ಕರ್ನಾಟಕ

karnataka

ETV Bharat / state

ಸದನದಲ್ಲಿ ‘ಸಿಡಿ’ದೆದ್ದ ಪ್ರತಿಪಕ್ಷ... ‘ಕೈ’ಯಲ್ಲಿ ‘ಸಿಡಿ’ ಹಿಡಿದು ಪ್ರತಿಭಟಿಸಿದ ನಾಯಕರು - ವಿಧಾನಸಭೆ ಕಲಾಪದಲ್ಲಿ ಸಿಡಿ ಪ್ರದರ್ಶಿಸಿದ ಕಾಂಗ್ರೆಸ್ ನಾಯಕರು

Karnataka assembly news
ಸದನದಲ್ಲಿ ‘ಸಿಡಿ’ದೆದ್ದ ವಿರೋಧಪಕ್ಷ

By

Published : Mar 23, 2021, 11:33 AM IST

Updated : Mar 23, 2021, 12:08 PM IST

11:30 March 23

ಇಂದು ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ ಸದನದಲ್ಲಿ ಸಿಡಿ ಸದ್ದು ಮಾಡಿದೆ. ಸೋಮವಾರ ಇಡೀ ದಿನ ಕಲಾಪದಲ್ಲಿ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಅವರ ಸಿಡಿ ಪ್ರಕರಣದ ವಿಚಾರ ಚರ್ಚೆಯಾಗಿತ್ತು. ಇಂದು ಕೂಡ ಅದೇ ವಿಷಯ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್​ ಸದಸ್ಯರು ಸಿಡಿ ವಿಚಾರವಾಗಿ ಬಾವಿಗಿಳಿದು ಪ್ರತಿಭಟಿಸಿದರು.

ಸದನದಲ್ಲಿ ‘ಸಿಡಿ’ದೆದ್ದ ವಿರೋಧಪಕ್ಷ...

ಬೆಂಗಳೂರು: ಸದನದಲ್ಲಿ ಎರಡನೇ ದಿನವೂ ಮಾಜಿ ಸಚಿವ ರಮೇಶ್​ ಜಾರಕಿಕೊಳಿ ಅವರ ಸಿಡಿ ಪ್ರಕರಣ ಕೋಲಾಹಲ ಸೃಷ್ಟಿಸಿದೆ. ಇಂದು ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್​ ಸದಸ್ಯರು ಸಿಡಿ ವಿಚಾರವಾಗಿ ಬಾವಿಗಿಳಿದು ಪ್ರತಿಭಟಿಸಿದರು.  

ಸದನಕ್ಕೆ ಕೈಯಲ್ಲಿ ಸಿಡಿಗಳನ್ನು ಹಿಡಿದೇ ಆಗಮಿಸಿದ ಕೈ ನಾಯಕರು, ಸದನದ ಬಾವಿಗಿಳಿದು ಪ್ರತಿಭಟಿಸಿದರು. ಕಲಾಪದಲ್ಲಿ ಸಿಡಿ ಪ್ರದರ್ಶಿಸಿ ಆಕ್ರೋಶ ಹೊರಹಾಕಿದರು.

‘ಸಿಡಿ ಸರ್ಕಾರಕ್ಕೆ ಧಿಕ್ಕಾರ’ ಎಂದು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಪ್ರಶ್ನೋತ್ತರ ವೇಳೆ ನಡೆಸಲು ಅವಕಾಶ ನೀಡುವಂತೆ ಸ್ಪೀಕರ್ ಮನವಿ ಮಾಡಿದರು. ಆದರೆ ಇದಕ್ಕೆ ಬಗ್ಗದ ಪ್ರತಿಪಕ್ಷದ ಸದಸ್ಯರು ಇದು ಸಿಡಿ ಸರ್ಕಾರವೆಂದು ಕೂಗಿ ಪ್ರತಿಭಟಿಸಿದರು.

ಇದೇ ವೇಳೆ ‘ಶಾಸಕರ ಮಾನ ಹರಾಜು ಮಾಡುವ ಸಿಡಿ ಫ್ಯಾಕ್ಟರಿ ಆಗಿರುವ ಕಾಂಗ್ರೆಸ್​ ಪಕ್ಷ’ ಎಂದು ಬಿಜೆಪಿಯ ಶಾಸಕರೊಬ್ಬರು ಕಿಡಿಕಾರಿದರು.   

ಸ್ಪೀಕರ್​ ಕಾಗೇರಿ ಅವರ ಮನವಿಗೆ ಕಾಂಗ್ರೆಸ್​ ಪಕ್ಷದ ಸದಸ್ಯರು ಸ್ಪಂದಿಸದ ಕಾರಣ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಲಾಯಿತು. 

ಪೂರ್ವ ನಿಯೋಜಿತದಂತೆ ಪ್ರತಿಭಟನೆ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ನಡೆದಿದ್ದ‌ ಕಾಂಗ್ರೆಸ್‌ ಹಿರಿಯ ನಾಯಕರ ಸಭೆಯಲ್ಲಿ ಖಾಲಿ ಸಿಡಿ ಪ್ರದರ್ಶಿಸಿ ಕಲಾಪದಲ್ಲಿ ಧರಣಿ ನಡೆಸಲು ತೀರ್ಮಾನಿಸಲಾಗಿತ್ತು. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್​ ನಾಯಕರಾದ ರಮೇಶ್ ಕುಮಾರ್, ದಿನೇಶ್ ಗುಂಡೂರಾವ್, ಎಂ.ಬಿ ಪಾಟೀಲ್, ಜಮೀರ್ ಅಹಮದ್, ಅಜಯ್ ಸಿಂಗ್, ಈಶ್ವರ್ ಖಂಡ್ರೆ, ಎಂ ಕೃಷ್ಣಪ್ಪ ಮತ್ತಿತರರು ಸಭೆ ನಡೆಸಿ ಈ ತೀರ್ಮಾನ ಕೈಗೊಂಡಿದ್ದರು.

Last Updated : Mar 23, 2021, 12:08 PM IST

For All Latest Updates

ABOUT THE AUTHOR

...view details