ಕರ್ನಾಟಕ

karnataka

ಕೆಪಿಎಲ್ ಹಗರಣ: ಐವರು ಬುಕ್ಕಿಗಳಿಗಾಗಿ ಸಿಸಿಬಿ ತಲಾಷ್

By

Published : Jan 24, 2020, 2:12 PM IST

ಕೆಪಿಎಲ್ ಆಟಗಾರರ ಜೊತೆ ಸಂಪರ್ಕ ಹೊಂದಿದ್ದ ಮಾಡೆಲ್​ಗಳನ್ನು ನಿನ್ನೆ ವಿಚಾರಣೆ ಮಾಡಲಾಗಿದೆ. ಆ ವೇಳೆ ಮಾಡೆಲ್​ಗಳು ಕೆಲ ಬುಕ್ಕಿಗಳ ಮಾಹಿತಿ ಹೊರ ಹಾಕಿದ್ದಾರೆ.

ಐವರು ಬುಕ್ಕಿಗಳಿಗಾಗಿ ಸಿಸಿಬಿ ತಲಾಷ್, CCB searching for five bookies over KPL scandal
ಐವರು ಬುಕ್ಕಿಗಳಿಗಾಗಿ ಸಿಸಿಬಿ ತಲಾಷ್

ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಕ್ರಿಕೆಟ್ ಟೂರ್ನಿಯಲ್ಲಿ ನಡೆದಿರುವ ಹಗರಣದ ತನಿಖೆಯನ್ನು ಸಿಸಿಬಿ ಪೊಲೀಸರು ನಡೆಸುತ್ತಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಬುಕ್ಕಿಗಳನ್ನು ಪತ್ತೆ ಹಚ್ಚುವ ಉದ್ದೇಶದಿಂದ ಶೋಧ ಮುಂದುವರೆಸಿದ್ದಾರೆ‌‌.

ಕೆಪಿಎಲ್ ಆಟಗಾರರ ಜೊತೆ ಸಂಪರ್ಕ ಹೊಂದಿದ್ದ ಮಾಡೆಲ್​ಗಳನ್ನು ನಿನ್ನೆ ವಿಚಾರಣೆ ನಡೆಸಲಾಗಿದೆ. ಆ ವೇಳೆ ಮಾಡೆಲ್​ಗಳು ಕೆಲ ಬುಕ್ಕಿಗಳ ಬಗ್ಗೆ ಬಾಯ್ಬಿಟ್ಟಿದ್ದಾರೆ. ಈ ಹಿನ್ನೆಲೆ ಸಿಸಿಬಿ ಈಗ ಐವರು ಬುಕ್ಕಿಗಳ ಬೆನ್ನುಬಿದ್ದಿದೆ. ಆದರೆ, ಬುಕ್ಕಿಗಳ ಬಗ್ಗೆ ಮಾಹಿತಿ ಹೊರ ಬೀಳುತ್ತಿದ್ದಂತೆ ಅವರು ವಿದೇಶಕ್ಕೆ ಹಾರಿ ತಲೆಮರೆಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಏರ್ಪೋರ್ಟ್​ಗಳಲ್ಲಿ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದೆ. ಈ ಐವರು ಬುಕ್ಕಿಗಳ ಬಂಧನ ಮಾಡಿದರೆ ಕೆಲ ಪ್ರತಿಷ್ಠಿತ ಆಟಗಾರರ ಹೆಸರು ಹೊರಬರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ದೋಷಾರೋಪ ಪಟ್ಟಿ ಸಲ್ಲಿಕೆ:
ಈಟಿವಿ ಭಾರತ್ ಜೊತೆ ಮಾತನಾಡಿದ ತನಿಖಾಧಿಕಾರಿಯೊಬ್ಬರು, ಕೆಪಿಎಲ್ ಹಗರಣದ ತನಿಖೆ ನಡೆದ ದಿನದಿಂದ ಇಲ್ಲಿಯವರೆಗೆ ನಡೆದ ಎಲ್ಲಾ ಬೆಳವಣಿಗೆಗಳ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲು ಸಿದ್ಧತೆ ಮಾಡಿದ್ದೇವೆ. ಪ್ರಮುಖವಾಗಿ ಇದರಲ್ಲಿ ಕೆಪಿಎಲ್ ಮಾಲೀಕ, ಕ್ರಿಕೆಟ್ ಕೋಚ್​ಗಳು, ಕೆಲ ಪ್ರತಿಷ್ಟಿತ ಬೌಲರ್‌ಗಳು, ಆಟಗಾರರು‌ ಹಾಗು ಬುಕ್ಕಿಗಳ ಮಾಹಿತಿ, ನಟಿಯರು ಹಾಗೂ ಮಾಡೆಲ್​ಗಳ ಉಲ್ಲೇಖ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details