ಬೆಂಗಳೂರು: ಕೈಗಾರಿಕೆ ಸ್ಥಾಪನೆಗೆ ಭೂಮಿ ಖರೀದಿ ಅಥವಾ ಪರಿವರ್ತನೆಗೆ ನಿಯಮ ಸಡಿಲಿಕೆ ಮಾಡುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದರು.
ಭೂ ಪರಿವರ್ತನೆಗೆ ಕೆಲ ನಿಯಮ ಬದಲಾವಣೆ, ಮೂಲ ಕಾಯ್ದೆಗೆ ಯಾವುದೇ ದಕ್ಕೆ ಆಗಲ್ಲ: ಶೆಟ್ಟರ್ ಸ್ಪಷ್ಟನೆ - ಬೆಂಗಳೂರು ಲೆಟೆಸ್ಟ್ ನ್ಯೂಸ್
ಕೈಗಾರಿಕೆ ಸ್ಥಾಪನೆಗೆ ಭೂಮಿ ಖರೀದಿ ಅಥವಾ ಪರಿವರ್ತನೆಗೆ ಸಂಬಂಧಪಟ್ಟಂತೆ ನಿಯಮ ಸಡಿಲಿಕೆ ಮಾಡುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದರು.
![ಭೂ ಪರಿವರ್ತನೆಗೆ ಕೆಲ ನಿಯಮ ಬದಲಾವಣೆ, ಮೂಲ ಕಾಯ್ದೆಗೆ ಯಾವುದೇ ದಕ್ಕೆ ಆಗಲ್ಲ: ಶೆಟ್ಟರ್ ಸ್ಪಷ್ಟನೆ changes of rules for industrial establishment will not make problems: Jagadish shettar](https://etvbharatimages.akamaized.net/etvbharat/prod-images/768-512-5839317-thumbnail-3x2-jagdish.jpg)
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಶೆಟ್ಟರ್, ಕಾಲಮಿತಿಯಲ್ಲಿ ಕೆಲಸಗಳಾಗುವಂತೆ ಪೂರಕವಾಗಿ ಕಾನೂನಿನಲ್ಲಿ ಮಾರ್ಪಾಡು ಮಾಡುತ್ತೇವೆ. ಇದರಿಂದ ರೈತರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಶೆಟ್ಟರ್ ಸ್ಪಷ್ಟಪಡಿಸಿದರು.
ಜಿಂದಾಲ್ ಕಂಪನಿಗೆ ಬಳ್ಳಾರಿಯಲ್ಲಿ ಜಮೀನು ನೀಡುವ ಕುರಿತು ಮುಖ್ಯಮಂತ್ರಿಗಳ ಜೊತೆ ಯಾವುದೇ ಚರ್ಚೆ ಸದ್ಯದ ಮಟ್ಟಿಗೆ ಆಗಿಲ್ಲ, ಈ ಬಗ್ಗೆ ಸಿಎಂ ಜೊತೆ ಚರ್ಚಿಸಿ ನಿರ್ಧರಿಸಲಾಗುತ್ತದೆ. ಜೊತೆಗೆ ಕೈಗಾರಿಕಾ ಉದ್ದೇಶಕ್ಕೆ ಪಡೆದ ಜಮೀನನ್ನು ಉದ್ದೇಶಿತ ಕಾರ್ಯಕ್ಕೆ ಉಪಯೋಗ ಮಾಡದೇ ಇದ್ದಲ್ಲಿ ಅಂತಹ ಜಮೀನನ್ನು ವಾಪಸ್ ಪಡೆಯಲಾಗುತ್ತದೆ. ಈ ಸಂಬಂಧ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.