ಕರ್ನಾಟಕ

karnataka

ETV Bharat / state

ಸಿಎಂ ನಿವಾಸದ ಬಳಿ 6ಮಂದಿಗೆ ಕೊರೊನಾ ಶಂಕೆ...ಐಸೋಲೇಟೆಡ್​ ವಾರ್ಡ್​​ನಲ್ಲಿ ಚಿಕಿತ್ಸೆ

By

Published : Mar 24, 2020, 4:36 PM IST

Updated : Mar 24, 2020, 8:01 PM IST

coronavirus effect total Karnataka lockdown
ಕೊರೊನಾ ವೈರಸ್​

19:57 March 24

ಸಿಎಂ ನಿವಾಸದ ಬಳಿ 6ಮಂದಿಗೆ ಕೊರೊನಾ ಶಂಕೆ...

  • ಸಿಎಂ ನಿವಾಸದ ಬಳಿ ಇರುವ 6 ಮಂದಿಗೆ ಕೊರೊನಾ ಶಂಕೆ
  • ಒಂದೇ ಕುಟುಂಬದ 6 ಮಂದಿಗೆ ಶಂಕೆ
  • ರಾಜೀವ್​ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ
  • ಲಂಡನ್​ನಿಂದ ನಗರಕ್ಕೆ ಬಂದಿದ್ದ ವ್ಯಕ್ತಿಗೆ ಕೊರೊನಾ ಪಾಸಿಟಿವ್​​
  • ಆತನಿಂದ ಉಳಿದವರಿಗೆ ಸೋಂಕು ತಗುಲಿರುವ ಶಂಕೆ
  • ಐಸೋಲೇಟೆಡ್​ ವಾರ್ಡ್​​ನಲ್ಲಿ ಚಿಕಿತ್ಸೆ ಮುಂದುವರಿಕೆ

19:06 March 24

ಅಧಿಕೃತ ಮಾಹಿತಿ

  • ರಾಜ್ಯದಲ್ಲಿ 41ಕ್ಕೆ ಏರಿದ ಕೊರೊನಾ ಸೋಂಕಿತರ ಸಂಖ್ಯೆ
  • ಇಂದು ಒಂದೇ ದಿನ 8 ಮಂದಿಗೆ ಪಾಸಿಟಿವ್​ ಪ್ರಕರಣಗಳು
  • ವಿವಿಧ ಆಸ್ಪತ್ರೆಗಳಲ್ಲಿ 48 ಶಂಕಿತರು ಚಿಕಿತ್ಸೆ
  • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ
  • ಮೂವರು ಆಸ್ಪತ್ರೆಯಿಂದ ಡಿಸ್ಚಾರ್ಜ್​​

19:02 March 24

ವಾರ್​ ರೂಮ್​ಗೆ ಬಂದ ಬಿಎಸ್​​ವೈ

  • ಕೊರೊನಾ ವೈರಸ್​​ ತಡೆಗಟ್ಟಲು ಬಿಬಿಎಂಪಿ ಸ್ಥಾಪಿಸಿರುವ ವಾರ್ ರೂಮ್​​ಗೆ ಭೇಟಿ ನೀಡಿದ ಸಿಎಂ ಬಿ.ಎಸ್​.ಯಡಿಯೂರಪ್ಪ
  • ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್ ಅಶೋಕ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಡಿ ಸುಧಾಕರ್ ಇದ್ದರು

17:42 March 24

  • ಚಿತ್ರದುರ್ಗ ಜಿಲ್ಲೆಯಲ್ಲಿ 37 ವರ್ಷದ ಮಹಿಳೆಗೆ ಕೊರೊನಾ ಪಾಸಿಟಿವ್
  • ಚಿತ್ರದುರ್ಗ‌ ತಾಲೂಕಿನ ಭೀಮಸಮುದ್ರ ಗ್ರಾಮದ ಮಹಿಳೆ
  • ಗಯಾನಾ ದೇಶದಿಂದ ಬಂದಿದ್ದ ಮಹಿಳೆ
  • ದಾವಣಗೆರೆ ನಗರದ ಖಾಸಗಿ ಆಸ್ಪತ್ರೆಗೆ ಮಹಿಳೆಯನ್ನು ಶಿಫ್ಟ್​ ಮಾಡಲು ಸಿದ್ಧತೆ

