ಬೆಂಗಳೂರು: ಕರ್ನಾಟಕ ರಾಜ್ಯ ರೈತ ಸಂಘದವರ ನಿಯೋಗದ ಜೊತೆ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಡೆಸಿದ ಸಂಧಾನ ಸಭೆ ಸಫಲವಾಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಡೆಸುತ್ತಿದ್ದ ಪ್ರತಿಭಟನೆ ಕೈಬಿಡುವುದಾಗಿ ರೈತ ಸಂಘ ತಿಳಿಸಿದೆ.
ರೈತ ಸಂಘದ ಜೊತೆ ಸಿಎಂ ಸಂಧಾನ ಸಭೆ ಸಫಲ: ಪ್ರತಿಭಟನೆ ಕೈಬಿಟ್ಟ ಅನ್ನದಾತರು - farmers demands
ರೈತರೊಂದಿಗೆ ಸಭೆ ನಡೆಸಿದ ಸಿಎಂ ಅವರ ಸಮಸ್ಯೆಗಳನ್ನು ಆಲಿಸಿದ್ದಾರೆ. ನಂತರ ಪರಿಹಾರದ ಭರವಸೆ ನೀಡಿದ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ಕೈಬಿಡುವ ನಿರ್ಧಾರ ಕೈಗೊಂಡರು.
![ರೈತ ಸಂಘದ ಜೊತೆ ಸಿಎಂ ಸಂಧಾನ ಸಭೆ ಸಫಲ: ಪ್ರತಿಭಟನೆ ಕೈಬಿಟ್ಟ ಅನ್ನದಾತರು CM meeting with farmers association was succeed](https://etvbharatimages.akamaized.net/etvbharat/prod-images/768-512-15799287-thumbnail-3x2-news.jpg)
ರೈತ ಸಂಘದ ಜೊತೆ ಸಿಎಂ ಸಭೆ
ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಿಎಂ ಅಧಿಕೃತ ನಿವಾಸ ರೇಸ್ ವ್ಯೂ ಕಾಟೇಜ್ಗೆ ರೈತರ ನಿಯೋಗ ನಿನ್ನೆ ಭೇಟಿ ನೀಡಿ, ರೈತರ ಸಮಸ್ಯೆಗಳ ಕುರಿತು ಚರ್ಚಿಸಿದರು. ಸಮಸ್ಯೆ ಆಲಿಸಿದ ಸಿಎಂ ರೈತರ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಸಕಾರಾತ್ಮಕ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಸಿಎಂ ಭರವಸೆಗೆ ಸಮ್ಮತಿಸಿದ ರೈತರ ನಿಯೋಗ ಪ್ರತಿಭಟನೆ ಹಿಂಪಡೆಯುವ ನಿರ್ಧಾರ ಪ್ರಕಟಿಸಿದರು.
ಇದನ್ನೂ ಓದಿ:ಉಡುಪಿ: ಕಡಲ್ಕೊರೆತ ಬಾಧಿತ ಪ್ರದೇಶಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