ಬೆಂಗಳೂರು:ಕೊರೊನಾ ಅನ್ನೋ ಮಹಾಮಾರಿ ವ್ಯಾಪಕವಾಗಿ ಹರಡುತ್ತಲೇ ಇದೆ. ಇದನ್ನ ನಿಯಂತ್ರಣ ಮಾಡೋದಕ್ಕೆ ಲಾಕ್ಡೌನ್ ಹೇರಲಾಗಿತ್ತು. ಈ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಬಹುತೇಕ ಜನರ ಓಡಾಟ ಸ್ಥಬ್ದವಾಗಿತ್ತು. ಇದರ ಪರಿಣಾಮ ಎಂಬಂತೆ ಅಕ್ರಮ ಚಟುವಟಿಕೆಗಳು, ರೌಡಿಸಂನಂತಹ ಎಲ್ಲಾ ಅಪರಾಧಿ ಕೆಲಸಗಳಿಗೆ ಬ್ರೇಕ್ ಬಿದ್ದಿದೆ.
ಕೊರೊನಾ ಬರುವುದಕ್ಕೂ ಮುನ್ನ ಕೊಲೆ, ಕೊಲೆ ಯತ್ನ, ಡ್ರಗ್, ರಾಬರಿ, ಸರಗಳ್ಳತನ, ಹೀಗೆ ಬೇರೆ ಅಪರಾಧ ಪ್ರಕರಣದ ಆರೋಪಿಗಳನ್ನ ಪತ್ತೆ ಹಚ್ಚುವುದು ಪೊಲೀಸರಿಗೆ ಕಷ್ಟಕರವಾಗಿತ್ತು. ಆರೋಪಿಗಳಿಗೆ ಶೋಧ ನಡೆಸಿ ನ್ಯಾಯಾಲಯದ ಮುಖಾಂತರ ವಾರೆಂಟ್ ಜಾರಿ ಮಾಡಿದರು ಕೂಡ ಆರೋಪಿಗಳು ಸಿಕ್ಕಿರಲಿಲ್ಲ. ಆದರೆ ಕೊರೊನಾಕ್ಕೆ ಹೆದರಿ ಬಹುತೇಕರು ತಮ್ಮ ಮನೆಗಳಲ್ಲಿ ಇದ್ದರು. ಆರೋಪಿಗಳ ಜಾಡು ಹಿಡಿಯಲು ಪೊಲೀಸರಿಗೆ ಲಾಕ್ಡೌನ್ ನೆರವಾಗಿದೆ.