ಕರ್ನಾಟಕ

karnataka

By

Published : Jul 30, 2019, 10:03 PM IST

ETV Bharat / state

ಹೂಡಿಕೆದಾರರು ಹಾಗೂ ಹಿತೈಷಿಗಳ ಸಹಕಾರ ಬೇಡಿದ ಕಾಫಿ ಡೇ

ಸಿದ್ದಾರ್ಥ್ ನಾಪತ್ತೆ ಹಿನ್ನೆಲೆಯಲ್ಲಿ ಇಂದು ಕಾಫಿ ಡೇ ಸಂಸ್ಥೆ ಮಾಧ್ಯಮ ಹೇಳಿಕೆ ನೀಡಿದ್ದು, ಸಂಕಷ್ಟದ ಸಂದರ್ಭದಲ್ಲಿ ಎಲ್ಲಾ ಹೂಡಿಕೆದಾರರ ಸಹಕಾರ ಸಂಸ್ಥೆಗೆ ಬೇಕಾಗಿದೆ ಇಂದು ಮನವಿ ಮಾಡಿಕೊಂಡಿದೆ.

ಸಿದ್ದಾರ್ಥ್ ನಾಪತ್ತೆ

ಬೆಂಗಳೂರು:ಕಾಫಿ ಡೇ ಸಂಸ್ಥೆಯ ಚೇರ್ಮನ್ ಆದ ಸಿದ್ದಾರ್ಥ್ ನಾಪತ್ತೆಯಾದ ಹಿನ್ನೆಲೆಯಲ್ಲಿ ಕಾಫಿ ಡೇ ಸಂಸ್ಥೆ ಮಾಧ್ಯಮ ಹೇಳಿಕೆ ನೀಡಿದೆ.

ಕಾಫಿ ಡೇ ಸಂಸ್ಥೆ ಮಾಧ್ಯಮ ಹೇಳಿಕೆ

ಹೇಳಿಕೆ ಪ್ರಕಾರ, ಸಿದ್ಧಾರ್ಥ್ ಅವರು ನಿನ್ನೆ ಸಂಜೆಯಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ಬಗ್ಗೆ ನಮಗೆ ಆಘಾತವಾಗಿದೆ ಎಂದು ಹೇಳಿದೆ.

ಕಾಫಿ ಡೇ ಸಂಸ್ಥೆ ಬಿಡುಗಡೆ ಮಾಡಿದ ಮಾಧ್ಯಮ ಹೇಳಿಕೆ

ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ಸಂಸ್ಥೆಯಲ್ಲಿ ತುರ್ತು ಸಭೆ ಕರೆಯಲಾಗಿತ್ತು. ಸಂಸ್ಥೆಯ ಆಡಳಿತ ಮಂಡಳಿ ಕಾಫಿ ಡೇ ಸಂಸ್ಥೆಯ ವ್ಯವಹಾರವನ್ನು ಉತ್ತಮವಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ ಪ್ರಸ್ತುತ ನಡೆಯುತ್ತಿರುವ ಎಲ್ಲಾ ಘಟನೆಗಳನ್ನು ಮಂಡಳಿ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಯಾವುದೇ ಅಡಚಣೆಯಿಲ್ಲದೆ ಕಾರ್ಯನಿರ್ವಹಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.

ಜೊತೆಗೆ ಕಾಫಿ ಡೇ ಸಂಸ್ಥೆಯ ಸ್ಥಾಪಕ ಸಿದ್ದಾರ್ಥ್ ಅವರು ಬರೆದ ಪತ್ರದ ಅನುಸಾರವಾಗಿ ಸಂಬಂಧಪಟ್ಟ ಇಲಾಖೆಗಳ ಸಹಾಯ ಬೇಕು ಎಂದು ಕೇಳಿಕೊಳ್ಳುತ್ತಿದ್ದೇವೆ. ನಾವು ಯಾವುದೇ ತನಿಖೆಗೂ ಸ್ಪಂದಿಸುವುದಾಗಿ ತಿಳಿಸಿದೆ.

ಪ್ರಸ್ತುತ ಸಂದರ್ಭದಲ್ಲಿ ಎಲ್ಲಾ ಹೂಡಿಕೆದಾರರ ಸಹಕಾರ ಸಂಸ್ಥೆಗೆ ಬೇಕಾಗಿದೆ. ಹೂಡಿಕೆದಾರರು ಅಲ್ಲದೆ ಸಂಸ್ಥೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಗೂ ಹಿತೈಷಿಗಳ ಸಹಕಾರವನ್ನೂ ಸಂಸ್ಥೆ ಕೋರಿದೆ.

ABOUT THE AUTHOR

...view details