ಕರ್ನಾಟಕ

karnataka

ETV Bharat / state

ಬೆಂಗಳೂರು ರೈಲ್ವೆ ನಿಲ್ದಾಣ ಸಿಬ್ಬಂದಿಗೆ ಕೊರೊನಾ: ಆತಂಕದಲ್ಲಿ ಸಹೋದ್ಯೋಗಿಗಳು! - Bangalore corona news

ರೈಲ್ವೆ ಸಿಬ್ಬಂದಿಗೆ ಕೊರೊನಾ‌ ಸೋಂಕು ತಗುಲಿದ್ದು, ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯಲ್ಲಿ ಆತಂಕ ಮೂಡಿಸಿದೆ.

ರೈಲ್ವೆ ಇಲಾಖೆಗೂ ಕಾಲಿಟ್ಟ ಕೊರೊನಾ
ರೈಲ್ವೆ ಇಲಾಖೆಗೂ ಕಾಲಿಟ್ಟ ಕೊರೊನಾ

By

Published : Jun 19, 2020, 4:20 PM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ತಲ್ಲಣ ಸೃಷ್ಟಿಸಿದ್ದು, ಸದ್ಯ ಸಾಮಾನ್ಯ ದಿನಗಳಿಗೆ ಮರಳಲು ಸಾಕಷ್ಟು ಸಮಯಾವಕಾಶ ಬೇಕಿದೆ. ಇದರ ನಡುವೆ ದಿನೇ ದಿನೆ ಕೊರೊನಾ‌ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಇದೀಗ ರೈಲ್ವೆ ಸಿಬ್ಬಂದಿಗೂ ಕೊರೊನಾ‌ ಪಾಸಿಟಿವ್ ಬಂದಿದೆ.

ಸೋಂಕು ಹೇಗೆ ತಗುಲಿದೆ ಎಂಬ ಬಗ್ಗೆ ಪತ್ತೆ ಕಾರ್ಯ ಮುಂದುವರೆದಿದ್ದು, ಟ್ರಾವೆಲ್ ಹಿಸ್ಟರಿ ಆತಂಕ ಮೂಡಿಸಿದೆ. ಯಾಕೆಂದರೆ ಕಳೆದ ಮೂರು ದಿನದ ಹಿಂದಷ್ಟೇ ಹೆಬ್ಬಾಳ ರೈಲ್ವೆ ನಿಲ್ದಾಣದಿಂದ ಮೆಜೆಸ್ಟಿಕ್ ರೈಲ್ವೆ ಸ್ಟೇಷನ್​ನಲ್ಲಿರುವ ಡಿಆರ್​ಎಂ ಕಚೇರಿಗೆ‌ ಬಂದು ಹೋಗಿದ್ದಾರೆ. ಸದ್ಯ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯಲ್ಲೂ ಆತಂಕ ಮೂಡಿದ್ದು, ಭಯದಲ್ಲೇ ಕಚೇರಿಗೆ ಆಗಮಿಸುತ್ತಿದ್ದಾರೆ.

‌‌ಇತ್ತ ಪಾಸಿಟಿವ್ ಬಂದಿದ್ದ ಸಿಬ್ಬಂದಿ ಕಚೇರಿಗೆ ಬಂದು ಹೋಗಿರುವ‌ ಹಿನ್ನೆಲೆ ಸಂಪೂರ್ಣ ಸ್ಯಾನಿಟೈಸ್​​​ ಮಾಡಲಾಗಿದೆ. ಇವರ ಸಂಪರ್ಕದಲ್ಲಿದ್ದವರ ಹುಡುಕಾಟ ಮುಂದುವರೆದಿದೆ.

ಬೆಂಗಳೂರಿನಲ್ಲಿ ಕೊರೊನಾಗೆ ಮತ್ತೆ ಮೂವರು ಬಲಿ:

ಕೊರೊನಾ‌ ಮಹಾಮಾರಿ ಮತ್ತೆ ಮೂವರನ್ನು ಬಲಿ ಪಡೆದಿದೆ. ಜೆಪಿ ನಗರದ ನಿವಾಸಿಗೆ ರಾತ್ರಿ ಕೊರೊನಾ ಪಾಸಿಟಿವ್ ಬಂದಿದ್ದು, ಬೆಳಗ್ಗೆ ಸಾವನ್ನಪ್ಪಿದ್ದಾರೆ. ಶಾಮಣ್ಣ ಗಾರ್ಡನ್, ಕತ್ರಿಗುಪ್ಪೆಯಲ್ಲಿ ತಲಾ ಒಂದೊಂದು ಸಾವು ವರದಿಯಾಗಿದೆ. ಬೆಂಗಳೂರು ದಕ್ಷಿಣ ಭಾಗದಲ್ಲಿ ಇದುವರೆಗೆ 16 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

ABOUT THE AUTHOR

...view details