ಕರ್ನಾಟಕ

karnataka

ETV Bharat / state

ಕೆಎಸ್​ಆರ್​ಪಿ‌ ತುಕಡಿಯಲ್ಲಿ ಮತ್ತೆ ಕಾಣಿಸಿಕೊಂಡ ಕೊರೊನಾ ಸೋಂಕು : ಓರ್ವ ಸಿಬ್ಬಂದಿ ಸಾವು - Bangaluru latest news

ಕೆಎಸ್​ಆರ್​ಪಿ‌ ತುಕಡಿಯಲ್ಲಿ ಮತ್ತೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಮಹಾಮಾರಿಗೆ ಇಂದು ಓರ್ವ ಸಿಬ್ಬಂದಿ ಬಲಿಯಾಗಿದ್ದಾರೆ. ಸಿಬ್ಬಂದಿ ಸಾವಿಗೆ ಕೆಎಸ್​ಆರ್​ಪಿ ಎಡಿಜಿಪಿ ಅಲೋಕ್ ಕುಮಾರ್ ಸಂತಾಪ ಸೂಚಿಸಿದ್ದಾರೆ.

Corona infection in KSRP brigade
ಸಂಗ್ರಹ ಚಿತ್ರ

By

Published : Aug 4, 2020, 7:06 PM IST

ಬೆಂಗಳೂರು:ಕೊರೊನಾ ವಾರಿಯರ್ ಆಗಿ ಕೆಲಸ ಮಾಡುತ್ತಿರುವ ಕೆಎಸ್​ಆರ್​ಪಿ ತುಕಡಿ ಸಿಬ್ಬಂದಿಯನ್ನ ಕೊರೊನಾ ಬೆಂಬಿಡದೆ ಕಾಡುತ್ತಿದೆ. ಸದ್ಯ ಕೊರೊನಾ ಸೋಂಕು ದೃಢಪಟ್ಟಿರುವ ಒಂದನೇ ಕೆಎಸ್​ಆರ್​ಪಿ ಬೆಟಾಲಿಯನ್ ಇಂದು ತೀವ್ರ ಉಸಿರಾಟದ ತೊಂದರೆಯಿಂದ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಸಿಬ್ಬಂದಿ ಸಾವಿಗೆ ಕೆಎಸ್​ಆರ್​ಪಿ ಎಡಿಜಿಪಿ ಅಲೋಕ್ ಕುಮಾರ್ ಸಂತಾಪ ಸೂಚಿಸಿದ್ದಾರೆ. ಹಾಗೆ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ. ಇನ್ನು ಕೆಎಸ್​ಆರ್​ಪಿ ಸಿಬ್ಬಂದಿಯಲ್ಲಿ ಅಧಿಕಾವಾಗಿ ಕೊರೊನಾ ಸೋಂಕು ದಿನೇ ದಿನೆ ಹೆಚ್ಚುತ್ತಿದೆ. ಹಾಗೆ ಇಂದು ಮೂರನೇ ಮತ್ತು ನಾಲ್ಕನೇ ಬೆಟಾಲಿಯನ್ ಸಿಬ್ಬಂದಿಯಲ್ಲಿ ಒಟ್ಟು ಐವರಲ್ಲಿ ಕೊರೊನಾ ಸೋಂಕು ಧೃಢವಾಗಿದೆ. ಸದ್ಯ ಸಂಬಂಧಿಸಿದ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಇವರ ಜೊತೆ ಸಂಪರ್ಕದಲ್ಲಿರುವವರನ್ನು ಹೋಂ ಐಸೋಲೇಷನ್ ಇರುವಂತೆ ಸೂಚಿಸಲಾಗಿದೆ.

ABOUT THE AUTHOR

...view details