ಕರ್ನಾಟಕ

karnataka

ETV Bharat / state

ಮೂರ್ಛೆ ಹೋಗಿ ರಸ್ತೆಯಲ್ಲಿ ಬಿದ್ದಿದ್ದ ವ್ಯಕ್ತಿಗೆ ಚಿಕಿತ್ಸೆ ಕೊಡಿಸಿದ ಕಾರ್ಪೋರೇಟರ್ - Corporator M. Shivaraju

ಬೆಂಗಳೂರಿನ ಶಂಕರಮಠ ವಾರ್ಡ್​ನ ಕಿರ್ಲೋಸ್ಕರ್ ಕಾಲೋನಿಯಲ್ಲಿ ಫೀಟ್ಸ್​​ ಬಂದು ರಸ್ತೆಯಲ್ಲಿ ಬಿದ್ದಿದ್ದ 50 ವರ್ಷದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸುವ ಮೂಲಕ ಪಾಲಿಕೆ ಸದಸ್ಯ ಎಂ. ಶಿವರಾಜು ಮಾನವೀಯತೆ ಮೆರೆದಿದ್ದಾರೆ.

corporator hospitalized to old man
ರಸ್ತೆಯಲ್ಲಿ ಬಿದ್ದಿದ್ದ ವೃದ್ಧನನ್ನ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಕಾರ್ಪೋರೇಟರ್

By

Published : Jul 13, 2020, 9:57 PM IST

ಬೆಂಗಳೂರು: ನಗರದ ಶಂಕರಮಠ ವಾರ್ಡ್​ನ ಕಿರ್ಲೋಸ್ಕರ್ ಕಾಲೋನಿಯಲ್ಲಿ ಫೀಟ್ಸ್​ (ಅಪಸ್ಮಾರದಿಂದ ಮೂರ್ಛೆ) ಬಂದು ರಸ್ತೆಯಲ್ಲಿ ಬಿದ್ದಿದ್ದ 50 ವರ್ಷದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸುವ ಮೂಲಕ ಪಾಲಿಕೆ ಸದಸ್ಯ ಎಂ. ಶಿವರಾಜು ಮಾನವೀಯತೆ ಮೆರೆದಿದ್ದಾರೆ.

ರಸ್ತೆಯಲ್ಲಿ ಬಿದ್ದಿದ್ದ ವೃದ್ಧನನ್ನ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಕಾರ್ಪೋರೇಟರ್

50 ವರ್ಷದ ವ್ಯಕ್ತಿಯೊಬ್ಬರು ಮೂರ್ಛೆ​ ಹೋಗಿ ಶಂಕರಮಠ ವಾರ್ಡ್​ನ ಕಿರ್ಲೋಸ್ಕರ್ ಕಾಲೋನಿ ರಸ್ತೆಯಲ್ಲಿ ಬಿದ್ದಿದ್ದರು. ಆದರೆ ಕೊರೊನಾ ಭೀತಿಯಿಂದಾಗಿ ರಸ್ತೆಯಲ್ಲಿ ಓಡಾಡುತ್ತಿದ್ದ ಜನರು ಯಾರೂ ಕೂಡ ವ್ಯಕ್ತಿಯ ನೆರವಿಗೆ ಬಂದಿಲ್ಲ. ಬಳಿಕ ಸ್ಥಳಕ್ಕಾಮಿಸಿದ ಪಾಲಿಕೆ ಸದಸ್ಯ ಎಂ. ಶಿವರಾಜು ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲು ಆ್ಯಂಬುಲೆನ್ಸ್​ಗೆ ಕರೆ ಮಾಡಿದ್ದಾರೆ. ಆದರೆ, ಆ್ಯಂಬುಲೆನ್ಸ್​ ಸರಿಯಾದ ಸಮಯಕ್ಕೆ ಬಾರದ ಹಿನ್ನೆಲೆ, ಆಟೋ ಹಿಡಿದು ಅವರಿಗೆ ಲೋಟಸ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಸಿರುವ ಕಾರ್ಪೋರೇಟರ್ ಎಂ. ಶಿವರಾಜು, ಕೊರೊನಾ ಇದ್ದರೂ, ಇಲ್ಲದಿದ್ದರೂ ವ್ಯಕ್ತಿಯ ಜೀವ ಉಳಿಸುವುದು ಮುಖ್ಯ. ಹಾಗಾಗಿ ತಕ್ಷಣ ಆಸ್ಪತ್ರೆಗೆ ದಾಖಲಿಸಿದೆ. ಇದೀಗ ವಯಸ್ಸಾದ ವ್ಯಕ್ತಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದರು.

ABOUT THE AUTHOR

...view details