ಬೆಂಗಳೂರು: ಕೊರೊನಾ ಭೀತಿಯಿಂದ ಜನರು ಮನೆಯಿಂದ ಹೊರ ಬರದ ಕಾರಣ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 5.30 ಕೋಟಿ ರೂಪಾಯಿ ನಷ್ಟವಾಗಿದೆ.
ಕೊರೊನಾ ಎಫೆಕ್ಟ್: ರಾಜ್ಯ ಸಾರಿಗೆ ಇಲಾಖೆಗೆ 5.30 ಕೋಟಿ ನಷ್ಟ! - Corona Effect losse to Transport department
ಕೊರೊನಾ ಭೀತಿಯಿಂದ ಪ್ರಯಾಣಿಕರ ಸಂಖ್ಯೆ ಕುಸಿದ ಪರಿಣಾಮ ರಾಜ್ಯ ಸಾರಿಗೆ ಸಂಸ್ಥೆಗೆ ಕೋಟ್ಯಂತರ ರೂ. ನಷ್ಟ ಉಂಟಾಗಿದೆ. ಈಗಾಗಲೇ ಇಲಾಖೆಯಿಂದ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಬಸ್ಗಳಲ್ಲಿ ಮುಂಜಾಗ್ರತಾ ಕ್ರಮ ವಹಿಸಲಾಗಿದೆ.
![ಕೊರೊನಾ ಎಫೆಕ್ಟ್: ರಾಜ್ಯ ಸಾರಿಗೆ ಇಲಾಖೆಗೆ 5.30 ಕೋಟಿ ನಷ್ಟ! Corona Effect losse to Transport department](https://etvbharatimages.akamaized.net/etvbharat/prod-images/768-512-6445803-thumbnail-3x2-hrss.jpg)
ಈಗಾಗಲೇ ನಿಗಮದ ಸಿಬ್ಬಂದಿಗೆ ಮಾಸ್ಕ್ ಮತ್ತು ಬಸ್ಗಳಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಲು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಸೂಚಿಸಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ಒಟ್ಟು 818 ಮಾರ್ಗಗಳ ಬಸ್ಗಳನ್ನು ರದ್ದು ಮಾಡಲಾಗಿದೆ. ಈ ಹಿಂದೆ ಪ್ರತಿದಿನ 22ರಿಂದ 23 ಸಾವಿರ ಇದ್ದ ಆನ್ಲೈನ್ ಟಿಕೆಟ್ ಬುಕ್ಕಿಂಗ್ 5,500ಕ್ಕೆ ಕುಸಿದಿದೆ. ಇನ್ನು ಬಸ್ಗಳಲ್ಲಿ ಸ್ಯಾನಿಟೈಸರ್ ಮತ್ತು ಇತರೆ ಅವಶ್ಯಕ ಸಾಮಾಗ್ರಿಗಳನ್ನು ಕಡ್ಡಾಯವಾಗಿ ಇಡಲು ಸೂಚಿಸಲಾಗಿದೆ. ಇನ್ನು ನಿಗಮದ ಪ್ರತಿಷ್ಠಿತ ವಾಹನಗಳಲ್ಲಿ ನೀಡಲಾಗುತ್ತಿರುವ ಬ್ಲಾಂಕೆಟ್, ಬೆಡ್ ಸ್ಪ್ರೆಡ್ಗಳನ್ನು ರದ್ದುಗೊಳಿಸಲಾಗಿದೆ. ಅಲ್ಲದೆ ಅವುಗಳನ್ನು ಪ್ರಯಾಣಿಕರಿಗೆ ತರುವಂತೆ ಸೂಚಿಸಲಾಗಿದೆ.