ಕರ್ನಾಟಕ

karnataka

ETV Bharat / state

ಮಂಗಳವಾರ ನೂತನ ಸಭಾಪತಿ ಆಯ್ಕೆ ಮಾಡಲಾಗುವುದು: ಆರ್.ಅಶೋಕ್ - ಕಂದಾಯ ಸಚಿವ ಆರ್ ಅಶೋಕ್

ಈಗಾಗಲೇ ವಿಧಾನ ಪರಿಷತ್ ಕಲಾಪ 2 ದಿನ ವಿಸ್ತರಿಸಲು ಕೋರಲಾಗಿದೆ. ಉಪಸಭಾಪತಿ ನಾಳೆ ಬಿಎಸಿ ಸಭೆ ಕರೆದು ಕಲಾಪ ವಿಸ್ತರಿಸುವ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಕಂದಾಯ ಸಚಿವ ಆರ್.ಅಶೋಕ್‌
ಕಂದಾಯ ಸಚಿವ ಆರ್.ಅಶೋಕ್‌

By

Published : Feb 5, 2021, 4:17 AM IST

ಬೆಂಗಳೂರು:ವಿಧಾನ ಪರಿಷತ್ ಕಲಾಪ ಮಂಗಳವಾರದವರೆಗೂ ನಡೆಯಲಿದ್ದು, ಕಡೆಯ ದಿನ ನೂತನ ಸಭಾಪತಿ ಆಯ್ಕೆಯಾಗಲಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್‌ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಸಿ ನೂತನ ಸಭಾಪತಿ ಸಂಬಂಧ ಚರ್ಚೆ ನಡೆಸಲಾಗುತ್ತದೆ. ಸಭಾಪತಿ ಯಾರಾಗಬೇಕೆಂಬ ಬಗ್ಗೆ ಸಿಎಂ ನಾಳೆ ನಿರ್ಧಾರ ಮಾಡಲಿದ್ದಾರೆ ಎಂದರು.

ಈಗಾಗಲೇ ವಿಧಾನ ಪರಿಷತ್ ಕಲಾಪ 2 ದಿನ ವಿಸ್ತರಿಸಲು ಕೋರಲಾಗಿದೆ. ಉಪಸಭಾಪತಿ ನಾಳೆ ಬಿಎಸಿ ಸಭೆ ಕರೆದು ಕಲಾಪ ವಿಸ್ತರಿಸುವ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಇದನ್ನು ಓದಿ:ಪರಿಷತ್ ಸಭಾಪತಿ ಸ್ಥಾನಕ್ಕೆ ಪ್ರತಾಪ್ ಚಂದ್ರ ಶೆಟ್ಟಿ ರಾಜೀನಾಮೆ

ABOUT THE AUTHOR

...view details