ಕರ್ನಾಟಕ

karnataka

ರಾಜಕೀಯ ಆಯಕಟ್ಟಿನ ಸ್ಥಾನ: ಬಿಜೆಪಿ- ಕಾಂಗ್ರೆಸ್​ ನಡುವೆ ಟ್ವೀಟ್​ ವಾರ್​

By

Published : Feb 9, 2021, 11:43 AM IST

ಪಕ್ಷದ ಪ್ರಮುಖ ಸ್ಥಾನಗಳಿಗೆ ಕಳಂಕಿತರು ಹಾಗೂ ಭ್ರಷ್ಟಾಚಾರಿಗಳನ್ನು ನೇಮಕ ಮಾಡಲಾಗುತ್ತಿದೆ ಎಂದು ಎರಡು ರಾಷ್ಟ್ರೀಯ ಪಕ್ಷಗಳು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ವಾಕ್ಸಮರ ನಡೆಸಿವೆ. ರಾಜಕೀಯ ಪಕ್ಷಗಳ ಪರಸ್ಪರ ಕೆಸರೆರಚಾಟ ನಡೆದಿದ್ದು, ಟ್ವೀಟ್ ಮೂಲಕ ಉಭಯ ಪಕ್ಷಗಳು ತಮ್ಮ ಆಕ್ರೋಶ ಹೊರಹಾಕಿವೆ.

Bjp latest tweet
ಕಾಂಗ್ರೆಸ್​ ಟ್ವೀಟ್​

ಬೆಂಗಳೂರು:ಕಳಂಕಿತ ರಾಜಕಾರಣಿಗಳ ಆಯಕಟ್ಟಿನ ಸ್ಥಾನ ಕಲ್ಪಿಸುತ್ತಿರುವ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ಟ್ವೀಟ್ ವಾರ್ ನಡೆದಿದೆ.

ಮೊದಲು ಟ್ವೀಟ್ ಮಾಡಿದ ಬಿಜೆಪಿ, ರೌಡಿ ಕೊತ್ವಾಲನ ಶಿಷ್ಯನಿಗೆ ರಾಜ್ಯ ಕಾಂಗ್ರೆಸ್ ನಲ್ಲಿ ದೊಡ್ಡ ಪಟ್ಟ. ಸ್ವತಃ ರೌಡಿ ಆಗಿರುವವರಿಗೆ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ. ಹೆಚ್ಚು ಮತ ಪಡೆದರೂ ಆತನಿಗೆ ಸೋಲು, ಈಗ ಅದೇ ರೌಡಿ ನಾಯಕನಿಗೆ ಕಾರ್ಯಾಧ್ಯಕ್ಷ ಎಂಬ ಪಟ್ಟ ಕಟ್ಟಲು ಉತ್ಸಾಹ. ಕಾಂಗ್ರೆಸ್‌ ಪಕ್ಷದವರು ಸಮಾಜಕ್ಕೆ ಯಾವ ಸಂದೇಶ ರವಾನಿಸುತ್ತಿದ್ದಾರೆ? ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಮಹಮ್ಮದ್ ನಲಪಾಡ್ ಹ್ಯಾರಿಸ್ ಹೆಸರು ಪ್ರಸ್ತಾಪಿಸದೇ ಲೇವಡಿ ಮಾಡಿತ್ತು.

ಬಿಜೆಪಿ ಟ್ವೀಟ್​
ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಬಿಜೆಪಿ ಪಕ್ಷದ ರಾಜ್ಯದಿಂದ ರಾಷ್ಟ್ರೀಯ ನಾಯಕರ ವರೆಗಿನ ವಿಚಾರವನ್ನು ಪ್ರಸ್ತಾಪಿಸಿ ಹೆಸರು ಹೇಳದೆ ಲೇವಡಿ ಮಾಡಿದೆ. ಕಾಂಗ್ರೆಸ್ ಪಕ್ಷ ತನ್ನ ಟ್ವೀಟ್​ನಲ್ಲಿ, ಗಡಿಪಾರಾಗಿದ್ದ ತಡಿಪಾರ್‌ಗೆ ಅಧ್ಯಕ್ಷ ಪಟ್ಟ, ರಾಜ್ಯಕ್ಕೆ ಬೆಂಕಿ ಹಚ್ಚಿದ್ದ ಸಾವಿನ ವ್ಯಾಪಾರಿಗೆ ಪ್ರಧಾನಿ ಪಟ್ಟ, ಲೂಟಿ ಮಾಡಿ ಜೈಲಿಗೆ ಹೋದವರಿಗೆ ಸಿಎಂ ಪಟ್ಟ, ಗಣಿ ಲೂಟಿಕೋರರಿಗೆ ಮಂತ್ರಿ ಪಟ್ಟ, ಕುಡಿದು ಆಕ್ಸಿಡೆಂಟ್ ಮಾಡಿ ಕೊಂದವನಿಗೆ ಪಕ್ಷದ ಉನ್ನತ ಹುದ್ದೆ, ಕ್ರಿಮಿನಲ್ ಯೋಗಿಗೆ ಸಿಎಂ ಪಟ್ಟ, ಇದು ಬಿಜೆಪಿ ಯೋಗ್ಯತೆ! ಎಂದು ಹೇಳಿದೆ.
ಕಾಂಗ್ರೆಸ್​ ಟ್ವೀಟ್​

ABOUT THE AUTHOR

...view details