ಕರ್ನಾಟಕ

karnataka

By

Published : Dec 14, 2020, 9:22 AM IST

ETV Bharat / state

ಚೀಟಿ ಹೆಸರಲ್ಲಿ ಕೋಟ್ಯಂತರ ರೂ. ಚೀಟಿಂಗ್ : ದಂಪತಿಯನ್ನು ಠಾಣೆಗೆ ಎಳೆದು ತಂದ ಜನ

ಹೊಸಕೆರೆಹಳ್ಳಿ ದತ್ತಾತ್ರೇಯ ನಗರದ ನೀಲಾವತಿ ಮತ್ತು ಜ್ಞಾನೇಶ್ ದಂಪತಿ ವಂಚನೆ ಮಾಡಿದ ಆರೋಪಿಗಳು. ಇವರ ಬಳಿ ಚೀಟಿ ಹಾಕಿ ಮೋಸ ಹೋದವರೇ ದಂಪತಿಯನ್ನು ಗಿರಿನಗರ ಪೊಲೀಸ್ ಠಾಣೆಗೆ ಕರೆ ತಂದು, ತಮ್ಮ ಹಣ ವಾಪಸ್ ಕೊಡಿಸುವಂತೆ ದೂರು ನೀಡಿದ್ದಾರೆ..

chit fund fraud by couple in bengaluru
ಚೀಟಿ ಹೆಸರಲ್ಲಿ ವಂಚನೆ

ಬೆಂಗಳೂರು :ಚೀಟಿ ಹೆಸರಿನಲ್ಲಿ ನೂರಾರು ಜನ ಅಮಾಯಕರಿಗೆ ಕೋಟ್ಯಂತರ ರೂಪಾಯಿ ಮೋಸ ಮಾಡಿರುವ ಘಟನೆ ಹೊಸಕೆರೆಹಳ್ಳಿಯ ದತ್ತಾತ್ರೇಯ ನಗರದಲ್ಲಿ ನಡೆದಿದೆ.

ಚೀಟಿ ಹೆಸರಲ್ಲಿ ವಂಚನೆ
ಹೊಸಕೆರೆಹಳ್ಳಿ ದತ್ತಾತ್ರೇಯ ನಗರದ ನೀಲಾವತಿ ಮತ್ತು ಜ್ಞಾನೇಶ್ ದಂಪತಿ ವಂಚನೆ ಮಾಡಿದ ಆರೋಪಿಗಳು. ಇವರ ಬಳಿ ಚೀಟಿ ಹಾಕಿ ಮೋಸ ಹೋದವರೇ ದಂಪತಿಯನ್ನು ಗಿರಿನಗರ ಪೊಲೀಸ್ ಠಾಣೆಗೆ ಕರೆ ತಂದು, ತಮ್ಮ ಹಣ ವಾಪಸ್ ಕೊಡಿಸುವಂತೆ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಕಳೆದೊಂದು ವರ್ಷದಿಂದ ನೂರಾರು ಜನರನ್ನು ಸೇರಿಸಿಕೊಂಡು ಹೊಸಕೆರೆಹಳ್ಳಿ ದತ್ತಾತ್ರೆಯ ನಗರದಲ್ಲಿ ಚೀಟಿ ವ್ಯವಹಾರ ನಡೆಸುತ್ತಿದ್ದರು.
ಕಳೆದ ಆರು ತಿಂಗಳ ಹಿಂದೆ ಚೀಟಿ ಮುಗಿದಿದೆ. ಆದರೂ ಸಹ ಮತ್ತೆ ಬಡ್ಡಿ ಕೊಡುವುದಾಗಿ ಜನರನ್ನು ನಂಬಿಸಿದ್ದರು. ಬಳಿಕ ಕಳೆದ ಆರು ತಿಂಗಳಿಂದ ಹಣ ನೀಡದೆ ಇಬ್ಬರು ಪರಾರಿಯಾಗಿದ್ದರು. ಅಷ್ಟೇ ಅಲ್ಲ, ಹಣ ಹಾಕಿದವರು ನೀಲಾವತಿಯವರ ಸ್ವಂತ ಮನೆ ಇದೆ ಎನ್ನುವ ಕಾರಣಕ್ಕೆ ತಾಳ್ಮೆಯಿಂದ ಇದ್ದರು.
ಇದರ ನಡುವೆ ಚೀಟಿ ಹಾಕಿದ್ದ ಜನರಿಗೆ ಈಗ ಹೊಸಕೆರೆಹಳ್ಳಿಯಲ್ಲಿದ್ದ ಮನೆಯನ್ನು ಮಾರಾಟ ಮಾಡಿರುವ ವಿಚಾರ ತಿಳಿದು ನೀಲಾವತಿಯನ್ನು ಹುಡುಕಿ ಗಿರಿನಗರ ಠಾಣೆಗೆ ಒಪ್ಪಿಸಿದ್ದಾರೆ. ಈ ಕುರಿತು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಠಾಣೆ ಎದುರು ನಿಂತು ಜನ ನಮ್ಮ ಹಣ ವಾಪಸ್ ಕೊಡಿಸುವಂತೆ ಪಟ್ಟು ಹಿಡಿದಿದ್ದಾರೆ.

ABOUT THE AUTHOR

...view details