ಕರ್ನಾಟಕ

karnataka

ETV Bharat / state

ಮೈಸೂರು, ಮಡಿಕೇರಿ ಪ್ರವಾಸಕ್ಕೆ ಹೊರಟ ಬಿಎಸ್​ವೈ

ಸಚಿವ ಸಂಪುಟ ವಿಸ್ತರಣೆ, ಹೈಕಮಾಂಡ್ ಭೇಟಿ ಇತ್ಯಾದಿಗಳ ಚಿಂತೆ ಬಿಟ್ಟು ಅಭಿವೃದ್ಧಿ ಕಾರ್ಯಗಳತ್ತ  ಚಿತ್ತ ಹರಿಸಿರುವ ಸಿಎಂ‌ ಬಿ.ಎಸ್.ಯಡಿಯೂರಪ್ಪ  ಮೈಸೂರು, ಮಡಿಕೇರಿ ಪ್ರವಾಸಕ್ಕೆ ತೆರಳಿದ್ದಾರೆ.

By

Published : Jan 27, 2020, 11:07 AM IST

CM B.S Yaduyurappa a trip to Madikeri and Mysore
ಮೈಸೂರು,ಮಡಿಕೇರಿ ಪ್ರವಾಸಕ್ಕೆ ಹೊರಟ ಬಿಎಸ್​ವೈ

ಬೆಂಗಳೂರು:ಸಚಿವ ಸಂಪುಟ ವಿಸ್ತರಣೆ, ಹೈಕಮಾಂಡ್ ಭೇಟಿ ಇತ್ಯಾದಿಗಳ ಚಿಂತೆ ಬಿಟ್ಟು ಅಭಿವೃದ್ಧಿ ಕಾರ್ಯಗಳತ್ತ ಚಿತ್ತ ಹರಿಸಿರುವ ಸಿಎಂ‌ ಬಿ.ಎಸ್.ಯಡಿಯೂರಪ್ಪ ಮೈಸೂರು, ಮಡಿಕೇರಿ ಪ್ರವಾಸಕ್ಕೆ ತೆರಳಿದ್ದಾರೆ.

ಮೈಸೂರು, ಮಡಿಕೇರಿ ಪ್ರವಾಸಕ್ಕೆ ಹೊರಟ ಬಿಎಸ್​ವೈ

ಡಾಲರ್ಸ್ ಕಾಲೋನಿ ನಿವಾಸದಿಂದ ಹೊರಟ ಸಿಎಂ ಬಿ.ಎಸ್.ಯಡಿಯೂರಪ್ಪ, ಹೆಚ್ಎಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಕೆ.ಆರ್. ನಗರಕ್ಕೆ ತೆರಳಿದ್ದಾರೆ. 12.30ಕ್ಕೆ ಬಾಳೆಹೊನ್ನೂರು ರಂಭಾಪುರಿ ಜಗದ್ಗುರುಗಳ 28ನೇ ವರ್ಷದ ಪೀಠಾರೋಹಣ ವರ್ಧಂತಿ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ನಂತರ ಮಡಿಕೇರಿಗೆ ತೆರಳಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಹೆಚ್ಚುವರಿ ಕಟ್ಟಡ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಸಂಜೆ 4.30ಕ್ಕೆ ಪುನಃ ಬೆಂಗಳೂರಿಗೆ ಆಗಮಿಸಲಿರುವ ಸಿಎಂ, ಸಂಜೆ 7 ಗಂಟೆಗೆ ಅರಮನೆ ಮೈದಾನದಲ್ಲಿ‌ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ABOUT THE AUTHOR

...view details