ಕರ್ನಾಟಕ

karnataka

'ಔಷಧಿಗಳಿಗಾಗಿ ಚೀನಾ ಅವಲಂಬನೆ ಬಿಟ್ಟು ಸ್ವದೇಶಿ ಉತ್ಪಾದನೆಗೆ ಕ್ರಮ'

By

Published : Jan 1, 2021, 8:52 PM IST

ನಾನು ನಿರ್ವಹಿಸುವ ರಾಸಾಯನಿಕ ಇಲಾಖೆ (ಔಷಧೋದ್ಯಮ ಸೇರಿದಂತೆ) ಅಂದಾಜು 14,300 ಕೋಟಿ ರೂಪಾಯಿ ವೆಚ್ಚದಲ್ಲಿ ದೇಶದ ಮೂರು ಕಡೆ ಬಲ್ಕ್‌ ಡ್ರಗ್‌ ಪಾರ್ಕ್‌ ಹಾಗೂ ನಾಲ್ಕು ಮೆಡಿಕಲ್‌ ಡಿವೈಸ್‌ ಪಾರ್ಕ್​ಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.

Minister DV Sadananda Gowda about indigenous medicine
ಸ್ವದೇಶಿ ಔಷಧ ಉತ್ಪಾದನೆ ಕುರಿತು ಸಚಿವ ಸದಾನಂದ ಗೌಡ ಹೇಳಿಕೆ

ಬೆಂಗಳೂರು :ಭಾರತ ಜಗತ್ತಿನ ಪ್ರಮುಖ ಔಷಧ ರಫ್ತುದಾರ ರಾಷ್ಟ್ರವಾಗಿದ್ದರೂ, ನಾವಿನ್ನೂ ಕೆಲವು ಮೂಲ ಔಷಧ ರಾಸಾಯನಿಕಗಳಿಗಾಗಿ ಚೀನಾ ಮತ್ತಿತರ ದೇಶಗಳನ್ನೇ ಅವಲಂಬಿಸಿದ್ದೇವೆ. ಇವನ್ನು ಕೂಡಾ ಸಂಪೂರ್ಣ ಸ್ವದೇಶಿಯಾಗಿ ಉತ್ಪಾದಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

ಕೊರೊನಾ ಆರಂಭಕ್ಕೆ ಮುನ್ನ ಭಾರತದಲ್ಲಿ ಪಿಪಿಇ ಕಿಟ್​, ವೆಂಟಿಲೇಟರ್​ಗಳು ತಯಾರಾಗುತ್ತಿರಲಿಲ್ಲ. ಆದರೆ, ಇಂದು ಪ್ರತಿನಿತ್ಯ 4 ಲಕ್ಷ ಪಿಪಿಇ ಕಿಟ್​ ತಯಾರಿಸುತ್ತಿದ್ದೇವೆ. ಹಾಗೆಯೇ ದೊಡ್ಡ ಪ್ರಮಾಣದಲ್ಲಿ ವೆಂಟಿಲೇಟರ್​ಗಳ ಉತ್ಪಾದನೆ ಆರಂಭಗೊಂಡಿದೆ. ವೈದ್ಯಕೀಯ ಉಪಕರಣಗಳ ಸ್ವಾವಲಂಬನೆಗೂ ಕ್ರಮ ಕೈಗೊಳ್ಳಲಾಗಿದೆ. ಕೊರೊನಾ ಸಂಕಷ್ಟದ ಕಾಲದಲ್ಲಿ ನಾವು ಜಗತ್ತಿನ 120 ದೇಶಗಳಿಗೆ ಜೀವರಕ್ಷಕ ಔಷಧಗಳನ್ನು ಕಳುಹಿಸಿಕೊಟ್ಟಿದ್ದೇವೆ. ಭಾರತದ ಈ ನೆರವನ್ನು ಇಡೀ ವಿಶ್ವವೇ ಕೊಂಡಾಡಿದೆ. ನಾನು ನಿರ್ವಹಿಸುವ ರಾಸಾಯನಿಕ ಇಲಾಖೆ (ಔಷಧೋದ್ಯಮ ಸೇರಿದಂತೆ) ಅಂದಾಜು 14,300 ಕೋಟಿ ರೂಪಾಯಿ ವೆಚ್ಚದಲ್ಲಿ ದೇಶದ ಮೂರು ಕಡೆ ಬಲ್ಕ್‌ ಡ್ರಗ್‌ ಪಾರ್ಕ್‌ ಹಾಗೂ ನಾಲ್ಕು ಮೆಡಿಕಲ್‌ ಡಿವೈಸ್‌ ಪಾರ್ಕ್​ಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಓದಿ: ಪಿಎಂ ಆವಾಸ್​ ಯೋಜನೆಯಡಿ 17.58 ಲಕ್ಷ ಕುಟುಂಬಗಳಿಗೆ ಸೂರು: ಯೋಗಿ ಆದಿತ್ಯನಾಥ್​

