ಬೆಂಗಳೂರು :ಸಿಡಿ ಪ್ರಕರಣ ಹಾಗೂ ಆರು ಸಚಿವರು ಕೋರ್ಟ್ಗೆ ಮೊರೆ ಹೋದ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಇಂದು ನಿಲುವಳಿ ಸೂಚನೆ ಮಂಡನೆಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮನವಿ ಮಾಡಿದರು.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ನೀವು ನಿಲುವಳಿ ಕೊಟ್ಟಿದ್ದೀರಾ. ಆದ್ರೆ, ಅದನ್ನು ತೆಗೆದುಕೊಳ್ಳಬೇಕಾ ಬೇಡ ಎಂಬುದು ಗೊತ್ತಿಲ್ಲ, ಸಂಶಯವಿದೆ. ನಿಮ್ಮ ಬಗ್ಗೆ ಅಲ್ಲ, ನಿಲುವಳಿ ಬಗ್ಗೆ ಸಂಶಯ ಎಂದರು.
ಆಗ ಸಿದ್ದರಾಮಯ್ಯ ಅವರು, ನನ್ನ ಮೇಲೆ ನಿಮಗೆ ಸಂಶಯವಿಲ್ಲ. ಆದರೆ, ಈ ವಿಷಯದ ಬಗ್ಗೆ ಮಾತ್ರ ನಿಮಗೆ ಸಂಶಯ. ಇದು ನನಗೆ ಗೊತ್ತು, ನೀವು ನನ್ನ ಗುಡ್ ಫ್ರೆಂಡ್ ಎಂದರು.