ಕರ್ನಾಟಕ

karnataka

ETV Bharat / state

ವಸಿಷ್ಠ ಸಹಕಾರಿ ಬ್ಯಾಂಕ್ ವಂಚನೆ ಪ್ರಕರಣ : ತನಿಖೆ ನಡೆಸಲು ಸಿಐಡಿ ಆದೇಶ - ಪ್ರಕರಣದ ತನಿಖೆ ನಡೆಸಲಿರುವ ಸಿಐಡಿ

ಬ್ಯಾಂಕ್‌ ಮುಖ್ಯಸ್ಥ ವೆಂಕಟನಾರಾಯಣ ಹೈಕೋರ್ಟ್​​ನಿಂದ ತನಿಖೆಗೆ ತಡೆಯಾಜ್ಞೆ ತಂದಿದ್ದು, ಪ್ರಸ್ತಕ ಸಾಲಿನ ಫೆಬ್ರುವರಿಗೆ ಬ್ಯಾಂಕ್ ಠೇವಣಿದಾರರಿಗೆ ಮೆಚ್ಯೂರಿಟಿ ಬಾಂಡ್​ಗಳ ಹಣ ಹಾಗೂ ಅದರ ಮೇಲಿನ ಬಡ್ಡಿಯನ್ನು ಪಾವತಿಸಲಾಗಿದೆ.‌ ಕೊರೊನಾ ಬಿಕ್ಕಟ್ಟು ಹಿನ್ನೆಲೆ ಸಕಾಲದಲ್ಲಿ ಹಣ ಹಿಂತಿರುಗಿಸಲು ಸಾಧ್ಯವಾಗಿಲ್ಲ..

CID will investigate Vasishta Cooperative Bank fraud case
ವಸಿಷ್ಠ ಸಹಕಾರಿ ಬ್ಯಾಂಕ್ ವಂಚನೆ ಪ್ರಕರಣ

By

Published : Aug 11, 2021, 7:47 PM IST

ಬೆಂಗಳೂರು :ವಸಿಷ್ಠ ಸಹಕಾರಿ ಬ್ಯಾಂಕ್​​​ನಲ್ಲಿ ಠೇವಣಿದಾರರಿಂದ‌ ಹಣ ಪಾವತಿಸಿಕೊಂಡು ನೂರಾರು ಗ್ರಾಹಕರಿಗೆ ಠೇವಣಿ ವಂಚನೆ‌ ಆರೋಪದಡಿ ದಾಖಲಾಗಿದ್ದ ಪ್ರಕರಣ ಸಂಬಂಧ ಸಿಐಡಿ ತನಿಖೆ ನಡೆಸುವಂತೆ ರಾಜ್ಯ ಪೊಲೀಸ್ ಇಲಾಖೆಯ ಅಪರಾಧ ವಿಭಾಗದ ಎಡಿಜಿಪಿ‌ ಆರ್‌ ಹಿತೇಂದ್ರ ಆದೇಶಿಸಿದ್ದಾರೆ‌.

ಕಳೆದ ಜುಲೈನಲ್ಲಿ ಹನುಮಂತ ನಗರದಲ್ಲಿರುವ ವಸಿಷ್ಠ ಸಹಕಾರಿ ಬ್ಯಾಂಕ್ ಠೇವಣಿದಾರರು ಹೂಡಿದ ಹಣ ಹಿಂತಿರುಗಿಸದೆ ವಂಚಿಸಿದೆ ಎಂದು ಆಪಾದಿಸಿ ಬ್ಯಾಂಕ್ ಮುಂದೆ‌ ಗ್ರಾಹಕರು ಪ್ರತಿಭಟಿಸಿದ್ದರು. ಬಳಿಕ ಬ್ಯಾಂಕ್ ಸಿಇಒ ವೆಂಕಟನಾರಾಯಣ ಸೇರಿದಂತೆ ಆಡಳಿತ ಮಂಡಳಿ ವಿರುದ್ಧ 128 ಮಂದಿ‌ ಹನುಮಂತನಗರ ಪೊಲೀಸರಿಗೆ ದೂರು ನೀಡಿದ್ದು, 19 ಕೋಟಿ ನಷ್ಟವಾಗಿದೆ ಎಂದು ಠೇವಣಿದಾರರು‌ ಆರೋಪಿಸಿದ್ದರು.

