ಕರ್ನಾಟಕ

karnataka

By

Published : Feb 18, 2023, 1:23 PM IST

ETV Bharat / state

ಬಸವನಗುಡಿಯಿಂದ ಎಂಎಲ್​​ಸಿ ಯು.ಬಿ. ವೆಂಕಟೇಶ್​ಗೆ ಟಿಕೆಟ್ ಫೈನಲ್!?

ಬಸವನಗುಡಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಯು.ಬಿ. ವೆಂಕಟೇಶ್​ಗೆ​ ನೀಡಿದರಾ ಕಾಂಗ್ರೆಸ್​ ನಾಯಕರು - ಡಾ.ಶಂಕರ್ ಗುಹಾರರವರಿಗೆ ಮುಂದಿನ ಅವಧಿಗೆ ಅವಕಾಶ ನೀಡುವ ಭರವಸೆ.

Congress leaders
ಕಾಂಗ್ರೆಸ್​ ನಾಯಕರು

ಬೆಂಗಳೂರು:ಬಸವನಗುಡಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಗೊಂದಲವನ್ನು ಕೈ ನಾಯಕರು ಬಗೆಹರಿಸಿದ್ದಾರೆ. ನಿನ್ನೆ ನಗರದ ಖಾಸಗಿ ಹೋಟೆಲ್​ನಲ್ಲಿ ಹಮ್ಮಿಕೊಂಡಿದ್ದ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಸವನಗುಡಿ ಕ್ಷೇತ್ರದಲ್ಲಿ ಬಹುತೇಕ ಯುಬಿ ವೆಂಕಟೇಶ್ ಗೆ ಟಿಕೇಟ್ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಇಲ್ಲಿಂದ ಟಿಕೇಟ್ ಗೆ ಭಾರಿ ಪೈಪೋಟಿ ನೀಡಿದ್ದ ಡಾ.ಶಂಕರ್ ಗುಹಾರನ್ನು ಮನವೊಲಿಸುವಲ್ಲಿ ರಾಜ್ಯ ನಾಯಕರು ಸಫಲರಾಗಿದ್ದಾರೆ ಎಂಬ ಮಾಹಿತಿ ಇದೆ.

ನಿನ್ನೆಯ ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಉಬಯ ನಾಯಕರನ್ನೂ ಸಭೆಗೆ ಆಹ್ವಾನಿಸಿ ಮನವೊಲಿಸುವ ಯತ್ನ ಮಾಡಿದ್ದಾರೆ. ಈಗಾಗಲೇ ಬಸವನಗುಡಿ ವ್ಯಾಪ್ತಿಯಲ್ಲಿ ಹಲವು ಸಾಮಾಜಿಕ ಸೇವೆ ಸಲ್ಲಿಸಿರುವ ಯು.ಬಿ. ವೆಂಕಟೇಶ್ ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್​ನಲ್ಲಿ ಹಣ ಕಳೆದುಕೊಂಡ ಗ್ರಾಹಕರ ಪರವಾಗಿ ಹೋರಾಡುತ್ತಿದ್ದಾರೆ. ಬಹುತೇಕ ಬ್ರಾಹ್ಮಣ ಸಮುದಾಯದವರೇ ಈ ಬ್ಯಾಂಕ್ ನಿಂದ ವಂಚನೆಗೆ ಒಳಗಾಗಿದ್ದು, ಇವರ ಪರ ದನಿ ಎತ್ತಿ ವೆಂಕಟೇಶ್ ಹಲವರ ಹೃದಯ ಗೆದ್ದಿದ್ದಾರೆ ಎಂಬ ಮಾತಿದೆ.

