ಬೆಂಗಳೂರು: ಮನೆ ಖಾಲಿ ಮಾಡೋ ವಿಚಾರಕ್ಕೆ ಮಾಲೀಕ ಹಾಗೂ ಬಾಡಿಕೆದಾರನ ನಡುವೆ ಗಲಾಟೆ ನಡೆದಿರುವ ಘಟನೆ ಆರ್ಟಿ ನಗರದ ಹೆಚ್ಎಂಟಿ ಲೇಔಟ್ನಲ್ಲಿ ನಡೆದಿದೆ. ಕಳೆದ ನಾಲ್ಕು ವರ್ಷದಿಂದ ಮಹಮ್ಮದ್ ನಾದ್ವಿ ಎಂಬಾತ ಸೈಯದ್ ಸೈಯದ್ ಇಲಿಯಾಸ್ ಮನೆಯಲ್ಲಿ ಬಾಡಿಗೆಗೆ ಇದ್ದ.
ಬಾಡಿಗೆ ತಕರಾರು: ಮನೆ ಮಾಲೀಕ - ಬಾಡಿಗೆದಾರರನ ನಡುವೆ ಮಾರಾಮಾರಿ
ಕೊರೊನಾ ಆರಂಭವಾಗಿದ್ದ ನಂತರ ಮನೆ ಬಾಡಿಗೆ ಕಟ್ಟದೇ ಸತಾಯಿಸಿದ್ದ. ಹೀಗಾಗಿ ಮಾಲೀಕ ಬಾಡಿಗೆ ಹಣ ಕೊಡು ಇಲ್ಲ ಅಂದರೆ ಮನೆ ಖಾಲಿ ಮಾಡು ಎಂದಿದ್ದಾರೆ. ಈ ವೇಳೆ, ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಬಳಿಕ ಅತಿರೇಕಕ್ಕೆ ತೆರಳಿ ಇಬ್ಬರೂ ಕೈ ಕೈ ಮಿಲಾಯಿಸಿದ್ದಾರೆ.
ಮನೆ ಮಾಲಿಕ-ಬಾಡಿಗೆದಾರರನ ನಡುವೆ ಮಾರಾಮಾರಿ
ಕೊರೊನಾ ಆರಂಭವಾಗಿದ್ದ ನಂತರ ಮನೆ ಬಾಡಿಗೆ ಕಟ್ಟದೇ ಸತಾಯಿಸಿದ್ದ. ಹೀಗಾಗಿ ಮಾಲೀಕ ಬಾಡಿಗೆ ಹಣ ಕೊಡು ಇಲ್ಲ ಅಂದರೆ ಮನೆ ಖಾಲಿ ಮಾಡು ಎಂದಿದ್ದಾರೆ. ಈ ವೇಳೆ, ಇಬ್ಬರ ನಡುವೆ ವಾಗ್ವಾದ ನಡೆಸಿದ್ದು, ಬಳಿಕ ಅತಿರೇಕಕ್ಕೆ ತೆರಳಿ ಇಬ್ಬರೂ ಕೈಕೈ ಮಿಲಾಯಿಸಿದ್ದಾರೆ.
ಗಲಾಟೆಯಲ್ಲಿ ಮಾಲೀಕ ಹಾಗೂ ಬಾಡಿಗೆದಾರ ನಾದ್ವಿಗೆ ಗಾಯಗಳಾಗಿದ್ದು, ಘಟನೆ ಸಂಬಂಧ ಇಬ್ಬರೂ ಆರ್ಟಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರನ್ನೂ ವಿಚಾರಣೆಗೊಳಪಡಿಸಿದ್ದಾರೆ.