ಬೆಂಗಳೂರು:ಜೆಪಿ ನಗರದ ರಾಗಿಗುಡ್ಡ ಸಮೀಪವಿರುವ ಸ್ಲಂನಲ್ಲಿದ್ದ ಇಬ್ಬರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಅವರು ಇತ್ತೀಚೆಗೆ ದೆಹಲಿಯಿಂದ ವಾಪಸಾಗಿದ್ದರು ಎಂದು ತಿಳಿದುಬಂದಿದೆ.
ಬೆಂಗಳೂರಿನ ಮತ್ತೊಂದು ಸ್ಲಂನಲ್ಲಿ ಕೊರೊನಾ ದೃಢ... ವರದಿ ಬರುವ ಮುನ್ನವೇ ಮನೆ ಸೇರಿದ್ದ ಸೋಂಕಿತರು - Corona in Bengaluru
ಬೆಂಗಳೂರಿನ ಕೊಳಗೇರಿಯಲ್ಲಿ ವರದಿ ಬರುವ ಮುನ್ನವೇ ಈ ಇಬ್ಬರು ತಮ್ಮ ಮನೆಗೆ ತೆರಳಿದ್ದರು. ಇದೀಗ ಅವರ ವರದಿ ಕೊರೊನಾ ಪಾಸಿಟಿವ್ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
![ಬೆಂಗಳೂರಿನ ಮತ್ತೊಂದು ಸ್ಲಂನಲ್ಲಿ ಕೊರೊನಾ ದೃಢ... ವರದಿ ಬರುವ ಮುನ್ನವೇ ಮನೆ ಸೇರಿದ್ದ ಸೋಂಕಿತರು Corona](https://etvbharatimages.akamaized.net/etvbharat/prod-images/768-512-7472558-859-7472558-1591264248688.jpg)
ದೆಹಲಿಯಿಂದ ರೈಲಿನ ಮೂಲಕ ಬಂದ ತಾಯಿ ಹಾಗೂ ಮಗನನ್ನು ಹೆಬ್ಬಾಳದ ಹಾಸ್ಟೆಲ್ ನಲ್ಲಿ ಏಳು ದಿನ ಕ್ವಾರಂಟೈನ್ ಮಾಡಲಾಗಿತ್ತು. ಕ್ವಾರಂಟೈನ್ ಅವಧಿ ಮುಗಿಯುವ ವೇಳೆಗೆ ಕೊರೊನಾ ಸೋಂಕು ಪರೀಕ್ಷೆ ನಡೆಸಲಾಗಿದ್ದು, ವರದಿ ಬರುವ ಮುನ್ನವೇ ಈ ಇಬ್ಬರು ತಮ್ಮ ಮನೆಗೆ ತೆರಳಿದ್ದರು. ಇದೀಗ ವರದಿಯಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದ್ದು, ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ದೆಹಲಿಯಿಂದ ಬಂದ ತಾಯಿ ಮತ್ತು ಮಗ ಕ್ವಾರಂಟೈನ್ನಲ್ಲಿ ಇರುವ ವೇಳೆ ಸೋಂಕಿನ ಲಕ್ಷಣಗಳು ಇರಲಿಲ್ಲ, ಆದರೆ ವರದಿ ಬಂದ ನಂತರ ಕೊರೊನಾ ಇರುವುದು ಧೃಢವಾಗಿದೆ. ಆದ್ದರಿಂದ ಈ ಇಬ್ಬರನ್ನೂ ಕೂಡಲೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದಕ್ಷಿಣ ವಲಯದ ಬಿಬಿಎಂಪಿ ಆರೋಗ್ಯ ಅಧಿಕಾರಿ ಡಾ. ಶಿವಕುಮಾರ್ ಈಟಿವಿ ಭಾರತ್ಗೆ ತಿಳಿಸಿದ್ದಾರೆ.