ಶಂಕರ್ ಗುಹಾ ಸಹ ಸ್ಥಳೀಯವಾಗಿ ಒಂದಿಷ್ಟು ಜನಪ್ರಿಯತೆ ಹೊಂದಿದವರು, ಕೋವಿಡ್ ಸಂದರ್ಭದಲ್ಲಿ ಆಹಾರ ಕಿಟ್ ವಿತರಿಸಿದ್ದರು. ಟಿಕೆಟ್ ಇವರಿಗೆ ಸಿಗಲಿದೆ ಎಂಬ ಮಾತು ಬಲವಾಗಿ ಕೇಳಿಬಂದಿತ್ತು. ತಂದೆ ರಾಮಚಂದ್ರ ಗುಹಾ ಅವರ ಜನಪ್ರಿಯತೆ ಹಾಗೂ ಪ್ರಭಾವದ ಜತೆಗೆ ಶಂಕರ್ ಸಹ ತಮ್ಮದೇ ಆದ ವರ್ಚಸ್ಸು ಬೆಳೆಸಿಕೊಂಡಿದ್ದರು. ಆದರೆ, ಇವರ ಜನಪ್ರಿಯತೆಯ ಮಟ್ಟ ಮೂರು ಬಾರಿ ಕ್ಷೇತ್ರದಲ್ಲಿ ಗೆದ್ದಿರುವ ಬ್ರಾಹ್ಮಣ ಸಮುದಾಯದವರೇ ಆದ ರವಿ ಸುಬ್ರಹ್ಮಣ್ಯಗೆ ಸಮನಾಗಿಲ್ಲ ಎನ್ನುವುದನ್ನು ಅರಿತ ಕಾಂಗ್ರೆಸ್ ನಾಯಕರು ಯು.ಬಿ. ವೆಂಕಟೇಶ್​ಗೆ ಮಣೆ ಹಾಕಲು ಮುಂದಾಗಿದ್ದಾರೆ. ಯುವಕರಾಗಿರುವ ಶಂಕರ್​ಗೆ ಮುಂದಿನ ಅವಧಿಗೆ ಅವಕಾಶ ನೀಡುವ ಭರವಸೆ ಕೊಡಲಾಗಿದೆಯಂತೆ.

ಯುಬಿ ವೆಂಕಟೇಶ್ ಗೆ ಈ ಬಾರಿ ಅವಕಾಶ ನೀಡುವುದಾಗಿ ನಿರ್ಧಾರ ಮಾಡಿದ್ದು, ಡಾ.ಶಂಕರ್ ಗುಹಾಗೆ ಬೆನ್ನು ತಟ್ಟಿ ಮುಂದೆ ಅವಕಾಶ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ. ಈ ಬಾರಿ ಯುಬಿ ವೆಂಕಟೇಶ್ ಗೆ ಸಹಕಾರ ನೀಡುವಂತೆ ಶಂಕರ್ ಗುಹಾಗೆ ಸೂಚನೆ ನೀಡಲಾಗಿದ್ದು, ಅವರು ಒಪ್ಪಿದ್ದಾರೆ ಎಂಬ ಮಾಹಿತಿ ಇದೆ.

ಇಂದು ಬೃಹತ್ ಪ್ರತಿಭಟನೆ: ಮಾಜಿ ಸಚಿವ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ ನೇತೃತ್ವದಲ್ಲಿ ಇಂದು ಬೃಹತ್ ಪ್ರತಿಭಟನೆ ಕೈಗೊಳ್ಳಲಾಗಿದೆ. ಈಜಿಪುರ ಜಂಕ್ಷನ್ ನಿಂದ ಮಡಿವಾಳ ಕೇಂದ್ರೀಯ ಕೇಂದ್ರೀಯ ಸದನವರಿಗೂ ಮೇಲು ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಕ್ಕಾಗಿ ಹಾಗೂ ಈಜಿಪುರ ಆಗ್ರ ಲಿಂಕ್ ರಸ್ತೆ ಪೂರ್ಣಕ್ಕಾಗಿ ವಿಶೇಷ ಪ್ರತಿಭಟನೆ ಕೈಗೊಳ್ಳಲಾಗುತ್ತಿದೆ. ಆರ್ ಎಂಪಿ -2015 ಅನ್ವಯ ಕಾಮಗಾರಿ ವಿಳಂಬವನ್ನು ಖಂಡಿಸಿ ಪ್ರತಿಭಟನೆ ಮಾಡಲಾಗುತ್ತಿದೆ.