17:19 March 24

ಹಬ್ಬವನ್ನು ಸರಳವಾಗಿ ಆಚರಿಸಿ, ಲಾಕ್​ಡೌನ್​ ಉಲ್ಲಂಘಿಸಿದರೆ ಮುಲಾಜಿಲ್ಲದೆ ಕ್ರಮ-ಸಿಎಂ ಎಚ್ಚರಿಕೆ

  • 12029 ಮಂದಿ ಸೋಂಕು ಶಂಕಿತರು ಇದ್ದಾರೆ
  • 1477 ಮಂದಿಗೆ ರಕ್ತ ಮತ್ತು ಗಂಟಲು ದ್ರವ ಪರೀಕ್ಷಾ ಮಾಡಲಾಗಿದೆ
  • 127609 ಮಂದಿ ಬೆಂಗಳೂರು, ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದವರ ಸಂಖ್ಯೆ
  • 123 ಮಂದಿ ಐಸಲೋಷನ್​ ವಾರ್ಡ್​​​​ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ
  • ರಾಜ್ಯದಲ್ಲಿ ಹೆಚ್ಚು ನಿರ್ಬಂಧ ಮಾಡಲಾಗಿದೆ-ಬಿಎಸ್​ವೈ ಮಾಹಿತಿ
  • ದಿನಾಲೂ ಪೀಡಿತರ, ಶಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ
  • ಕೊರೊನಾ ಓಡಿಸಲು ಎಲ್ಲರೂ ಒಗ್ಗಟ್ಟಾಗಬೇಕು
  • ಯುಗಾದಿ ಹಬ್ಬವನ್ನು ‘ಸರಳವಾಗಿ ಆಚರಿಸಬೇಕು: ಸಿಎಂ ಎಚ್ಚರಿಕೆ
  • ಲಾಕ್​ಡೌನ್​ ಮಾಡಿದ್ದರೂ ಜನ ಮನೆಯಿಂದ ಹೊರ ಬಂದಿದ್ದಾರೆ
  • ನಾಳೆಯಿಂದ ಲಾಕ್​ಡೌನ್​ಗೆ ಮತ್ತಷ್ಟು ಬಿಗಿ ಕ್ರಮ
  • ಲಾಕ್​ಡೌನ್​ ಉಲ್ಲಂಘನೆ ಮಾಡಿದರೆ ಖಂಡಿತ ಕಠಿಣ ಕ್ರಮ ಕೈಗೊಳ್ಳುತ್ತೇವೆ-ಯಡಿಯೂರಪ್ಪ ಎಚ್ಚರಿಕೆ
  • ದೇಶದಲ್ಲಿ ಕೊರೊನಾ ಸಂಖ್ಯೆ ಪೀಡಿತರ ಸಂಖ್ಯೆಯಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ
  • ಬೆಂಗಳೂರಿಗೆ ಬರುವವರಿದ್ದರೆ, ಇಂದು ರಾತ್ರಿಯೇ ಬರಲಿ. ಹೋಗುವವರು ಇಂದು ರಾತ್ರಿಯೇ ಹೋಗಲಿ
  • ನಾಳೆಯಿಂದ ಯಾರೂ ಎಲ್ಲೂ ಹೋಗುವ ಆಗಿಲ್ಲ-ಸಿಎಂ ಖಡಕ್​ ಎಚ್ಚರಿಕೆ

17:10 March 24

ವೆನ್​ಲಾಕ್​​ ಆಸ್ಪತ್ರೆಗೆ ದಾಖಲಾದ ಸೋಂಕಿತರು

  • ಸ್ಕ್ರೀನಿಂಗ್​ ಬಳಿಕ ವೆನ್​ಲಾಕ್​​ ಆಸ್ಪತ್ರೆಗೆ ದಾಖಲಾದ ಸೋಂಕಿತರು
  • ಮಾರ್ಚ್​​ 20ರಂದು ಮುಂಜಾನೆ 5.30ಕ್ಕೆ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿದ್ದ ಪೀಡಿತರು
  • ಕೊಲ್ಕತ್ತಾದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ 70 ವರ್ಷದ ವ್ಯಕ್ತಿ
  • ಕಾಸರಗೋಡು ಮೂಲದ ಮತ್ತೊಬ್ಬ ವ್ಯಕ್ತಿ
  • ಎಲ್ಲರೂ ಕೇರಳದ ಮೂಲದವರು ಎಂದು ತಿಳಿದು ಬಂದಿದೆ

16:59 March 24

43 ಮಂದಿಗೆ ಕೊರೊನಾ ಸೋಂಕು

  • ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರುತ್ತಿದೆ ಕೊರೊನಾ ಸೋಂಕು
  • 43ಕ್ಕೆ ಏರಿದ ಪೀಡಿತರ ಸಂಖ್ಯೆ
  • ಒಂದು ಒಂದೇ ದಿನ 6 ಮಂದಿಗೆ ಸೋಂಕು
  • ಮಂಗಳೂರಿನಲ್ಲೇ ತಗುಲಿದೆ ನಾಲ್ವರಿಗೆ ಸೋಂಕು
  • ಮಂಗಳೂರಿನಲ್ಲಿರುವ ಕೇರಳದವರಿಗೆ ಕೊರೊನಾ ಸೋಂಕು

