ಕರ್ನಾಟಕ

karnataka

By

Published : May 24, 2020, 4:19 PM IST

ETV Bharat / state

ಲಾಕ್​​​ಡೌನ್​​​ ವೇಳೆ ಅಳಿಲುಸೇವೆ... ಬಿಸಿಲಿನಲ್ಲಿ ಬಸವಳಿದ ಪೊಲೀಸರಿಗೆ ಮಜ್ಜಿಗೆ ವಿತರಣೆ

ನಿರ್ಮಾಣ ಉದ್ಯಮದಲ್ಲಿ ತೊಡಗಿಕೊಂಡಿರುವ ಹಿತನ್ ಅಮರ್ ಹಾಗೂ ಅವರ ಪತ್ನಿ, ಕರ್ತವ್ಯನಿರತ ಪೊಲೀಸರಿಗೆ ತಂಪಾದ ಮಜ್ಜಿಗೆ ವಿತರಿಸಿದರು. ಮನೆಯಲ್ಲಿ ತಯಾರಿಸಿದ ಮಜ್ಜಿಗೆಯನ್ನು ತಮ್ಮ ಕಾರಿನ ಡಿಕ್ಕಿಯಲ್ಲಿ ಹವಾ ನಿಯಂತ್ರಿತ ವ್ಯವಸ್ಥೆಯಲ್ಲಿ ಇರಿಸಿ ಪೊಲೀಸ್​​ ಸಿಬ್ಬಂದಿಯಿದ್ದ ಸ್ಥಳಕ್ಕೆ ತೆರಳಿ ವಿತರಿಸಿದರು.

Couple distributing buttermilk to police in Bangalore
ಲಾಕ್​​​ಡೌನ್​​​ನಲ್ಲೊಂದು ಅಳಿಲುಸೇವೆ....ಬಿಸಿಲಲ್ಲಿ ದಣಿದ ಪೊಲೀಸರಿಗೆ ಮಜ್ಜಿಗೆ ವಿತರಿಸುತ್ತಿರುವ ದಂಪತಿ

ಬೆಂಗಳೂರು:ಬೇಸಿಗೆಯ ಬಿಸಿಲಿನ ತಾಪ ಹೆಚ್ಚಿದ್ದು, ರಣ ಬಿಸಲಿಗೆ ಜನ ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರ ನಡುವೆಯೂ ಲಾಕ್​ಡೌನ್​ನ​ ಕರ್ತವ್ಯನಿರತ ಪೊಲೀಸರಿಗೆ ದಂಪತಿ ಮಜ್ಜಿಗೆ ವಿತರಿಸಿದರು.

ಪೊಲೀಸರಿಗೆ ಮಜ್ಜಿಗೆ ವಿತರಿಸುತ್ತಿರುವ ದಂಪತಿ

ನಿರ್ಮಾಣ ಉದ್ಯಮದಲ್ಲಿ ತೊಡಗಿಕೊಂಡಿರುವ ಹಿತನ್ ಅಮರ್ ಹಾಗೂ ಅವರ ಪತ್ನಿ, ಕರ್ತವ್ಯನಿರತ ಪೊಲೀಸರಿಗೆ ತಂಪಾದ ಮಜ್ಜಿಗೆ ವಿತರಿಸಿದರು. ಮನೆಯಲ್ಲಿ ತಯಾರಿಸಿದ ಮಜ್ಜಿಗೆಯನ್ನು ತಮ್ಮ ಕಾರಿನ ಡಿಕ್ಕಿಯಲ್ಲಿ ಹವಾ ನಿಯಂತ್ರಿತ ವ್ಯವಸ್ಥೆಯಲ್ಲಿ ಇರಿಸಿ ಪೊಲೀಸ್​​ ಸಿಬ್ಬಂದಿಯಿದ್ದ ಸ್ಥಳಕ್ಕೆ ತೆರಳಿ ವಿತರಿಸಿದರು.

ನಿತ್ಯ ನಾಲ್ಕು ಗಂಟೆ ಈ ಕುಟುಂಬ ಮಜ್ಜಿಗೆ ವಿತರಿಸಿಕೊಂಡು ಬರುತ್ತಿದೆ. ಸದಾಶಿವ ನಗರದಿಂದ ಹೊರಡುವ ಕಾರು ಟ್ರಿನಿಟಿ ಸರ್ಕಲ್​​ವರೆಗೆ ದಾರಿಯುದ್ದಕ್ಕೂ ಸಿಗುವ ಪೊಲೀಸರಿಗೆ ಮಜ್ಜಿಗೆ ಹಾಗೂ ನೀರು ಹಂಚುತ್ತಾರೆ. ಪ್ರತಿ ದಿನ 700 ಕಪ್ ಮಜ್ಜಿಗೆಯನ್ನು ವಿತರಣೆ ಮಾಡುತ್ತಾ ಲಾಕ್​​ಡೌನ್​​ನಲ್ಲಿ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ.

ABOUT THE AUTHOR

...view details