ಕರ್ನಾಟಕ

karnataka

By

Published : Nov 27, 2019, 10:21 AM IST

ETV Bharat / state

ಕೆ.ಆರ್.ಪುರಂನಲ್ಲಿ ಬಿಎಸ್​ವೈ ಪ್ರಚಾರ ಇಂದು... 10 ಸಾವಿರ ಮಂದಿಗೆ ಆಸನ ವ್ಯವಸ್ಥೆ

ಬೆಂಗಳೂರಿನ ಕೆ.ಆರ್.ಪುರಂ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜ ಪರ ಮತಯಾಚನೆಗೆ ಸಿಎಂ ಬಿಎಸ್​ವೈ ಇಂದು ಆಗಮಿಸಲಿದ್ದಾರೆ. ಅನೇಕ ರಾಜಕೀಯ ನಾಯಕರು ಪಾಲ್ಗೊಳ್ಳುವ ಸಾಧ್ಯತೆ ಇದೆ.

BS Y campaign in KR Puram today
ಕೆ.ಆರ್.ಪುರಂನಲ್ಲಿ ಬಿಎಸ್​ವೈ ಪ್ರಚಾರ ಇಂದು

ಬೆಂಗಳೂರು: ಕೆ.ಆರ್​ಪುರಂ ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜ ಪರ ಇಂದು ಬಿಎಸ್​ವೈ ಬೃಹತ್​ ಸಮಾವೇಶದಲ್ಲಿ ಮತಯಾಚಿಸಲಿದ್ದಾರೆ.

ಮಧ್ಯಾಹ್ನ 3 ಗಂಟೆಗೆ ಐಟಿಐ ಕ್ರೀಡಾಂಗಣದಲ್ಲಿ ಏರ್ಪಡಿಸಿರುವ ಸಾರ್ವಜನಿಕ ಸಮಾವೇಶಕ್ಕೆ ಸಿಎಂ‌ ಯಡಿಯೂರಪ್ಪ ಆಗಮಿಸಲಿದ್ದಾರೆ. ಜೊತೆಗೆ ಕ್ಷೇತ್ರದ ಬಿಜೆಪಿ ಉಸ್ತುವಾರಿಯಾಗಿರುವ ಕಂದಾಯ ಸಚಿವ ಆರ್.ಅಶೋಕ್ ಸೇರಿದಂತೆ ಹಲವು ಸಚಿವರು ಪಾಲ್ಗೊಳ್ಳಲಿದ್ದಾರೆ.

ಕೆ.ಆರ್.ಪುರಂನಲ್ಲಿ ಬಿಎಸ್​ವೈ ಪ್ರಚಾರ ಇಂದು

ಈಗಾಗಲೇ ಐಟಿಐ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಸಮಾವೇಶ ಸಿದ್ಧತೆ ಪೂರ್ಣಗೊಂಡಿದ್ದು, 10 ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದೆ. ಸುಮಾರು 25-30 ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಹಾಗೂ ಕಾರ್ಯಕರ್ತರು ಸೇರುವ ನಿರೀಕ್ಷೆ ಇದೆ. ಕಂದಾಯ ಸಚಿವ ಆರ್.ಅಶೋಕ್ ಸಮಾವೇಶದ ಸಿದ್ಧರೆ ಪರಿಶೀಲಿಸಿದ್ದಾರೆ.

ABOUT THE AUTHOR

...view details