ಬೆಂಗಳೂರು :ಏಕಲವ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು, ಪ್ರಶಸ್ತಿ ಪುರಸ್ಕೃತೆಗೆ ಬಳೆ ವಿಷಯಕ್ಕೆ ಹಾಸ್ಯ ಮಾಡಿದ ಪ್ರಸಂಗ ಇಂದು ನಡೆಯಿತು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತೆ ಖುಷಿ ದಿನೇಶ್ ಕೈಗೆ ಹಾಕಿದ್ದ ಬಳೆ ಬಗ್ಗೆ ಕೇಳಿ ಅಚ್ಚರಿ ಮೂಡಿಸಿದರು. ಹಲವು ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿ ನೀಡಲಾಗುತ್ತಿತ್ತು. ಪುರಸ್ಕೃತರು ವೇದಿಕೆ ಮೇಲೆ ಸಾಲಾಗಿ ಬಂದು ತಮ್ಮ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಿದ್ದರು. ಆ ವೇಳೆ, ಖುಷಿ ದಿನೇಶ್ ತೊಟ್ಟಿದ್ದ ಬಳೆಯನ್ನು ಕಂಡು ಅಚ್ಚರಿ ಪಟ್ಟ ಸಿಎಂ ಬಿಎಸ್ ವೈ, ‘ಏನಮ್ಮಾ, ಎಲ್ಲಿ ಮಾಡಿಸಿಕೊಂಡೆ ಈ ಬಳಕೆಯನ್ನು? ಬಳೆನಾ ಇದು? ಆರ್ಡರ್ ಕೊಟ್ಟು ಮಾಡಿಕೊಂಡಿದ್ದಾ? ಅಥವಾ ರೆಡಿಮೇಡ್ ಖರೀದಿಸಿದ್ದಾ? ಎಷ್ಟು ಈ ಬಳೆಯ ಬೆಲೆ?’ ಎಂದು ಪ್ರಶ್ನಿಸಿದ್ದಾರೆ.