ಬೆಂಗಳೂರು: ಸಿಲಿಕಾನ್ ಸಿಟಿ ಹಾಗೂ ರಾಜ್ಯದಲ್ಲಿ ಉಗ್ರರ ಕರಿನೆರಳು ಇರುವ ಬೆನ್ನಲ್ಲೇ ರೈಲ್ವೆ ಸ್ಟೇಷನ್, ಮೆಟ್ರೋ ಸ್ಟೇಷನ್ಗಳಲ್ಲಿ ಐಸಿಸ್ ಉಗ್ರರ ಸಹಾಯದಿಂದ ಬಾಂಬ್ ಸ್ಫೋಟಿಸುವ ಬೆದರಿಕೆ ಬಂದಿದೆ. @gurukerala.rameshwar.sripada ಎಂಬ ಟ್ವಿಟ್ಟರ್ ಖಾತೆಯಿಂದ ಬೆದರಿಕೆ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೋಸ್ಟ್ ವೈರಲ್ ಹಿನ್ನೆಲೆ ಎಚ್ಚೆತ್ತುಕೊಂಡ ರಾಜ್ಯ ಗುಪ್ತಚರ ಇಲಾಖೆ ಯಶವಂತಪುರ, ಬೆಂಗಳೂರು ಮೆಟ್ರೋ ಸ್ಟೇಷನ್, ವಿಧಾನಸೌಧ ಸೇರಿದಂತೆ ಅಗತ್ಯ ಕಡೆ ಭೇಟಿ ನೀಡಿ ಭದ್ರತೆ ಕೈಗೊಂಡಿದ್ದಾರೆ. ಪೋಸ್ಟ್ ಮಾಡಿದ ಕಿಡಿಗೇಡಿ ಈ ಮೂಲಕ ಪೊಲೀಸರಿಗೆ ಬೆದರಿಕೆ ಹಾಕಿದ್ದಾನೆ. ನಾನು ಭಾರತದ ಯಾವುದೇ ಮೂಲೆಯಲ್ಲಿ ಬೇಕಾದ್ರೂ ರೈಲು ಸ್ಫೋಟಿಸಬಹುದು, ಎಚ್ಚರಿಕೆಯಿಂದಿರಿ ಎಂದಿದ್ದಾನೆ.