ಬೆಂಗಳೂರು:ಯಾವುದೇ ರಾಜಕೀಯ ಪ್ರೇರಿತ ಸಂಘಟನೆಗಳು ನಡೆಸುವ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗದಂತೆ ಖಾಸಗಿ ಅನುದಾನ ರಹಿತ ಶಾಲೆಗಳ ರಾಜ್ಯ ಸಂಘಟನೆ ( ಕ್ಯಾಮ್ಸ್) ಪೋಷಕರಿಗೆ, ಶಾಲಾ ಆಡಳಿತ ಮಂಡಳಿಗೆ ತಿಳಿವಳಿಕಾ ಸೂಚಿ ಹೊರಡಿಸಿದೆ ಎಂದು ಕಾರ್ಯದರ್ಶಿ ಶಶಿಕುಮಾರ್ ಹೇಳಿದರು.
ಪ್ರತಿಭಟನೆಗಳಿಗೆ ವಿದ್ಯಾರ್ಥಿಗಳನ್ನ ಕರೆದೊಯ್ಯದಂತೆ ಪೋಷಕರಿಗೆ ಕ್ಯಾಮ್ಸ್ ತಿಳಿವಳಿಕಾ ಸೂಚಿ - Cams appeal to parents not to send students to protests
ರಾಜ್ಯದಲ್ಲಿ ಅನೇಕ ಸಂಘಟನೆಗಳು ನಡೆಸುತ್ತಿರುವಪ್ರತಿಭಟನೆಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ ಪೋಷಕರು ಪ್ರತಿಭಟನೆಗೆ ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗದಂತೆ ಖಾಸಗಿ ಅನುದಾನ ರಹಿತ ಶಾಲೆಗಳ ರಾಜ್ಯ ಸಂಘಟನೆ ( ಕ್ಯಾಮ್ಸ್) ಪೋಷಕರಿಗೆ, ಶಾಲಾ ಆಡಳಿತ ಮಂಡಳಿಗೆ ತಿಳಿವಳಿಕಾ ಸೂಚಿ ಹೊರಡಿಸಿದೆ.
![ಪ್ರತಿಭಟನೆಗಳಿಗೆ ವಿದ್ಯಾರ್ಥಿಗಳನ್ನ ಕರೆದೊಯ್ಯದಂತೆ ಪೋಷಕರಿಗೆ ಕ್ಯಾಮ್ಸ್ ತಿಳಿವಳಿಕಾ ಸೂಚಿ shashi kumar](https://etvbharatimages.akamaized.net/etvbharat/prod-images/768-512-5686258-thumbnail-3x2-mgnd.jpg)
ಕಾರ್ಯದರ್ಶಿ ಶಶಿಕುಮಾರ್
ಖಾಸಗಿ ಅನುದಾನ ರಹಿತ ಶಾಲೆಗಳ ರಾಜ್ಯ ಸಂಘಟನೆ ಕಾರ್ಯದರ್ಶಿ
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ರಾಜ್ಯದಲ್ಲಿ ಅನೇಕ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ ಪೋಷಕರು ಪ್ರತಿಭಟನೆಗೆ ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗಬಾರದು. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಮನಸ್ಸಿನ ಮೇಲೆ ಯಾವುದೇ ದ್ವೇಷದ ಪರಿಣಾಮ ಬೀಳಬಾರದೆಂಬ ಕಾರಣಕ್ಕೆ ಇಂತಹದೊಂದು ಆದೇಶ ಹೊರಡಿಸಿದೆ ಎಂದು ತಿಳಿಸಿದರು.
ಕ್ಯಾಮ್ಸ್ ತಮ್ಮ ಸದಸ್ಯತ್ವದ ಶಾಲೆಗಳಿಗೆ ಈ ಆದೇಶ ನೀಡಿದ್ದು, ಶಾಲಾ ಶಿಕ್ಷಕರು,ಆಡಳಿತ ಮಂಡಳಿಯವರು ಪಾಲಕ ಪೋಷಕರಿಗೆ ಜಾಗೃತಿ ಮೂಡಿಸುಂತೆ ಸೂಚಿಸಲಾಗಿದೆ ಎಂದರು.
TAGGED:
Bangalore latest news