ದೂರು ಸ್ವೀಕರಿಸಿ ತನಿಖೆ ನಡೆಸಿದ ಇನ್ಸ್‌ಪೆಕ್ಟರ್ ಸಂದೀಪ್ ನೇತೃತ್ವದ ತಂಡ ನ್ಯಾಯಾಲಯದಿಂದ ಶೋಧನಾ ವಾರೆಂಟ್ ಪಡೆದು ಬ್ಯಾಂಕ್ ಆಡಳಿತ ಮಂಡಳಿ ಸದಸ್ಯರ ಮನೆಗಳ‌ ಮೇಲೆ ದಾಳಿ ನಡೆಸಿ ಅಗತ್ಯ ದಾಖಲಾತಿಗಳನ್ನು ವಶಕ್ಕೆ ಪಡೆದಿತ್ತು. ಈ ಸಂಬಂಧ‌ ಸಿಐಡಿ ತನಿಖೆ ನಡೆಸುವಂತೆ ಹಿರಿಯ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರು. ಈ ಹಿನ್ನೆಲೆ ಎಡಿಜಿಪಿ‌ ಹಿತೇಂದ್ರ ಪ್ರಕರಣದ ತನಿಖೆ ನಡೆಸುವಂತೆ ಸಿಐಡಿಗೆ ಆದೇಶಿಸಿದ್ದಾರೆ.

ಓದಿ: ಶ್ರೀ ವಸಿಷ್ಠ ಕ್ರೆಡಿಟ್ ಸೌಹಾರ್ದ ಸಹಕಾರಿ ಬ್ಯಾಂಕ್‌ನಿಂದ ಭಾರೀ ವಂಚನೆ?: ದೂರು ದಾಖಲಾಗ್ತಿದ್ದಂತೆ ಮುಖ್ಯಸ್ಥರು ಪರಾರಿ

ಬ್ಯಾಂಕ್‌ ಮುಖ್ಯಸ್ಥ ವೆಂಕಟನಾರಾಯಣ ಹೈಕೋರ್ಟ್​​ನಿಂದ ತನಿಖೆಗೆ ತಡೆಯಾಜ್ಞೆ ತಂದಿದ್ದು, ಪ್ರಸ್ತಕ ಸಾಲಿನ ಫೆಬ್ರುವರಿಗೆ ಬ್ಯಾಂಕ್ ಠೇವಣಿದಾರರಿಗೆ ಮೆಚ್ಯೂರಿಟಿ ಬಾಂಡ್​ಗಳ ಹಣ ಹಾಗೂ ಅದರ ಮೇಲಿನ ಬಡ್ಡಿಯನ್ನು ಪಾವತಿಸಲಾಗಿದೆ.‌ ಕೊರೊನಾ ಬಿಕ್ಕಟ್ಟು ಹಿನ್ನೆಲೆ ಸಕಾಲದಲ್ಲಿ ಹಣ ಹಿಂತಿರುಗಿಸಲು ಸಾಧ್ಯವಾಗಿಲ್ಲ.

ಫೆಬ್ರುವರಿವರೆಗೆ ಹಣ ನೀಡಿರುವುದನ್ನು ದೂರುದಾರರು ಒಪ್ಪಿದ್ದಾರೆ ಎಂದು ಹೇಳಿ ಹೈಕೋರ್ಟ್​​​ನಿಂದ‌ ತಡೆಯಾಜ್ಞೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಆದೇಶ ಹಿಂಪಡೆಯುವ ತನಕ ಸಿಐಡಿ ಪೊಲೀಸರು ತನಿಖೆ ನಡೆಸಲು ಅಸಾಧ್ಯವಾಗಲಿದೆ.

ABOUT THE AUTHOR

...view details