ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆ ಅಂಗೀಕರಿಸಲು ವಿಳಂಬ ಮಾಡುತ್ತಿರುವುದನ್ನು ವಿರೋಧಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಧರಣಿ ಕೂರುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ರಾಜೀನಾಮೆ ನೀಡಿರುವ 5-6 ಶಾಸಕರು ಅರ್ಜಿ ಸರಿಯಿದೆ ಎಂದ ಮೇಲೆ ಸ್ಪೀಕರ್ ಏಕೆ ಅಂಗೀಕರಿಸುತ್ತಿಲ್ಲ? ಇನ್ನು, ಹಲವರ ರಾಜೀನಾಮೆ ಅರ್ಜಿ ಸರಿಯಿಲ್ಲ ಎಂದಾದರೆ, ಹೊಸ ಅರ್ಜಿ ಸಲ್ಲಿಕೆಗೆ ಏಕೆ ಅವಕಾಶ ನೀಡುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.