ಬೆಂಗಳೂರು: ತಾಲಿಬಾನಿ ಬಿಜೆಪಿಯ ಭಯೋತ್ಪಾದಕ ಯಾತ್ರೆಯಲ್ಲಿ ಗುಂಡು ಹಾರಿಸಿದ ಪ್ರಕರಣದಲ್ಲಿ ಭಗವಂತ್ ಖೂಬಾ, ಬಾಬುರಾವ್ ಚಿಂಚನಸೂರ್ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷರ ಮೇಲೆ ಕೇಸ್ ದಾಖಲಿಸಿ ಬಂಧಿಸಬೇಕು ಎಂದು ರಾಜ್ಯ ಕಾಂಗ್ರೆಸ್ ಘಟಕ ಆಗ್ರಹಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಗುಂಡು ಹಾರಿಸಿದ ಪ್ರಕರಣದಲ್ಲಿ ಭಗವಂತ್ ಖೂಬಾ, ಬಾಬುರಾವ್ ಚಿಂಚನಸೂರ್ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷರ ಮೇಲೆ ಕೇಸ್ ದಾಖಲಿಸಿ ಬಂಧಿಸಬೇಕು. ಇವರೇ ಈ ಪ್ರಕರಣದ ಹೊಣೆಗಾರರು. ಬಿಜೆಪಿ ಪಕ್ಷ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹಿಸಿರುವ ಶಂಕೆ ಇದ್ದು, ಪೊಲೀಸರು ಬಿಜೆಪಿ ಕಚೇರಿಗಳನ್ನು ಶೋಧಿಸಬೇಕು ಎಂದು ಒತ್ತಾಯಿಸಿದೆ.