ಕರ್ನಾಟಕ

karnataka

ETV Bharat / state

ಹಬ್ಬದ ಖುಷಿಯಲ್ಲಿ ಕೋವಿಡ್​ ನಿಯಮ ಮರೆತ ಜನ: ಬೆಂಗಳೂರಲ್ಲಿ 100ಕ್ಕೂ ಹೆಚ್ಚು ಪ್ರಕರಣ ದಾಖಲು - Home Minister Basavaraj Bommai

ಕಳೆದ ನಾಲ್ಕು ದಿನಗಳಿಂದ ದಕ್ಷಿಣ ವಿಭಾಗ ಪೊಲೀಸರು ಕೋವಿಡ್​ ನಿಯಮ ಉಲ್ಲಂಘನೆ ಮಾಡಿರುವ 100ಕ್ಕೂ ಹೆಚ್ಚು ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

case registerd on 100 people who broke covid rule
ಹಬ್ಬದ ಖರೀದಿ ಖುಷಿಯಲ್ಲಿ ಕೋವಿಡ್​ ನಿಯಮ ಮರೆತ ಜನ: 100 ಪ್ರಕರಣ ದಾಖಲು

By

Published : Jul 31, 2020, 4:32 PM IST

ಬೆಂಗಳೂರು:ಇಂದು ವರಮಹಾಲಕ್ಷೀ ಪೂಜೆ ಹಾಗೂ ಬಕ್ರೀದ್ ಹಬ್ಬ ಇರುವ ಹಿನ್ನೆಲೆ ಜನ‌‌ ಸಾಮಾಜಿಕ ಅಂತರವಿಲ್ಲದೆ, ‌ಮಾಸ್ಕ್ ಹಾಕದೇ ಮೈಮರೆತು ಮಾರುಕಟ್ಟೆಯಲ್ಲಿ ಹೂವು, ಖರೀದಿಸುತ್ತಿರುವ ದೃಶ್ಯ ಕಂಡು ಬಂತು. ಈ ಸಂಬಂಧ ದಕ್ಷಿಣ ವಿಭಾಗದ ಡಿಸಿಪಿ ಡಾ. ರೋಹಿಣಿ ಕಟೋಚ್ ಅವರ ತಂಡ ವಿಶೇಷ ಕಾರ್ಯಾಚರಣೆ ನಡೆಸಿ ಹಲವರ ವಿರುದ್ಧ ಪ್ರಕರಣ ದಾಖಲಿಸಿದೆ.

ಹಬ್ಬದ ಖರೀದಿ ಖುಷಿಯಲ್ಲಿ ಕೋವಿಡ್​ ನಿಯಮ ಮರೆತ ಜನ: 100 ಕ್ಕೂ ಹೆಚ್ಚು ಮಂದಿ ವಿರುದ್ಧ ಪ್ರಕರಣ

ನಗರದಲ್ಲಿ‌ ಕೊರೊನಾ ಸೋಂಕನ್ನು ತಡೆಗಟ್ಟಲು ಇತ್ತೀಚೆಗೆ ಗೃಹ ಸಚಿವ ಬಸವರಾಜ್​ ಬೊಮ್ಮಾಯಿ ಹಾಗೂ ನಿರ್ಗಮಿತ ನಗರ ಪೊಲೀಸ್​ ಆಯುಕ್ತ ಭಾಸ್ಕರ್ ರಾವ್ ಅವರು, ಜನರು ಕೊರೊನಾ ಸೋಂಕನ್ನು ಮರೆತು ನಿಯಮ ಉಲ್ಲಂಘಿಸಿದರೆ ಎನ್. ಡಿ. ಎಂ. ಎ ಕಾಯ್ದೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಪೊಲೀಸ್​ ಸಿಬ್ಬಂದಿಗೆ ಸೂಚಿಸಿದ್ದರು. ಈ ಹಿನ್ನೆಲೆ ಕಳೆದ ನಾಲ್ಕು ದಿನಗಳಿಂದ ದಕ್ಷಿಣ ವಿಭಾಗ ಪೊಲೀಸರು ನಿಯಮ ಉಲ್ಲಂಘನೆ ಮಾಡಿರುವ 100 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪುಟ್ಟೇನಹಳ್ಳಿಯಲ್ಲಿ-19, ಸುಬ್ರಮಣ್ಯಪುರದ -11, ಬಸವನಗುಡಿಯ-11, ಕುಮಾರಸ್ವಾಮಿ ಲೇಔಟ್- 5, ತಲಘಟ್ಟಪುರದ -11, ಜೆ. ಪಿ. ನಗರದ- 9, ಜಯನಗರದ 3, ಸಿದ್ದಾಪುರದ 4 ಹೀಗೆ ದಕ್ಷಿಣ ವಿಭಾಗ ವ್ಯಾಪ್ತಿಯಲ್ಲಿ ಬರುವ ಠಾಣೆಗಳಲ್ಲಿ ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಕ್ರಮ ಕೈಗೊಂಡು ದಂಡ ವಸೂಲಿ ‌ಮಾಡಿದ್ದಾರೆ.

ವಸ್ತುಗಳನ್ನು ಕೊಳ್ಳಲು ಬರುವ ಗ್ರಾಹಕರನ್ನು ಸರಿಯಾಗಿ ನಿರ್ವಹಿಸಿದ ಕೆಲ ಅಂಗಡಿ ಮಾಲೀಕರ ವಿರುದ್ಧವೂ ಕೇಸ್ ದಾಖಲಿಸಿದ್ದಾರೆ. ಸದ್ಯ ವಿಶೇಷ ಕಾರ್ಯಾಚರಣೆ ಇನ್ನೂ ‌ಮುಂದುವರೆದಿದೆ.‌

ABOUT THE AUTHOR

...view details