ಬೆಂಗಳೂರು:ಅನರ್ಹರಿಂದ ತೆರವಾಗಿ ತೀವ್ರ ಕತೂಹಲಕ್ಕೆ ಕಾರಣವಾಗಿರುವ 15 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಮೊದಲ ಹಂತದಲ್ಲಿ 8 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ.
ಮೊದಲ ಪಟ್ಟಿಯಲ್ಲಿ ಉತ್ತರ ಕನ್ನಡ ಯಲ್ಲಾಪುರ ಕ್ಷೇತ್ರದಿಂದ ಭೀಮಣ್ಣ ನಾಯ್ಕ್, ಹಿರೇಕೆರೂರಿಂದ ಬಿ.ಹೆಚ್. ಬನ್ನಿಕೋಡ್, ರಾಣೆಬೆನ್ನೂರಿಂದ ಕೆ.ಬಿ. ಕೋಳಿವಾಡ, ಚಿಕ್ಕಬಳ್ಳಾಪುರದಿಂದ ಎಂ. ಅಂಜನಪ್ಪ, ಕೆ.ಆರ್. ಪುರ ಎಂ. ನಾರಾಯಣ ಸ್ವಾಮಿ, ಮಹಾಲಕ್ಮಿ ಲೇಔಟ್ ಎಂ. ಶಿವರಾಜ್, ಹೊಸಕೋಟೆ ಪದ್ಮಾವತಿ ಸುರೇಶ್, ಹುಣಸೂರು ಹೆಚ್.ಪಿ. ಮಂಜುನಾಥ್ಗೆ ಟಿಕೆಟ್ ನೀಡಲಾಗಿದೆ.