2012 -2013 ಸಾಲಿನಲ್ಲಿ ಕೇಂದ್ರ ಸರ್ಕಾರವು ನರ್ಮ್ ಯೋಜನೆ ಅಡಿ ಯೋಜನೆ ರೂಪಿಸಲಾಗಿ ಕೆಲಸ ಪ್ರಾರಂಭಿಸಲಾಗಿತ್ತು. 2014 ಕೇಂದ್ರ ಸರ್ಕಾರ ನರ್ಮ್ ಯೋಜನೆಯನ್ನು ರದ್ದುಪಡಿಸಿತ್ತು. ಅಂದು ಶಾಸಕರು ಹಾಗೂ ಸಚಿವರಾಗಿದ್ದ ರಾಮಲಿಂಗ ರೆಡ್ಡಿ ಅಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸಿ 2017ರಲ್ಲಿ ಕಾಮಗಾರಿ ಪ್ರಾರಂಭಕ್ಕೆ ಶಂಕುಸ್ಥಾಪನೆಗೊಳಿಸಿ ಈ ಕಾಮಗಾರಿಯನ್ನು ಸಿಂಪ್ಲೆಕ್ಸ್ ಇನ್ಪ್ರಾಸ್ಟ್ರಕ್ಚರ್ ಲಿಮಿಟೆಡ್ ಸಂಸ್ಥೆಗೆ 2019 ಡಿಸೆಂಬರ್ ಒಳಗಾಗಿ ಪೂರ್ಣಗೊಳಿಸಲು ಕಾಮಗಾರಿ ನೀಡಿತ್ತು.

32% ಕಾಮಗಾರಿ ಪ್ರಗತಿಯನ್ನು ಹೊಂದಿತ್ತು, ಅದಾದ ನಂತರ ಬಂದ ಬಿಜೆಪಿ ಸರ್ಕಾರವು ಯಾವುದೇ ರೀತಿಯ ಹಣ ಬಿಡುಗಡೆ ಮಾಡಿಲ್ಲ ಹಾಗೂ ಶಾಸಕರು ರಾಮಲಿಂಗ ರೆಡ್ಡಿ ಅವರು ಎಷ್ಟು ಬಾರಿ ಮುಖ್ಯಮಂತ್ರಿಗಳು ಆಯುಕ್ತರು ಎಲ್ಲ ಅಧಿಕಾರಿಗಳನ್ನು ಭೇಟಿ ಮಾಡಿ ಪತ್ರ ನೀಡಿ ಹಿರಿಯ ಅಧಿಕಾರಿಗಳನ್ನು ಕರೆತಂದು ಕಾಮಗಾರಿ ಪರಿಶೀಲನೆ ನಡೆಸಿದರು ಇಲ್ಲಿವರೆಗೂ ಯಾವುದೇ ರೀತಿಯ ಕಾಮಗಾರಿ ಪ್ರಗತಿ ಆಗಿರುವುದಿಲ್ಲ ಆದುದರಿಂದ ವಿಶೇಷ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಸ್ಥಳೀಯ ನಿವಾಸಿಗಳು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸ್ಥಳೀಯ ರೆಸಿಡೆನ್ಸ್ ವೆಲ್​ಫೇರ್​ ಅಸೋಸಿಯೇಷನ್ ಸದಸ್ಯರುಗಳು ಎಲ್ಲರೂ ಸೇರಿ ವಿಶೇಷ ಪ್ರತಿಭಟನೆ ಕೈಗೊಂಡಿದ್ದಾರೆ.

ಇದನ್ನೂ ಓದಿ:ಆಮರಣಾಂತ ಉಪವಾಸ ಸತ್ಯಾಗ್ರಹ: ರೈತರ ಆರೋಗ್ಯದಲ್ಲಿ ಏರುಪೇರು ಆಸ್ಪತ್ರೆಗೆ ದಾಖಲು

ABOUT THE AUTHOR

...view details