಕಾರವೇನೋ ಲಾಕ್​ಡೌನ್​ ಜಾರಿ ಮಾಡಿದೆ. ಆದ್ರೆ ದುಡಿಮೆಯಿಲ್ಲದೇ ಮನೆಯಲ್ಲಿರುವ ಜನರ ಸಂಕಷ್ಟ ಕೇಳೋರಿಲ್ಲ. ಇದೇ ವೇಳೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದ್ರ ನೇರ ಪರಿಣಾಮ ಮಧ್ಯಮ ಮತ್ತು ಬಡ ವರ್ಗದ ಜನರ ಮೇಲಾಗುತ್ತಿದೆ.

By

Published : May 23, 2021, 7:37 AM IST

covid lock down effects on common people
ಜನ ಸಾಮಾನ್ಯರ ಜೀವನ ನಿರ್ವಹಣೆ ಮೇಲೆ ಕೋವಿಡ್​ ಹೊಡೆತ

ಬೆಂಗಳೂರು: ರೂಪಾಂತರಗೊಂಡಿರುವ ಕೋವಿಡ್​​ ಸೋಂಕು ತಂದಿಟ್ಟ ಕರಾಳ ಪರಿಸ್ಥಿತಿಯಿಂದಾಗಿ ಜನಸಾಮಾನ್ಯರಿಗೆ ಜೀವನ ನಿರ್ವಹಣೆಯೇ ಬಹಳ ಕಷ್ಟಕರವಾಗಿದೆ. ಒಂದೆಡೆ ರೋಗದ ವಿರುದ್ಧ ಹೋರಾಡಬೇಕು, ಜತೆಗೆ ರೋಗ ಬಾರದಂತೆ ರೋಗ ನಿರೋಧಕ ಶಕ್ತಿಯನ್ನೂ ಪಡೆಯಬೇಕು. ಆದರೆ ಈ ಎರಡೂ ಕೆಲಸವನ್ನು ಸರಿಯಾಗಿ ಮಾಡಲಾಗದ ವಾತಾವರಣ ಸೃಷ್ಟಿಯಾಗಿದೆ.

ಸೋಂಕು ನಿಯಂತ್ರಿಸಲು ಇದೀಗ ಸರ್ಕಾರ ಲಾಕ್​ಡೌನ್ ವಿಸ್ತರಿಸಿದ್ದು, ಸಂಕಷ್ಟದಲ್ಲಿರುವವರಿಗೆ 1,250 ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದೆ. ಆದ್ರೆ ಇದು ಯಾವುದಕ್ಕೂ ಸಾಲೋಲ್ಲ ಎನ್ನುವ ಬೇಸರ ಮಧ್ಯಮ ವರ್ಗದ ಜನರದ್ದು.

ಬೆಂಗಳೂರಿನ ನಿವಾಸಿ ಚಂದ್ರಶೇಖರ್

ಲಾಕ್​ಡೌನ್​​ ಕಾರಣ ಕೈಯಲ್ಲಿ ಕೆಲಸವಿಲ್ಲ. ಆದಾಯ ತಂದು ಕೊಡುವ ದಾರಿಗಳು ಮುಚ್ಚಿವೆ. ದುಬಾರಿ ದುನಿಯಾದಲ್ಲಿ ಕೂಡಿಟ್ಟಿದ್ದ ಹಣವೆಲ್ಲ ಕರಗಿ ಹೋಗ್ತಿದೆ. ಅಗತ್ಯ ವಸ್ತುಗಳ ಖರೀದಿಗೆ ಹೋದರೂ ಜೇಬಿಗೆ ಕತ್ತರಿ ಪಕ್ಕಾ. ಹೀಗೆ ನಾನಾ ರೀತಿಯಲ್ಲಿ ಬಡವರು, ಮಧ್ಯಮ ವರ್ಗದ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಇದ್ರ ನಡುವೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪೌಷ್ಟಿಕಾಹಾರ ಸೇವಿಸುವುದು ದೂರದ ಮಾತೇ ಸರಿ. ಕೋವಿಡ್ ಎದುರಿಸಲು ಬೇಕಾದ ಮಾಸ್ಕ್, ಸ್ಯಾನಿಟೈಸರ್ ಇತ್ಯಾದಿಯನ್ನು ನಿತ್ಯ ಖರೀದಿಸುವುದು ಕೂಡ‌ ಒಮ್ಮೊಮ್ಮೆ ಕಷ್ಟವೇ ಆಗುತ್ತಿದೆ ಅನ್ನೋದು ಸಾಮಾನ್ಯ ಜನರ ಸಂಕಟ.