16:47 March 24

ಲಕ್ಷ ಜನರಿಗೆ ಕೊರೊನಾ ಸೋಂಕು ಸಾಧ್ಯತೆ?: ಡಿಸಿಎಂ ಹೇಳಿಕೆ

  • ಒಂದು ಲಕ್ಷ ಜನರಿಗೆ ಕೊರೊನಾ ಸೋಂಕಿನ ಅಂದಾಜು
  • 9 ಜಿಲ್ಲೆಗಳಲ್ಲಿ ಕೊರೊನಾ ಪೀಡಿತರಿಗೆ ಆಸ್ಪತ್ರೆ
  • ಜಿಲ್ಲಾ ಮಟ್ಟದಲ್ಲಿ ಡಿಸಿ ನೇತೃತ್ವದಲ್ಲಿ ಟಾಸ್ಕ್​ ಪೋರ್ಸ್​​ ರಚನೆ
  • ವಿಧಾನ ಪರಿಷತ್​​ನಲ್ಲಿ ಡಿಸಿಎಂ ಅಶ್ವತ್ಥ್​ ನಾರಾಯಣ್​ ಹೇಳಿಕೆ
  • ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ವಿಕ್ಟೋರಿಯಾದಲ್ಲಿ 1700 ಬೆಡ್​​
  • 20 ಸಾವಿರ ಹೋಟೆಲ್​​​ಗಳಲ್ಲಿ ಕ್ವಾರಂಟೈನ್​​ ನಿರ್ಮಾಣಕ್ಕೆ ಸಜ್ಜು

16:42 March 24

ವೈದ್ಯಕೀಯ ಶಿಕ್ಷಣ ಸುಧಾಕರ್​ಗೆ ಸಂಪೂರ್ಣ ಜವಾಬ್ದಾರಿ

  • ಇಂದು ಐವರಲ್ಲಿ ಕೊರೊನಾ ಸೋಂಕು ಪತ್ತೆ
  • ಕರ್ನಾಟಕದಲ್ಲಿ 38ಕ್ಕೆ ಏರಿದ ಕೊರೊನಾ ಸೋಂಕು ಪೀಡಿತರ ಸಂಖ್ಯೆ
  • ಸಚಿವ ರಾಮುಲು ಬಳಿ ಇದ್ದ ಜವಾಬ್ದಾರಿಯನ್ನು ಸುಧಾಕರ್​ಗೆ ವರ್ಗಾವಣೆ
  • ಆರೋಗ್ಯ ಇಲಾಖೆ ಅಡಿ ಇದ್ದ ಜವಾಬ್ದಾರಿ ವೈದ್ಯಕೀಯ ಶಿಕ್ಷಣ ಇಲಾಖೆಗೆ ವರ್ಗಾವಣೆ
  • ವೈದ್ಯಕೀಯ ಶಿಕ್ಷಣ ಡಾ.ಸುಧಾಕರ್​ಗೆ ಕೊರೊನಾಗೆ ಸಂಬಂಧಿಸಿದ ಉಸ್ತುವಾರಿ
  • ಸುತ್ತೋಲೆ ಹೊರಡಿಸಿದ ಆದೇಶಿಸಿದ ಸರ್ಕಾರ
  • ಕೋವಿಡ್​​ 19ಕ್ಕೆ ಸಂಬಂಧಿಸಿದಂತೆ ಒಬ್ಬರಿಗೆ ಉಸ್ತುವಾರಿ ವಹಿಸುವುದು ಸರ್ಕಾರದ ಉದ್ದೇಶ

16:11 March 24

ರಾಜ್ಯದಲ್ಲಿ ಮತ್ತೆ ಕೋವಿಡ್​-19ರ ಸೋಂಕು ಹೆಚ್ಚಳ

ಚಿಕ್ಕಬಳ್ಳಾಪುರ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರ ತವರು ಜಿಲ್ಲೆಯಲ್ಲಿ ಮೂವರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿ ಮೂವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ತಾಯಿ ಹಾಗೂ ಸಹೋದರನ ಜೊತೆ ಮೆಕ್ಕಾಗೆ ತೆರಳಿದ್ದ ಮಹಿಳೆಗೆ ಸೋಂಕು ತಗುಲಿದೆ.

Last Updated : Mar 24, 2020, 8:01 PM IST

ABOUT THE AUTHOR

...view details