ರಸಗೊಬ್ಬರ ಇಲಾಖೆಯು ಭಾರತವನ್ನು ರಸಗೊಬ್ಬರ ಉತ್ಪಾದನೆಯಲ್ಲಿ ಸಂಪೂರ್ಣ ಸ್ವಾವಲಂಬಿ ಮಾಡಲು ನಿರ್ಧಿಷ್ಟ ಯೋಜನೆಗಳನ್ನು ರೂಪಿಸಿದೆ. 50 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಐದು ಯೂರಿಯಾ ಉತ್ಪಾದನಾ ಘಟಕಗಳನ್ನು ಪುನುರುಜ್ಜೀವನಗೊಳಿಸಲಾಗುತ್ತಿದೆ. ಇವು ವಾರ್ಷಿಕವಾಗಿ ತಲಾ 12 ಲಕ್ಷ ಮೆಟ್ರಿಕ್‌ ಟನ್‌ ಉತ್ಪಾದನೆಯ ಘಟಕಗಳು. ರಾಮಗುಂಡಂ ಕಾರ್ಖಾನೆಯ ಕೆಲಸ ಪೂರ್ಣಗೊಂಡಿದ್ದು, ಕೆಲವೇ ದಿನಗಳಲ್ಲಿ ಉತ್ಪಾದನೆ ಆರಂಭಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.

ಕೊರೊನಾದಿಂದ ನಾವು ಹೊಸಪಾಠಗಳನ್ನು ಕಲಿಯುತ್ತಿದ್ದೇವೆ. ಲಸಿಕೆ ದೊರೆಯುತ್ತಿದ್ದಂತೆ ಸರ್ಕಾರವು ಅದನ್ನು ಪ್ರತಿಯೊಬ್ಬರಿಗೂ ತಲುಪಿಸುವ ವ್ಯವಸ್ಥೆ ಮಾಡುತ್ತದೆ. ಕೊರೊನಾ ವೈರಾಣು ಇನ್ನೂ ವ್ಯಾಪಕವಾಗಿಯೇ ಇದೆ. ಹಾಗಾಗಿ ನಾವೆಲ್ಲ ಅದರ ಬಗ್ಗೆ ಮುಂಜಾಗ್ರತೆಯಿಂದ ಇರಬೇಕು. ಮಾಸ್ಕ್‌ ಧಾರಣೆ, ದೈಹಿಕ ಅಂತರ ಕಾಪಾಡಿಕೊಳ್ಳುವುದು ಮೊದಲಾದ ಮುಂಜಾಗ್ರತಾ ಕ್ರಮಗಳನ್ನು ಮುಂದುವರಿಸಬೇಕು. 2021ರಲ್ಲಿ ಕೊರೊನಾ ಸಂಪೂರ್ಣ ನಿರ್ಮೂಲನೆ ಮಾಡಲು ನಾವೆಲ್ಲ ಪಣತೊಡೋಣ ಎಂದು ಕರೆ ನೀಡಿದ್ದಾರೆ.

For All Latest Updates

TAGGED:

ABOUT THE AUTHOR

...view details