ಕರ್ನಾಟಕ

karnataka

ETV Bharat / state

ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆ.. ಬಿಜೆಪಿಯಿಂದ ಆ್ಯಂಬುಲೆನ್ಸ್, ಶವಪೆಟ್ಟಿಗೆ, ಔಷಧ ಸಿಂಪಡನೆ ವಾಹನಕ್ಕೆ ಚಾಲನೆ - ಔಷಧ ಸಿಂಪಡಿಸುವ ವಾಹನಕ್ಕೆ ಚಾಲನೆ

ದಿನಬಳಕೆಯ ವಸ್ತುಗಳಾದ ಅಕ್ಕಿ, ತರಕಾರಿ, ಎಣ್ಣೆ, ಬೇಳೆ, ಸೋಪು ಹಾಗೂ ಇತರೆ ಸಾಮಗ್ರಿಗಳನ್ನು ಉಚಿತವಾಗಿ ನೀಡುವ ಮೂಲಕ ಸಾರ್ವಜನಿಕರ ಸೇವೆ ಸಲ್ಲಿಸಿದ್ದೇವೆ. ಈ ಬಾರಿಯೂ ಸಹ ಕೋವಿಡ್ ಹೆಚ್ಚುತ್ತಿರುವ ಕಾರಣ ನನ್ನ ಜನ್ಮದಿನವನ್ನು ವಿಭಿನ್ನವಾಗಿ ಆಚರಿಸಬೇಕು ಎಂಬ ಉದ್ದೇಶದಿಂದ ಆ್ಯಂಬುಲೆನ್ಸ್, ಶವಪೆಟ್ಟಿಗೆ ಹಾಗೂ ಔಷಧ ಸಿಂಪಡಿಸುವ ವಾಹನಕ್ಕೆ ಚಾಲನೆ ನೀಡಲಾಗಿದೆ..

Corona
Corona

By

Published : Apr 18, 2021, 6:25 PM IST

ಬೆಂಗಳೂರು: ಕೋವಿಡ್ ಎಲ್ಲೆಡೆ ಹೆಚ್ಚಾಗುತ್ತಿದೆ. ಆ್ಯಂಬುಲೆನ್ಸ್, ಶವಪೆಟ್ಟಿಗೆ ಹಾಗೂ ಔಷಧ ಸಿಂಪಡಿಸುವ ವಾಹನದ ಕೊರತೆ ನಗರದಲ್ಲಿ ಎದ್ದು ಕಾಣುತ್ತಿದೆ. ಈ ನಿಟ್ಟಿನಲ್ಲಿ ಆ್ಯಂಬುಲೆನ್ಸ್, ಶವಪೆಟ್ಟಿಗೆ ಹಾಗೂ ಔಷಧ ಸಿಂಪಡಿಸುವ ವಾಹನಕ್ಕೆ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಎಸ್ ಮುನಿರಾಜು ದಾಸರಹಳ್ಳಿಯಲ್ಲಿ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಪಾಲಿಕೆಯ ಮಾಜಿ ಸದಸ್ಯ ಎನ್ ಲೋಕೇಶ್, ಕಳೆದ ವರ್ಷ ಕೋವಿಡ್ ಮಹಾಮಾರಿ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಬಿಎಸ್‌ವೈ ಕ್ಯಾಂಟೀನ್ ತೆರೆಯುವ ಮೂಲಕ ಸಾವಿರಾರು ಜನರಿಗೆ ಪ್ರತಿನಿತ್ಯ ಆಹಾರ ವಿತರಿಸಲಾಯಿತು ಎಂದರು.

ದಿನಬಳಕೆಯ ವಸ್ತುಗಳಾದ ಅಕ್ಕಿ, ತರಕಾರಿ, ಎಣ್ಣೆ, ಬೇಳೆ, ಸೋಪು ಹಾಗೂ ಇತರೆ ಸಾಮಗ್ರಿಗಳನ್ನು ಉಚಿತವಾಗಿ ನೀಡುವ ಮೂಲಕ ಸಾರ್ವಜನಿಕರ ಸೇವೆ ಸಲ್ಲಿಸಿದ್ದೇವೆ. ಈ ಬಾರಿಯೂ ಸಹ ಕೋವಿಡ್ ಹೆಚ್ಚುತ್ತಿರುವ ಕಾರಣ ನನ್ನ ಜನ್ಮದಿನವನ್ನು ವಿಭಿನ್ನವಾಗಿ ಆಚರಿಸಬೇಕು ಎಂಬ ಉದ್ದೇಶದಿಂದ ಆ್ಯಂಬುಲೆನ್ಸ್, ಶವಪೆಟ್ಟಿಗೆ ಹಾಗೂ ಔಷಧ ಸಿಂಪಡಿಸುವ ವಾಹನಕ್ಕೆ ಚಾಲನೆ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಹಾಗೂ ಮಹಿಳಾ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

ABOUT THE AUTHOR

...view details