ಬೆಂಗಳೂರು: ಕ್ಷುಲ್ಲಕ ಕಾರಣಕ್ಕಾಗಿ ತಮ್ಮನನ್ನು ಅಣ್ಣನೇ ಕೊಲೆ ಮಾಡಿರುವ ಘಟನೆ ಕೆ.ಆರ್ ಪುರಂ ಠಾಣಾ ವ್ಯಾಪ್ತಿಯ ಪ್ರಿಯಾಂಕ ನಗರದಲ್ಲಿ ನಡೆದಿದೆ. ಬಾಲಕೃಷ್ಣ(25) ಕೊಲೆಯಾಗಿರುವ ತಮ್ಮ, ಕೊಲೆ ಆರೋಪಿ ರಾಮಕೃಷ್ಣ ಎಂಬುವರನ್ನು ಬಂಧಿಸಲಾಗಿದೆ.
ತನ್ನನ್ನು ಗುರಾಯಿಸಿ ನೋಡಿದ ಎನ್ನುವ ಕಾರಣಕ್ಕೆ ರಾಮಕೃಷ್ಣ ತಮ್ಮನ ಬಳಿ ಜಗಳವಾಡಲು ಆರಂಭಿಸಿದ್ದಾರೆ. ಆದರೆ ಇದು ವಿಕೋಪಕ್ಕೆ ಹೋಗಿ ರಾಮಕೃಷ್ಣ ಚಾಕುವಿನಿಂದ ತಮ್ಮನನ್ನು ಇರಿದು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.