ಬೆಂಗಳೂರು: ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣ ಸದ್ಯ ರಾಜಕೀಯ ಮಜಲುಗಳನ್ನ ಪಡೆಯುತ್ತಿದ್ದು, ಪಕ್ಕಾ ಸಾಕ್ಷ್ಯಾಧಾರದ ಮೇರೆಗೆ ಘಟನೆಗೆ ಕುಮ್ಮಕ್ಕು ನೀಡಿದ ಆರೋಪಿಯನ್ನ ಖೆಡ್ಡಾಕ್ಕೆ ಕೆಡವಲು ಸಿಸಿಬಿ ಪ್ಲಾನ್ ಮಾಡಿದೆ.
ಶಾಸಕ ಅಖಂಡ ಶ್ರೀನಿವಾಸಮೂರ್ತಿ ರಾಜಕೀಯ ಜಿದ್ದಾಜಿದ್ದಿಗೋಸ್ಕರ ಈ ರೀತಿಯಾಗಿದೆ ಎಂದು ಹೇಳಿಕೆ ನೀಡಿದ್ದು, ಸದ್ಯ ಮಾಜಿ ಮೇಯರ್ ಸಂಪತ್ ಜೊತೆ ಯಾರೆಲ್ಲಾ ಲಿಂಕ್ ಹೊಂದಿದ್ದಾರೆ ಅವರನ್ನ ಕರೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮುನೇಶ್ವರ ವಾರ್ಡ್ ಕಾಂಗ್ರೆಸ್ ಕಾರ್ಪೋರೇಟರ್ ಪತಿ ಸೈಯದ್ ನಾಸಿರ್ನಿಂದ 15 ಪುಟಗಳ ಹೇಳಿಕೆ ಪಡೆದಿದ್ದಾರೆ.