ಕರ್ನಾಟಕ

karnataka

By

Published : Jul 16, 2019, 8:18 PM IST

ETV Bharat / state

ಕಾಂಗ್ರೆಸ್ ಶಾಸಕರನ್ನು  ಗೃಹಬಂಧನದಲ್ಲಿ ಇಡಲಾಗಿದೆ:  ಗುಂಡೂರಾವ್​​

ಕಾಂಗ್ರೆಸ್ ರೆಬೆಲ್ ಶಾಸಕರನ್ನು ಮುಂಬೈನಲ್ಲಿ ಗೃಹ ಬಂಧನದಲ್ಲಿ ಇರಿಸಲಾಗಿದೆ. ಶಾಸಕರನ್ನು ಸಂಪೂರ್ಣವಾಗಿ ಲಾಕ್​​ಡೌನ್ ಮಾಡಲಾಗಿದೆ ಎಂದು ದಿನೇಶ್​ ಗುಂಡೂರಾವ್​ ಟ್ವೀಟ್​ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಿನೇಶ್ ಗುಂಡೂರಾವ್​​

ಬೆಂಗಳೂರು:ರಾಜೀನಾಮೆ ನೀಡಿದ ಕಾಂಗ್ರೆಸ್ ಶಾಸಕರನ್ನು ಮುಂಬೈನಲ್ಲಿ ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್​​ ಮಾಡುವ ಮುಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ರೆಬೆಲ್ ಶಾಸಕರನ್ನು ಸಂಪೂರ್ಣವಾಗಿ ಲಾಕ್​​ಡೌನ್ ಮಾಡಲಾಗಿದೆ ಎಂಬ ವಿಚಾರವನ್ನು ನಾನು ಈಗ ತಿಳಿದುಕೊಂಡಿದ್ದೇನೆ. ಅವರ ಮೊಬೈಲ್​​ಗಳನ್ನು ಕಿತ್ತಿಟ್ಟುಕೊಳ್ಳಲಾಗಿದೆ. ಹೋಟೆಲ್ ಒಳಗೆ ಲಾಕ್ ಮಾಡಿ ಇಡಲಾಗಿದ್ದು, ಹೊರಗೆ ಕಾಲು ಕೂಡ ಇಡದಂತೆ ಗೃಹ ಬಂಧನದಲ್ಲಿ ಇಡಲಾಗಿದೆ ಎಂದು ಹೇಳಿದ್ದಾರೆ.

ದಿನೇಶ್ ಗುಂಡೂರಾವ್​​ ಟ್ವೀಟ್​​

ಸದ್ಯ ಅವರು ಬಿಜೆಪಿಯವರ ಕಪಿಮುಷ್ಠಿಯಲ್ಲಿದ್ದಾರೆ. ಹಾಗೂ ತಾವು ಅನರ್ಹವಾಗುವುದು ಖಚಿತ ಎಂಬ ಭಾವನೆ ತಾಳಿದ್ದಾರೆ. ಅಲ್ಲದೇ ಅವರು ಅತ್ಯಂತ ಶೀಘ್ರವೇ ಬಿಜೆಪಿಯ ಟಿಕೆಟ್ ಗಿಟ್ಟಿಸಿಕೊಳ್ಳಲು ಬಿಫಾರಂಗೆ ಸರದಿಯಲ್ಲಿ ನಿಲ್ಲಲಿದ್ದಾರೆ ಎಂದು ಹೇಳಿದ್ದಾರೆ. ಈ ಮೂಲಕ ಮಾನಸಿಕವಾಗಿ ಅತೃಪ್ತರು ವಾಪಸ್ ಬರುವುದಿಲ್ಲ ಎನ್ನುವ ನಿರ್ಧಾರಕ್ಕೆ ಕಾಂಗ್ರೆಸ್ ನಾಯಕರು ಬಂದಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ.

For All Latest Updates

TAGGED:

ABOUT THE AUTHOR

...view details