ಕರ್ನಾಟಕ

karnataka

ETV Bharat / state

ಚಿನ್ನದಲ್ಲಿ ಅರಳಿದ ತಾಜ್ ಮಹಲ್ : ಈ ತಾಜ್​​ನಲ್ಲಿದೆ ಡಾ. ರಾಜಕುಮಾರ್, ಮೋದಿ ಹೆಸರು

ಕೊರೊನಾ ವೈರಸ್​​ನಿಂದ ಇಡೀ ದೇಶವನ್ನು ಲಾಕ್​ಡೌನ್ ಮಾಡಲಾಗಿದೆ. ಈ ವೇಳೆ, ಅಕ್ಕಸಾಲಿಗ ನಾಗರಾಜ್​ ಎಂಬುವರು, ಚಿನ್ನದ ತಾಜ್ ಮಹಲ್​​ ನಿರ್ಮಿಸಿದ್ದಾರೆ.

By

Published : May 20, 2020, 6:53 PM IST

Updated : May 20, 2020, 8:57 PM IST

ಲಾಕ್​ಡೌನ್​ನಲ್ಲಿ ಸುವರ್ಣ ತಾಜ್ ಮಹಲ್ ನಿರ್ಮಾಣ
ಲಾಕ್​ಡೌನ್​ನಲ್ಲಿ ಸುವರ್ಣ ತಾಜ್ ಮಹಲ್ ನಿರ್ಮಾಣ

ಬೆಂಗಳೂರು:ಲಾಕ್​​ಡೌನ್ ಬಿಡುವಿನಲ್ಲಿ ಸತತ 20 ದಿನದಲ್ಲಿ 16.990 ಗ್ರಾಂ ತೂಕದ ಚಿನ್ನದ ತಾಜ್ ಮಹಲ್​​ನನ್ನು ಅಕ್ಕಸಾಲಿಗ ನಾಗರಾಜ್ ತಯಾರಿಸಿದ್ದಾರೆ.

ಸುವರ್ಣ ತಾಜ್​​ ಮಹಲ್​​ನಲ್ಲಿ ಐ ಲವ್ ಇಂಡಿಯಾ, ಕರ್ನಾಟಕ ರತ್ನ ಡಾ. ರಾಜಕುಮರ್ ಜೊತೆಗೆ ಐ ಲವ್ ಮೋದಿ ಜೀ ಎಂದು ಕೆತ್ತಿದ್ದಾರೆ.

ಚಿನ್ನದಲ್ಲಿ ಅರಳಿದ ತಾಜ್ ಮಹಲ್

ಕೊರೊನಾ ವೈರಸ್​​ನಿಂದ ಇಡೀ ದೇಶವನ್ನು ಲಾಕ್​ಡೌನ್ ಮಾಡಲಾಗಿತ್ತು. ಈ ವೇಳೆ ಚಿನ್ನದ ತಾಜ್ ಮಹಲ್ ತಯಾರಿಸಿದ್ದೇನೆ, 16.990 ಗ್ರಾಂ ತೂಕ, 4 ಸೆಂ.ಮೀಟರ್ ಉದ್ದ ಹಾಗೂ 3.5 ಸೆಂ.ಮೀಟರ್ ಎತ್ತರ ಇದೆ ಎಂದು ಅಕ್ಕಸಾಲಿಗ ನಾಗರಾಜ್​ ಹೇಳಿದ್ದಾರೆ.

ಈ ಹಿಂದೆ ನಾಗರಾಜ್ ವಿಶ್ವ ಕಪ್, ಚಂದ್ರಯಾನದ ಪ್ರತಿರೂಪವನ್ನು ಚಿನ್ನದಲ್ಲಿ ತಯಾರಿಸಿದ್ದರು. ಈಗ ತಾಜ್ ಮಹಲ್ ಇವರ 3ನೇ ಕಲೆಯಾಗಿದೆ.

Last Updated : May 20, 2020, 8:57 PM IST

ABOUT THE AUTHOR

...view details