ಕರ್ನಾಟಕ

karnataka

By

Published : Mar 10, 2022, 4:34 PM IST

Updated : Mar 10, 2022, 4:53 PM IST

ETV Bharat / state

ಬೆಂಗಳೂರು: ಕ್ಯಾಬ್​ನಿಂದ ಇಳಿಯುವಾಗ ಯುವತಿಯ ಖಾಸಗಿ ಅಂಗ ಮುಟ್ಟಿ ಅಸಭ್ಯ ವರ್ತನೆ ಆರೋಪ..ಚಾಲಕ ಅರೆಸ್ಟ್

ಕ್ಯಾಬ್​​ನಿಂದ ಇಳಿಯುವಾಗ ಯುವತಿ ಚಾಲಕನ ಸಹಾಯ ಕೇಳಿದ್ದಳಂತೆ. ಈ ವೇಳೆ ಖಾಸಗಿ ಅಂಗ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿ ಆಕೆ ನೀಡಿದ ದೂರಿನ ಮೇರೆಗೆ ರಾತ್ರೋರಾತ್ರಿ ಕ್ಯಾಬ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

cab-driver-arrest
ಕ್ಯಾಬ್ ಚಾಲಕ ಅರೆಸ್ಟ್

ಬೆಂಗಳೂರು:ಯುವತಿ ಜೊತೆಗೆ ಅಸಭ್ಯ ವರ್ತನೆ ತೋರಿದ ಆರೋಪದಡಿ ಕ್ಯಾಬ್ ಚಾಲಕನನ್ನು ಜೀವನ ಭೀಮಾನಗರ ಪೊಲೀಸರು ಬಂಧಿಸಿದ್ದಾರೆ‌.

ಕ್ಯಾಬ್ ಚಾಲಕ ಮಂಜುನಾಥ್​

ಮಾರ್ಚ್ 9ರ ಮಧ್ಯರಾತ್ರಿ 1ರಿಂದ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ‌. ಕಾಕೋಳು ಮೂಲದ ಮಂಜುನಾಥ್ ಅವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ. ನಿನ್ನೆ ರಾತ್ರಿ ಯುವತಿ ಹಾಗೂ ಆಕೆಯ ಗೆಳೆಯರಿಬ್ಬರು ಪಾರ್ಟಿ ಮುಗಿಸಿ ಮನೆಗೆ ಹೋಗಲು ಕ್ಯಾಬ್ ಬುಕ್ ಮಾಡಿದ್ದಾರೆ.

ಕ್ಯಾಬ್​​ನಿಂದ ಇಳಿಯುವಾಗ ಚಾಲಕನ ಸಹಾಯ ಕೇಳಿದ್ದಾಳಂತೆ. ಈ ವೇಳೆ ಆಕೆಯ ಖಾಸಗಿ ಅಂಗ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿ ನೀಡಿದ ದೂರಿನ ಮೇರೆಗೆ ಬುಧವಾರ ರಾತ್ರೋರಾತ್ರಿ ಕ್ಯಾಬ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಓದಿ:ನೂರಾರು ವರ್ಷಗಳ ಇತಿಹಾಸವಿರುವ ಕಾಂಗ್ರೆಸ್​ಗೆ ಜ್ಞಾನೋದಯ ಮಾಡಿಸುವ ಫಲಿತಾಂಶ ಇದು: ಹೆಚ್​​​ಡಿಕೆ

Last Updated : Mar 10, 2022, 4:53 PM IST

ABOUT THE AUTHOR

...view details