ದೇವನಹಳ್ಳಿ(ಬೆಂಗಳೂರು):ನಗರದಬಟ್ಟೆ ಅಂಗಡಿಗೆ ಬಟ್ಟೆ ಖರೀದಿಯ ನೆಪದಲ್ಲಿ ಬಂದ ಖದೀಮರು ಗಲ್ಲಾ ಪೆಟ್ಟಿಗೆಯ ಮೇಲಿಟ್ಟಿದ್ದ ಹಣ ದೋಚಿ ಪರಾರಿಯಾಗಿದ್ದಾರೆ. ಫೆಬ್ರವರಿ 2 ರಂದು ದೇವನಹಳ್ಳಿ ಪಟ್ಟಣದ ಬಟ್ಟೆ ಅಂಗಡಿಯೊಂದರಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬಟ್ಟೆ ಅಂಗಡಿಗೆ ವ್ಯಾಪಾರದ ಸೋಗಿನಲ್ಲಿ ಬಂದು ಹಣ ಎಗರಿಸಿದ ಖದೀಮರು: ಸಿಸಿಟಿವಿಯಲ್ಲಿ ದೃಶ್ಯ ಸೆರೆ - cash stolen in Bangalore cloth shop Scene captured on CCTV
ದೇವನಹಳ್ಳಿ ಪಟ್ಟಣದ ಬಟ್ಟೆ ಅಂಗಡಿಗೆ ಬಟ್ಟೆ ಖರೀದಿಯ ನೆಪದಲ್ಲಿ ಬಂದ ಖದೀಮರು ಗಲ್ಲಾ ಪೆಟ್ಟಿಗೆಯ ಮೇಲಿಟ್ಟಿದ್ದ ಹಣ ದೋಚಿ ಪರಾರಿಯಾಗಿದ್ದಾರೆ. ಕಳ್ಳತನ ದೃಶ್ಯ ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
![ಬಟ್ಟೆ ಅಂಗಡಿಗೆ ವ್ಯಾಪಾರದ ಸೋಗಿನಲ್ಲಿ ಬಂದು ಹಣ ಎಗರಿಸಿದ ಖದೀಮರು: ಸಿಸಿಟಿವಿಯಲ್ಲಿ ದೃಶ್ಯ ಸೆರೆ cash stolen in cloth shop CCTV Scene](https://etvbharatimages.akamaized.net/etvbharat/prod-images/768-512-14377209-thumbnail-3x2-news.jpg)
ವ್ಯಾಪಾರದ ಸೋಗಿನಲ್ಲಿ ಬಂದು ಹಣ ಎಗರಿಸಿದ ಖದೀಮರು-ಸಿಸಿಟಿವಿ ದೃಶ್ಯ
ವ್ಯಾಪಾರದ ಸೋಗಿನಲ್ಲಿ ಬಂದು ಹಣ ಎಗರಿಸಿದ ಖದೀಮರು-ಸಿಸಿಟಿವಿ ದೃಶ್ಯ
ಇದನ್ನೂ ಓದಿ:ವಿಶೇಷಚೇತನ ಮಗನನ್ನು ಕೊಂದು ದಂಪತಿ ಆತ್ಮಹತ್ಯೆ
ಬಟ್ಟೆ ಅಂಗಡಿಯಲ್ಲಿ ಒಬ್ಬಳೆ ಮಹಿಳೆ ಇರುವುದನ್ನ ಖಚಿತಪಡಿಸಿಕೊಂಡ ಇಬ್ಬರು ಖದೀಮರು ಬಟ್ಟೆ ಖರೀದಿ ನೆಪದಲ್ಲಿ ಅಂಗಡಿಗೆ ಬಂದಿದ್ದಾರೆ. ಮೊದಲಿಗೆ ಬಂದ ವ್ಯಕ್ತಿ ಬಟ್ಟೆ ಖರೀದಿಗೆ ಬಂದಿದ್ದ. ನಂತರ ಬಂದವನು 2 ಸಾವಿರ ರೂ.ಗೆ ಚಿಲ್ಲರೆ ಕೊಡುವಂತೆ ಕೇಳಿಕೊಂಡು ಬಂದಿದ್ದಾನೆ. ಮಹಿಳೆ ಬಟ್ಟೆಗಳನ್ನ ತೋರಿಸುತ್ತಿದ್ದಾಗ ಹಿಂದಿದ್ದ ವ್ಯಕ್ತಿ ಗಲ್ಲಾ ಪೆಟ್ಟಿಗೆಯಲ್ಲಿದ್ದ ಹಣವನ್ನ ಎಗರಿಸಿದ್ದಾನೆ. ಕಳ್ಳತನ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.