ಕರ್ನಾಟಕ

karnataka

ETV Bharat / state

ಮಂತ್ರಿಗಿರಿಗಾಗಿ ಓಡಾಡಿದವರು ಈಗ ವಿಧಾನಸೌಧಕ್ಕೂ ಕಾಲಿಡ್ತಿಲ್ಲ ; ಸ್ವ-ಪಕ್ಷೀಯರ ಮೇಲೆ ಎಂಪಿ ಕುಮಾರಸ್ವಾಮಿ ವಾಗ್ದಾಳಿ - BJP MLA MP Kumaraswamy upset

ಮಂತ್ರಿಗಿರಿಗಾಗಿ ಓಡಾಡಿದ ಬಿಜೆಪಿ ನಾಯಕರು ಸಚಿವರಾದ ಮೇಲೆ ವಿಧಾನಸೌಧಕ್ಕೂ ಬರುತ್ತಿಲ್ಲ. ನಮ್ಮ ಕೈಗೂ ಸಿಗುತ್ತಿಲ್ಲ. ಸಚಿವರನ್ನು ಭೇಟಿಯಾಗುವುದೇ ಸವಾಲಿನ ಕೆಲಸ. ಈ ಬಗ್ಗೆ ನಾನು ರಾಜ್ಯಾಧ್ಯಕ್ಷರಿಗೆ ದೂರು ನೀಡುತ್ತೇನೆ..

BJP MLA MP Kumaraswamy is upset over the state ministers
ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ

By

Published : Jun 25, 2021, 7:37 PM IST

Updated : Jun 25, 2021, 9:32 PM IST

ಬೆಂಗಳೂರು :ವಿಧಾನಸೌಧಕ್ಕೆ ಹಾಜರಾಗದ ಸಚಿವರ ವಿರುದ್ಧ ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ಗರಂ ಆಗಿದ್ದಾರೆ. ಬೆಂಗಳೂರಿನ ಶಾಸಕರ ಭವನದಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸೂಚಿಸಿದರೂ ವಿಧಾನಸೌಧಕ್ಕೆ ಸಚಿವರು ಗೈರಾಗುತ್ತಿದ್ದಾರೆ. ಪ್ರತಿ ಗುರುವಾರ ವಿಧಾನಸೌಧ ಕಚೇರಿಯಲ್ಲಿ ಹಾಜರಿರುವಂತೆ ಸೂಚನೆ ನೀಡಿದ್ದಾರೆ.

ಆದರೆ, ಮೊದಲ ಗುರುವಾರವಾದ ನಿನ್ನೆ ಕೇವಲ ಐವರು ಸಚಿವರು ಮಾತ್ರ ಹಾಜರಾಗಿದ್ದರು ಎಂದು ಗೈರಾಗುತ್ತಿರುವ ಸಚಿವರ ವಿರುದ್ಧ ಎಂ ಪಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಸಚಿವರುಗಳ ವಿರುದ್ಧ ಮೂಡಿಗೆರೆ ಬಿಜೆಪಿ ಶಾಸಕ ಎಂ ಪಿ ಕುಮಾರಸ್ವಾಮಿ ಕಿಡಿ..

ಇದನ್ನೂ ಓದಿ; ಚುನಾವಣೆ ಘೋಷಣೆಗೂ ಮುನ್ನವೇ ಹಾನಗಲ್​ನಲ್ಲಿ ಟಿಕೆಟ್​ಗಾಗಿ ಕೈ-ತೆನೆ ಲಾಬಿ!!

ಸಿಎಂ ವಾರಕ್ಕೆ ಎರಡು ದಿನ ವಿಧಾನಸೌಧಕ್ಕೆ ಬರುತ್ತಾರೆ. ಮುಖ್ಯಮಂತ್ರಿಗಳಿಗೆ ಇರುವಷ್ಟು ಮಂತ್ರಿಗಳಿಗೆ ಕೆಲಸ ಇರುವುದಿಲ್ಲ. ಮಂತ್ರಿಯಾಗಬೇಕಾದರೆ ನಾ ಮುಂದು ತಾ ಮುಂದು ಅಂತ ಮುಗಿ ಬೀಳುತ್ತಾರೆ. ಸಚಿವರಾದ ಮೇಲೆ ವಿಧಾನಸೌಧಕ್ಕೆ ಬರುವುದಿಲ್ಲ. ಸಂಪುಟ ಸಭೆಗೆ ಮಾತ್ರ ಬಂದು ಹೋಗುತ್ತಾರೆ ಎಂದು ಕಿಡಿಕಾರಿದರು.

ಪ್ರತಿಯೊಬ್ಬ ಸಚಿವರು ಶಾಸಕರಿಗೆ ದಿನಚರಿಯ ವೇಳಾ ಪಟ್ಟಿಯನ್ನು ಕಳುಹಿಸಲಿ. ಅದರ‌ ಪ್ರಕಾರ ನಾವು ಭೇಟಿಯಾಗುತ್ತೇವೆ. ನಾವೇ ಭೇಟಿಗೆ ಇಷ್ಟು ಕಷ್ಟಪಡುತ್ತಿದ್ದೇವೆ, ಇನ್ನು ಸಾಮಾನ್ಯ ಕಾರ್ಯಕರ್ತರು ಸಚಿವರ ಮನೆ ಮುಂದೆ ಹೋಗಲು ಸಾಧ್ಯವೇ ? ಈ ಬಗ್ಗೆ ನಾನು ರಾಜ್ಯಾಧ್ಯಕ್ಷರಿಗೆ ದೂರು ನೀಡುತ್ತೇನೆ. ಅರುಣ್ ಸಿಂಗ್ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ಒತ್ತಾಯಿಸುತ್ತೇನೆ ಎಂದು ತಿಳಿಸಿದರು.

Last Updated : Jun 25, 2021, 9:32 PM IST

ABOUT THE AUTHOR

...view details