ಸರ್ಕಾರವೇನೋ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತವಾಗಿ 10 ಕೆ.ಜಿ ಅಕ್ಕಿ ಹಾಗೂ ಎಪಿಎಲ್ ದಾರರಿಗೆ 10 ಕೆ.ಜಿ ಅಕ್ಕಿ (15 ರೂ. ಒಂದು ಕೆ.ಜಿಯಂತೆ) ನೀಡುತ್ತಿದೆ. ಆದರೆ ಇತರೆ ವಸ್ತುಗಳ ಖರೀದಿಗೆ ಬೆಲೆ ಏರಿಕೆ ಬಿಸಿಯಿಂದ ತಪ್ಪಿಸಿಕೊಳ್ಳಲಾಗದ ಪರಿಸ್ಥಿತಿ ಎದುರಾಗಿದೆ.‌

ಬೆಂಗಳೂರು ಜನತೆಯ ಬವಣೆ

ಈ ಬಗ್ಗೆ ಮಾತನಾಡಿರುವ ಬೆಂಗಳೂರಿನ ನಿವಾಸಿ ಚಂದ್ರಶೇಖರ್, ಬಡವರಿಗೆ, ಮಧ್ಯಮ, ಕೆಳ ವರ್ಗದ ಜನರಿಗೆ ಕೊರೊನಾ ಎಂಬುದು ಶಾಪವಾಗಿದೆ. ಸೋಂಕು ನಿಯಂತ್ರಣಕ್ಕೆ ಲಾಕ್​ಡೌನ್ ಜಾರಿ ಮಾಡಿರುವ ಸರ್ಕಾರ ಮನೆಯಿಂದ ಹೊರಗೆ ಬರಬೇಡಿ ಅಂತಿದೆ. ಪರಿಣಾಮ ನಮ್ಮ ನಿತ್ಯದ ಆದಾಯಕ್ಕೆ ಪೆಟ್ಟು ಬಿದ್ದಿದೆ. ಪ್ರತಿದಿನ ಬಳಕೆ‌ ಮಾಡುವ ವಸ್ತುಗಳನ್ನು ಖರೀದಿಸುವ ಶಕ್ತಿಯನ್ನು ಕಳೆದುಕೊಂಡಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.‌

ಕೋವಿಡ್ ವಿರುದ್ಧ ಹೋರಾಡಲು ಪೌಷ್ಟಿಕಾಹಾರ ಸೇವಿಸಿ ಅಂತಾರೆ ತಜ್ಞರು. ಆದರೆ ನಮಗೆ ಆದಾಯವಿಲ್ಲದೇ, ದಿನಬಳಕೆ ವಸ್ತುಗಳನ್ನು ಸಹ ಕೊಂಡುಕೊಳ್ಳಲು ಆಗದಿರುವ ಪರಿಸ್ಥಿತಿ ಇದೆ ಎಂದು ಚಂದ್ರಶೇಖರ್​​ ಹೇಳುತ್ತಾರೆ. ಮಧ್ಯಮ ವರ್ಗದವರು ಸಾಯಲು ಬಾರದು, ಬದುಕಲೂ ಬಾರದು ಎನ್ನುವ ಪರಿಸ್ಥಿತಿ ಇದೆ. ಆಸ್ಪತ್ರೆಗೆ ಹೋದರೆ ಬೆಡ್ ಇಲ್ಲ, ಆಕ್ಸಿಜನ್ ಇಲ್ಲ. ಒಂದು ವೇಳೆ ಕೊರೊನಾದಿಂದ ಸತ್ತರೆ ಸ್ಮಶಾನದಲ್ಲೂ ಕ್ಯೂ ನಿಲ್ಲಬೇಕು. ಹೀಗಾಗಿ ಈ ಆತಂಕದಲ್ಲೇ ಪ್ರಾಣ ಬಿಡಬೇಕೇನೋ. ಮಧ್ಯಮ ವರ್ಗದವರಿಗೆ ಸರ್ಕಾರ ಏನು ಮಾಡಿದೆ? ಸರ್ಕಾರ ದಿನ ಬಳಕೆ ವಸ್ತುಗಳ ಬೆಲೆ ಇಳಿಕೆ ಮಾಡಲಿ ಎಂದು ಅವರು ಒತ್ತಾಯಿಸಿದರು.‌

