ಕರ್ನಾಟಕ

karnataka

ಬಾಡಿಗೆ ತಕರಾರು: ಮನೆ ಮಾಲೀಕ - ಬಾಡಿಗೆದಾರರನ ನಡುವೆ ಮಾರಾಮಾರಿ

By

Published : Nov 9, 2020, 1:56 PM IST

ಕೊರೊನಾ ಆರಂಭವಾಗಿದ್ದ ನಂತರ ಮನೆ ಬಾಡಿಗೆ ಕಟ್ಟದೇ ಸತಾಯಿಸಿದ್ದ. ಹೀಗಾಗಿ ಮಾಲೀಕ ಬಾಡಿಗೆ ಹಣ ಕೊಡು ಇಲ್ಲ ಅಂದರೆ ಮನೆ ಖಾಲಿ ಮಾಡು ಎಂದಿದ್ದಾರೆ. ಈ ವೇಳೆ, ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಬಳಿಕ ಅತಿರೇಕಕ್ಕೆ ತೆರಳಿ ಇಬ್ಬರೂ ಕೈ ಕೈ ಮಿಲಾಯಿಸಿದ್ದಾರೆ.

clash-between-house-owner-and-renter-for-issue-of-rent-in-bangalore
ಮನೆ ಮಾಲಿಕ-ಬಾಡಿಗೆದಾರರನ ನಡುವೆ ಮಾರಾಮಾರಿ

ಬೆಂಗಳೂರು: ಮನೆ ಖಾಲಿ ಮಾಡೋ ವಿಚಾರಕ್ಕೆ ಮಾಲೀಕ ಹಾಗೂ ಬಾಡಿಕೆದಾರನ ನಡುವೆ ಗಲಾಟೆ ನಡೆದಿರುವ ಘಟನೆ ಆರ್​​​ಟಿ ನಗರದ ಹೆಚ್​​ಎಂಟಿ ಲೇಔಟ್​​​ನಲ್ಲಿ ನಡೆದಿದೆ. ಕಳೆದ ನಾಲ್ಕು ವರ್ಷದಿಂದ ಮಹಮ್ಮದ್ ನಾದ್ವಿ ಎಂಬಾತ ಸೈಯದ್​ ಸೈಯದ್ ಇಲಿಯಾಸ್ ಮನೆಯಲ್ಲಿ ಬಾಡಿಗೆಗೆ ಇದ್ದ.

ಮನೆ ಮಾಲೀಕ-ಬಾಡಿಗೆದಾರರನ ನಡುವೆ ಮಾರಾಮಾರಿ

ಕೊರೊನಾ ಆರಂಭವಾಗಿದ್ದ ನಂತರ ಮನೆ ಬಾಡಿಗೆ ಕಟ್ಟದೇ ಸತಾಯಿಸಿದ್ದ. ಹೀಗಾಗಿ ಮಾಲೀಕ ಬಾಡಿಗೆ ಹಣ ಕೊಡು ಇಲ್ಲ ಅಂದರೆ ಮನೆ ಖಾಲಿ ಮಾಡು ಎಂದಿದ್ದಾರೆ. ಈ ವೇಳೆ, ಇಬ್ಬರ ನಡುವೆ ವಾಗ್ವಾದ ನಡೆಸಿದ್ದು, ಬಳಿಕ ಅತಿರೇಕಕ್ಕೆ ತೆರಳಿ ಇಬ್ಬರೂ ಕೈಕೈ ಮಿಲಾಯಿಸಿದ್ದಾರೆ.

ಗಲಾಟೆಯಲ್ಲಿ ಮಾಲೀಕ ಹಾಗೂ ಬಾಡಿಗೆದಾರ ನಾದ್ವಿಗೆ ಗಾಯಗಳಾಗಿದ್ದು, ಘಟನೆ ಸಂಬಂಧ ಇಬ್ಬರೂ ಆರ್​​ಟಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರನ್ನೂ ವಿಚಾರಣೆಗೊಳಪಡಿಸಿದ್ದಾರೆ.

ABOUT THE AUTHOR

...view details