ಕರ್ನಾಟಕ

karnataka

ETV Bharat / state

ಮೊದಲು ಉಪ ಚುನಾವಣೆಯಲ್ಲಿ ತಾಕತ್ತು ತೋರಿಸಿ : ಕಾಂಗ್ರೆಸ್​ ಕಾಲೆಳೆದ ಬಿಜೆಪಿ - bjp latest tweet

ಘೋಷಣೆಗೊಂಡಿರುವ ಉಪಚುನಾವಣೆಯಲ್ಲಿ ನಿಮ್ಮ ತಾಕತ್ತು ಮೊದಲು ತೋರಿಸಿ. ಆಮೇಲೆ ವಿಧಾನಸಭೆ ವಿಸರ್ಜಿಸುವ ಬಗ್ಗೆ ಚಿಂತೆ ಮಾಡುವಿರಂತೆ. ಜೈಲಿನಿಂದ ಬಿಡುಗಡೆಗೊಂಡ ಭ್ರಷ್ಟಾಚಾರದ ಆರೋಪಿ ಅಧ್ಯಕ್ಷರಿಗೆ ಒಂದೇ ಒಂದು ಚುನಾವಣೆ ಗೆಲ್ಲಲಾಗಲಿಲ್ಲ. ಈ ಉಪಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಎಂದು‌ ಬಿಜೆಪಿ ಟ್ವೀಟ್ ಮೂಲಕ ಕಾಂಗ್ರೆಸ್ ಕಾಲೆಳೆದಿದೆ.

bjp tweet against congress
ಮೊದಲು ಉಪ ಚುನಾವಣೆಯಲ್ಲಿ ತಾಕತ್ತು ತೋರಿಸಿ: ಕಾಂಗ್ರೆಸ್​ ಕಾಲೆಳೆದ ಬಿಜೆಪಿ

By

Published : Mar 26, 2021, 7:09 PM IST

ಬೆಂಗಳೂರು: ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬನ್ನಿ ಎನ್ನುವ ಕಾಂಗ್ರೆಸ್ ಟ್ವೀಟ್​​ಗೆ ಉತ್ತರಿಸಿರುವ ಬಿಜೆಪಿ, ಮೊದಲು ಉಪ ಚುನಾವಣೆಯಲ್ಲಿ ತಾಕತ್ತು ತೋರಿಸಿ, ತುಕ್ಕು ಹಿಡಿದಿದ್ದು ಯಾರಿಗೆ ಎಂದು ಜನರೇ ಉತ್ತರಿಸುತ್ತಾರೆ ಎಂದು ಹೇಳಿದೆ.

ಘೋಷಣೆಗೊಂಡಿರುವ ಉಪಚುನಾವಣೆಯಲ್ಲಿ ನಿಮ್ಮ ತಾಕತ್ತು ಮೊದಲು ತೋರಿಸಿ. ಆಮೇಲೆ ವಿಧಾನಸಭೆ ವಿಸರ್ಜಿಸುವ ಬಗ್ಗೆ ಚಿಂತೆ ಮಾಡುವಿರಂತೆ. ಜೈಲಿನಿಂದ ಬಿಡುಗಡೆಗೊಂಡ ಭ್ರಷ್ಟಾಚಾರದ ಆರೋಪಿ ಅಧ್ಯಕ್ಷರಿಗೆ ಒಂದೇ ಒಂದು ಚುನಾವಣೆ ಗೆಲ್ಲಲಾಗಲಿಲ್ಲ. ಈ ಉಪಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಎಂದು‌ ಬಿಜೆಪಿ ಟ್ವೀಟ್ ಮೂಲಕ ಕಾಂಗ್ರೆಸ್ ಕಾಲೆಳೆದಿದೆ.

ಇದನ್ನೂ ಓದಿ:ಬೈಕ್ ಸವಾರ ಸಾವು ಪ್ರಕರಣ : ಸಂಚಾರಿ ಪೊಲೀಸರ ವಿರುದ್ಧ ದೂರು ದಾಖಲು‌

ಅತ್ಯಂತ ಹಳೆಯ ಪಕ್ಷಕ್ಕೆ ಈಗ ತುಕ್ಕು ಹಿಡಿಯುತ್ತಿದೆ. ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕಾಗಿ ಸೋನಿಯಾ ಗಾಂಧಿ ಕುಟುಂಬ ಮತ್ತು ಹಿರಿಯ ನಾಯಕರ ನಡುವೆ ಹೋರಾಟ ನಡೆಯುತ್ತಿದೆ. ಕೆಪಿಸಿಸಿಯಲ್ಲಿ ಅಧ್ಯಕ್ಷರು ಮತ್ತು ಕಾರ್ಯಾಧ್ಯಕ್ಷರ ಕಾರುಬಾರು ಜೋರಾಗುತ್ತಿದೆ ಎಂದು ಹಿರಿಯ ನಾಯಕರು ದೂರುತ್ತಿದ್ದಾರೆ ಎಂದು ಬಿಜೆಪಿ ಟ್ವೀಟ್ ಮಾಡಿದೆ. ಈ ಟ್ವೀಟ್​ಗೆ ತಿರುಗೇಟು ನೀಡಿದ್ದ ಕಾಂಗ್ರೆಸ್​​ಗೆ ಬಿಜೆಪಿ ಎದುರೇಟು ನೀಡಿದೆ.

ABOUT THE AUTHOR

...view details