ಹಣ್ಣಿನ ಬೆಲೆ (ಹಾಪ್ ಕಾಮ್ಸ್ ದರದಲ್ಲಿ - ಪ್ರತಿ ಕೆಜಿಗೆ):

  • ಸೇಬು- 160ರಿಂದ 180 ರೂ.
  • ಬಾಳೆ ಹಣ್ಣು- 20ರಿಂದ 50 ರೂ.
  • ಸೀಬೆಹಣ್ಣು- 65ರಿಂದ 83 ರೂ.
  • ಮಾವಿನ ಹಣ್ಣು- 70ರಿಂದ 200 ರೂ.
  • ಕಿತ್ತಾಳೆ- 148 ರೂ.
  • ಮೂಸಂಬಿ- 168 ರೂ.

ತರಕಾರಿ:

  • ಬದನೆಕಾಯಿ- 42 ರೂ.
  • ಬೀಟ್ ರೂಟು- 24 ರೂ.
  • ಹಾಗಲಕಾಯಿ- 48 ರೂ.
  • ಸೋರೆಕಾಯಿ- 26 ರೂ.
  • ಸೌತೆಕಾಯಿ- 26 ರೂ.
  • ದಪ್ಪ ಮೆಣಸಿನಕಾಯಿ- 42 ರೂ.
  • ಹಸಿ ಮೆಣಸಿನಕಾಯಿ - 42 ರೂ.
  • ಕ್ಯಾರೆಟ್- 40 ರಿಂದ 45 ರೂ.
  • ತೆಂಗಿನಕಾಯಿ- 20 ರಿಂದ 38 ರೂ.
  • ಈರುಳ್ಳಿ- 22 ರಿಂದ 65 ರೂ.
  • ಬೆಳ್ಳುಳ್ಳಿ- 154 ರೂ.
  • ಆಲೂಗಡ್ಡೆ- 28 ರೂ.
  • ಮೂಲಂಗಿ- 32 ರೂ
  • ಹೀರೇಕಾಯಿ- 67 ರೂ.
  • ಮೆಂತ್ಯಸೊಪ್ಪು-92 ರೂ.
  • ಪುದೀನ- 38 ರೂ.
  • ಕರಿಬೇವು- 38 ರೂ.
  • ಕೊತ್ತಂಬರಿ ಸೊಪ್ಪು- 64 ರೂ.
  • ಪಾಲಾಕ್ ಸೊಪ್ಪು- 40 ರೂ.

ಡ್ರೈಪ್ರೂಟ್ಸ್

  • ಒಣದ್ರಾಕ್ಷಿ- 280 ರೂ. (100gm)
  • ಗೋಡಂಬಿ- 900 ರೂ. (100gm)
  • ಡೇಟ್ಸ್- 38 ರೂ. (200gm)
  • ಬಾದಾಮಿ- 700 ರೂ. (100gm)
  • ಪಿಸ್ತಾ- 1200 ರೂ. (100gm)

ಅಡುಗೆ ಎಣ್ಣೆ

  • ಕಡಲೆಕಾಯಿ ಎಣ್ಣೆ- 168- 192 ರೂ.
  • ಸಫಾಲ್ ಡೀಪ್ -150 ರೂ.
  • ಮೊಟ್ಟೆ- 5.80 ರೂ. ( ಒಂದಕ್ಕೆ).

ಇದನ್ನೂ ಓದಿ:'ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು' : ಕೋವಿಡ್​ ವಾರ್ಡ್​​ನಲ್ಲಿ ಪಿಪಿಇ ಕಿಟ್​ ಧರಿಸಿ ವೈದ್ಯರ ಡ್ಯಾನ್ಸ್​

ABOUT THE AUTHOR

...view details