ಕರ್ನಾಟಕ

karnataka

By

Published : Apr 3, 2021, 3:33 PM IST

ETV Bharat / state

ನಾಳೆ ಕನಕ ಗುರುಪೀಠದ 5ನೇ ವಾರ್ಷಿಕೋತ್ಸವ: ಮುಖಾ-ಮುಖಿಯಾಗ್ತಾರಾ ಬಿಎಸ್​​ವೈ-ಈಶ್ವರಪ್ಪ?

ರಾಜ್ಯಪಾಲರಿಗೆ ದೂರು ನೀಡಿರುವ ಈಶ್ವರಪ್ಪ ಈವರೆಗೂ ಸಿಎಂ ಬಿಎಸ್​ವೈ ಜೊತೆ ಮಾತನಾಡಿಲ್ಲ. ಅಲ್ಲದೆ ಬೇರೆಲ್ಲೂ ಒಂದೇ ಕಡೆ ಇಬ್ಬರೂ ಕಾಣಿಸಿಕೊಂಡಿಲ್ಲ. ಆದರೆ ನಾಳೆ ಕನಕ ಗುರುಪೀಠದ 5ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಬಿಎಸ್​​​ವೈ ಭಾಗಿಯಾಗುತ್ತಿದ್ದು, ಈ ವೇಳೆ ಈಶ್ವರಪ್ಪ ಸಹ ಹಾಜರಿರುವ ಸಾಧ್ಯತೆ ಇದೆ.

bsy-eshwarappa
ಬಿಎಸ್​​ವೈ-ಈಶ್ವರಪ್ಪ

ಬೆಂಗಳೂರು: ನಾಳೆ ಕಾಗಿನೆಲೆ ಮಹಾಸಂಸ್ಥಾನದ ಕನಕಗುರುಪೀಠ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಿಎಂ ದಾವಣಗೆರೆ ಜಿಲ್ಲೆಗೆ ತೆರಳಲಿದ್ದಾರೆ. ಹರಿಹರ ತಾಲೂಕಿನ ಬೆಳ್ಳೂಡಿಯಲ್ಲಿ ಕನಕ ಗುರುಪೀಠದ 5ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.

ಆದರೆ ಈ ಕಾರ್ಯಕ್ರಮದ ವೇಳೆ ಸಿಎಂ ಯಡುಯೂರಪ್ಪ ಹಾಗೂ ಸಚಿವ ಕೆ ಎಸ್ ಈಶ್ವರಪ್ಪ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ನಾಳೆ ಈ ಬೆಳ್ಳೂಡಿಯ ಕಾರ್ಯಕ್ರಮದಲ್ಲಿ ಸಚಿವ ಈಶ್ವರಪ್ಪ ಮತ್ತು ಸಿಎಂ ಬಿಎಸ್​​​​ವೈ ಮುಖಾಮುಖಿ ಆಗಲಿದ್ದಾರಾ ಎಂಬುದರ ಬಗ್ಗೆ ಕುತೂಹಲ ಹೆಚ್ಚಿದೆ.

ರಾಜ್ಯಪಾಲರಿಗೆ ದೂರು ಕೊಟ್ಟ ಬಳಿಕ ಇದುವರೆಗೂ ಸಿಎಂ ಬಿಎಸ್​​ವೈ ಅವರನ್ನು ಸಚಿವ ಈಶ್ವರಪ್ಪ ಭೇಟಿಯಾಗಿಲ್ಲ. ಈ ಕಾರ್ಯಕ್ರಮದಲ್ಲಿ ಉಭಯ ನಾಯಕರು ವೇದಿಕೆ ಹಂಚಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:ಸಿಎಂ ಬಿಎಸ್‌ವೈ-ಸಚಿವ ಈಶ್ವರಪ್ಪ ಶೀತಲ ಸಮರ: ಅಡಕತ್ತರಿಯಲ್ಲಿ ಅಧಿಕಾರಿಗಳು

ABOUT THE AUTHOR

...view details