ಬೆಂಗಳೂರು: ಕೆಂಗೇರಿಯಲ್ಲಿ ನಡೆಯುತ್ತಿದ್ದ ಕರಗದ ವೇಳೆ ಗುರಾಯಿಸಿದ ಎಂಬ ಕಾರಣಕ್ಕೆ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಸ್ನೇಹಿತರ ಜೊತೆ ಕೆಂಗೇರಿ ಕರಗ ನೋಡಲು ಬಂದಿದ್ದ ಭರತ್ ಕೊಲೆಯಾದವ. ಬೈಕ್ ಟಚ್ ಆಯ್ತು ಅಂತಾ ಯುವಕರ ಗುಂಪೊಂದು ಭರತ್ ಜೊತೆ ಕಿರಿಕ್ ಮಾಡಿದೆ.
ಈ ವೇಳೆ ಭರತ್ ಗುರಾಯಿಸಿದ್ದಾನೆ ಎನ್ನಲಾಗಿದೆ. ಇಷ್ಟಕ್ಕೆ ಸಿಟ್ಟಿಗೆದ್ದ ಯುವಕರು ಜಗಳ ಆರಂಭಿಸಿದ್ದಾರೆ. 10 ಜನ ಯುವಕರನ್ನು ಕರೆಸಿದ ಪುಂಡರ ಗುಂಪು ಭರತ್ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.
ಇದನ್ನೂ ಓದಿ:ಜೆಡಿಎಸ್ ದಳಪತಿಗಳಿಂದ ಮೈಸೂರು ರೌಂಡ್ಸ್.. ಸಾರ್ವತ್ರಿಕ ಚುನಾವಣಾ ಅಖಾಡಕ್ಕೆ ತಾಲೀಮು..
ಕೆಂಗೇರಿ ರೈಲ್ವೆ ಟ್ರ್ಯಾಕ್ ಬಳಿ ಈ ಘಟನೆ ನಡೆದಿದ್ದು, ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಡರಾತ್ರಿ 2 ಗಂಟೆ ಸುಮಾರಿಗೆ ಘಟನೆ ನಡೆದಿದೆ. ರೈಲ್ವೆ ಸಿಬ್ಬಂದಿ ಯುಡಿಆರ್ ಪ್ರಕರಣವೊಂದರ ಪರಿಶೀಲನೆ ನಡೆಸುವಾಗ ಗುಂಪಾಗಿ ಗ್ಯಾಂಗ್ವೊಂದು ದೇಹ ಎಳೆದುಕೊಂಡು ಹೋಗ್ತಿರೋದು ಕಂಡು ಬಂದಿದೆ.
ಆ ವೇಳೆ ರೈಲ್ವೆ ಸಿಬ್ಬಂದಿ ಅವರ ಬಳಿ ಹೋಗಲು ಮುಂದಾದಾಗ ಆರೋಪಿಗಳು ಮೃತದೇಹ ಬಿಟ್ಟು ಪರಾರಿಯಾಗಿದ್ದಾರೆ. ಈ ಸಂಬಂಧ ರೈಲ್ವೆ ಎಸ್ಪಿ ಸಿರಿಗೌರಿ ಮಾಹಿತಿ ನೀಡಿದ್ದಾರೆ.