ಕರ್ನಾಟಕ

karnataka

By

Published : Sep 8, 2019, 3:29 AM IST

Updated : Sep 8, 2019, 5:21 AM IST

ETV Bharat / state

ನಟ ಅಂಬರೀಶ್ ನಂತರ ಕನ್ನಡದಲ್ಲಿ ಮತ್ತೊರ್ವ ಕರ್ಣ, ದರ್ಶನ್​ ತುಂಬುತ್ತಿದ್ದಾರೆ ಆ ಸ್ಥಾನ!

ಅಂಬರೀಶ್​ ನಿಧನದ ನಂತರ ಸ್ಯಾಂಡಲ್​​ವುಡ್​ನಲ್ಲಿ ಯುವ ನಟ, ನಿರ್ದೇಶಕರನ್ನು ಗುರುತಿಸಿ ಬೆಳೆಸುವ ಕಾರ್ಯ ಮಂದಗತಿಯಲ್ಲಿ ಸಾಗುತ್ತಿತ್ತು. ಆದರೆ ಇದೀಗ ಚಾಲೆಂಜಿಂಗ್ ಸ್ಟಾರ್​ ದರ್ಶನ್​ ಹೊಸ ಪ್ರತಿಭೆಗಳಿಗೆ ಬೆನ್ನೆಲುಬಾಗಿ ನಿಲ್ಲುತ್ತಿದ್ದಾರೆ ಎಂದು ಹೇಳಬಹುದು.

ರೆಬಲ್​ ಸ್ಟಾರ್​ ಅಂಬರೀಶ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್

ಬೆಂಗಳೂರು: 1999ರಲ್ಲಿ ತಾಯಿಗೊಬ್ಬ ಕರ್ಣ ಅಂತಾ ಸಿನಿಮಾ ತೆರೆ ಕಂಡಿತ್ತು. ಅದರಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಬಡವರ ಕಂಬನಿಗೆ ಮಿಡಿಯುವ ಶ್ರೀಮಂತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಹೆಸರಿಗೆ ತಕ್ಕಂತೆ ಅಂಬರೀಶ್, ತಮ್ಮ ನಿಜ ಜೀವನದಲ್ಲು ನಡೆದುಕೊಂಡು ನಿಜವಾದ ಕರ್ಣ ಎನಿಕೊಂಡವರು.

ಟಕ್ಕರ್ ಧ್ವನಿ ಸುರಳಿ ಬಿಡುಗಡೆ

ಸದ್ಯಕ್ಕೆ ರೆಬಲ್ ಸ್ಟಾರ್ ನಂತರ ಕನ್ನಡ ಚಿತ್ರರಂಗದ ಡಿ ಬಾಸ್​ ಖ್ಯಾತಿಯ, ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಷ್ಟದಲ್ಲಿನ ಅಭಿಮಾನಿಗಳಿಗೆ ಹಾಗೂ ಕಲಾವಿದರಿಗೆ ಸಹಾಯ ಹಸ್ತ ನೀಡುತ್ತಿದ್ದಾರೆ. ಯುವ ನಿರ್ದೇಶಕ, ನಟರಿಗೆ ದರ್ಶನ್ ಕರ್ಣನಾಗಿ ಕಾಣುತ್ತಿದ್ದು, ಹೊಸ ನಟ, ನಿರ್ದೇಶಕರ ಸಿನಿಮಾಗಳ ಟೈಟಲ್ ಲಾಂಚ್, ಸಿನಿಮಾ ಮುಹೂರ್ತ, ಆಡಿಯೋ ಬಿಡುಗಡೆ ಮಾಡುವ ಮೂಲಕ ಮಾದರಿಯಾಗ್ತಿದ್ದಾರೆ.

ದರ್ಶನ್​​ ಸಹೋದರ ಅಳಿಯ ಮನೋಜ್ ನಟನೆಯ 'ಟಕ್ಕರ್' ಸಿನಿಮಾದ ಧ್ವನಿ ಸುರುಳಿಯನ್ನು ಬಿಡುಗಡೆ ಮಾಡಿ, ಚಿತ್ರದ ನಿರ್ದೇಶಕ ರಘು ಶಾಸ್ತ್ರಿ ಹಾಗೂ ತಂಡಕ್ಕೆ ಇದೀಗ ಶುಭ ಕೋರಿದ್ದಾರೆ.

Last Updated : Sep 8, 2019, 5:21 AM IST

ABOUT THE AUTHOR

...view details