ಕರ್ನಾಟಕ

karnataka

ETV Bharat / state

ಸದನದಲ್ಲಿ ಆಡಳಿತ-ಪ್ರತಿಪಕ್ಷದ ಗದ್ದಲ, ಗುದ್ದಾಟ: ಕುತೂಹಲ ಮೂಡಿಸಿದ ಡಿಕೆಶಿ-ಶ್ರೀರಾಮುಲು ಭೇಟಿ! - ಬೆಂಗಳೂರು

ವಿಶ್ವಾಸಮತಯಾಚನೆ ವೇಳೆ ಬಿಜೆಪಿ-ಆಡಳಿತ ಪಕ್ಷದ ನಡುವೆ ತೀವ್ರ ಗದ್ದಲ ನಡೆಯುತ್ತಿದ್ದು, ಇದರ ಮಧ್ಯೆ ಶ್ರೀರಾಮುಲು-ಡಿಕೆಶಿ ಭೇಟಿಯಾಗಿದ್ದಾರೆ.

ಶ್ರೀರಾಮುಲು-ಡಿಕೆಶಿ ಮಾತು

By

Published : Jul 18, 2019, 2:33 PM IST

Updated : Jul 18, 2019, 2:40 PM IST

ಬೆಂಗಳೂರು:ವಿಧಾನಸಭೆ ಕಲಾಪದಲ್ಲಿ ವಿಶ್ವಾಸಮತ ಯಾಚನೆ ಸಂಬಂಧ ಬೆಳಗ್ಗೆಯಿಂದಲೂ ಚರ್ಚೆ ನಡೆಯುತ್ತಿದ್ದು, ವಿಧಾನಸಭೆ ಕಲಾಪವನ್ನು ಸ್ಪೀಕರ್ ರಮೇಶ್ ಕುಮಾರ್ ಮಧ್ಯಾಹ್ನ 3ಗಂಟೆಗೆ ಕಲಾಪ ಮುಂದೂಡಿದ್ದಾರೆ.

ಶ್ರೀರಾಮುಲು-ಡಿಕೆಶಿ ಮಾತು

ಇದರ ಮಧ್ಯೆ ಕಾಂಗ್ರೆಸ್​ ಡಿಕೆ ಶಿವಕುಮಾರ್ ಹಾಗೂ ಬಿಜೆಪಿ ಶ್ರೀರಾಮುಲು ಸದನದಲ್ಲಿ ಪರಸ್ಪರ ಭೇಟಿ ಮಾಡಿ ಮಾತನಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಸದನ ಮಧ್ಯಾಹ್ನ ಮೂರು ಗಂಟೆಗೆ ಮುಂದೂಡಿಕೆಯಾಗುತ್ತಿದ್ದಂತೆ ಉಭಯ ನಾಯಕರು ಒಂದೇ ಸ್ಥಳದಲ್ಲಿ ನಿಂತು ಕೆಲ ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಆದರೆ ಅವರು ಯಾವ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ.

ಶ್ರೀರಾಮುಲು ಸ್ಪಷ್ಟನೆ

ನಾನು ಊಟಕ್ಕೆ ಹೋಗುವುದು ತಡವಾಗಿತ್ತು. ಆಗ ಸಿಎಂ ಕುಮಾರಸ್ವಾಮಿ ಮಾತನಾಡುತ್ತಿದ್ದರು. ಇದೇ ವೇಳೆ ಡಿಕೆಶಿ ಮಾತನಾಡಿದರು. ಹೀಗಾಗಿ ಡಿಕೆಶಿ ಮಾತನಾಡಿಸಿದರು. ಅದು ನನಗೆ ಅರ್ಥವಾಗಲಿಲ್ಲ .ಹೀಗಾಗಿ ನಾನು ಮಾತನಾಡಿರುವೆ. ನಾನು ಟಿವಿ ನೋಡಿದ ಮೇಲೆ ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಬೇಕಾದರೆ ಅವರೇ ನಮ್ಮ ಪಕ್ಷಕ್ಕೆ ಬರಲಿ. ನಾನು ಯಾಕೆ ಅಲ್ಲಿಗೆ ಹೋಗಲಿ ಎಂದು ಶ್ರೀರಾಮುಲು ಹೇಳಿದ್ದಾರೆ.

Last Updated : Jul 18, 2019, 2:40 PM IST

ABOUT THE AUTHOR

...view details