ಬೆಂಗಳೂರು: ಸುಮಾರು 2 ತಿಂಗಳ ಲಾಕ್ಡೌನ್ ನಂತರ ನಾಳೆಯಿಂದ ರಾಜ್ಯಾದ್ಯಂತ ಅನ್ಲಾಕ್ ಆರಂಭವಾಗಲಿದೆ. ಈ ಮಧ್ಯೆ ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ ಸೇವೆ ನಾಳೆಯಿಂದ ಪುನಾರಂಭಿಸಲು ನಿಗಮಗಳು ಸಿದ್ಧತೆ ನಡೆಸುತ್ತಿವೆ.
ಪ್ರಯಾಣಿಕರ ಬೇಡಿಕೆ ಆಧರಿಸಿ ಬಸ್ ಸಂಚಾರ ಇರಲಿದ್ದು, ಶೇ 50 ರಷ್ಟು ಬಸ್ ಓಡಿಸಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ನಾಳೆ ಒಟ್ಟು 2 ಸಾವಿರ ಬಿಎಂಟಿಸಿ ಬಸ್ಸ್ಉಗಳು ರಸ್ತೆಗಿಳಿಯಲಿವೆ. ಬೆಂಗಳೂರು ನಗರ ಹಾಗೂ ಹೊರ ಭಾಗದಲ್ಲಿ ಬೆಳಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಸಂಜೆ 7 ಗಂಟೆಯ ನಂತರ ಬಿಎಂಟಿಸಿ ಓಡಾಟ ಇರಲ್ಲ. ಹೀಗಾಗಿ ಸಂಜೆ 7 ಗಂಟೆಗೆ ನಿಲ್ದಾಣದಿಂದ ಬಸ್ಗಳು ನಿರ್ಗಮಿಸಲಿವೆ. ಇನ್ನು ಬೆಳ್ಳಂಬೆಳಗ್ಗೆ ಹಾಗೂ ತಡ ರಾತ್ರಿಯಲ್ಲಿ ಬಸ್ ಸಂಚಾರ ನಿಷೇಧಿಸಲಾಗಿದೆ. ಜೊತೆಗೆ ಚಾಲನ ಸಿಬ್ಬಂದಿ ಅವಧಿಯನ್ನ 8 ಗಂಟೆ ಮೀರದಂತೆ ಕ್ರಮಕೈಗೊಳ್ಳಲಾಗಿದೆ. ಪ್ರತಿ ಡಿಪೋಗಳಲ್ಲಿ 5 ಹೆಚ್ಚುವರಿ ಬಸ್ಗಳನ್ನ ಕಾಯ್ದಿರಿಸುವುದು. ಬಸ್ಗಳಲ್ಲಿ ಮಾರ್ಗಸೂಚಿ ಫಲಕ ಕಡ್ಡಾಯವಾಗಿ ಪ್ರದರ್ಶಿಸುವುದು. ಬಸ್ ನಲ್ಲಿ ಶೇ 50 ಜನರಿಗೆ ಮಾತ್ರ ಅವಕಾಶ ಎಂಬ ನಿಯಮಗಳನ್ನ ಪಾಲಿಸಬೇಕಿದೆ.