ಕರ್ನಾಟಕ

karnataka

By

Published : Oct 7, 2019, 6:00 PM IST

ETV Bharat / state

ಆಯುಧ ಪೂಜೆ ಸಂಭ್ರಮದ ನಡುವೆ ಬಿಜೆಪಿ ಆಂತರಿಕ ಸಭೆ.! ಕುತೂಹಲ ಕೆರಳಿಸಿದ ಮೀಟಿಂಗ್​

ಆಯುಧ ಪೂಜಾ ಸಡಗರ, ಸಂಭ್ರಮದ ನಡುವೆಯೂ ಆರ್​ಎಸ್​ಎಸ್ ಕಚೇರಿ ಕೇಶವ ಕೃಪಾದಲ್ಲಿ ಇಂದು ಬೆಳಗ್ಗೆ ಬೆಂಗಳೂರಿನ ಸಚಿವರು ಮತ್ತು ಬಿಜೆಪಿ ಶಾಸಕರ ಆಂತರಿಕ ಸಭೆ ನಡೆಯಿತು.

ಆಯುಧ ಪೂಜೆ ಸಂಭ್ರಮದ ನಡುವೆ ಬಿಜೆಪಿ ಆಂತರಿಕ ಸಭೆ

ಬೆಂಗಳೂರು: ಆಯುಧ ಪೂಜೆಯ ಸಡಗರ, ಸಂಭ್ರಮದ ನಡುವೆಯೂ ಆರ್​ಎಸ್​ಎಸ್ ಕಚೇರಿ ಕೇಶವ ಕೃಪಾದಲ್ಲಿ ಇಂದು ಬೆಳಗ್ಗೆ ಬೆಂಗಳೂರಿನ ಸಚಿವರು ಮತ್ತು ಬಿಜೆಪಿ ಶಾಸಕರ ಆಂತರಿಕ ಸಭೆ ನಡೆಯಿತು.

ಚಾಮರಾಜಪೇಟೆಯಲ್ಲಿರುವ ಆರ್​ಎಸ್​ಎಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ‌ ಡಿಸಿಎಂ ಡಾ.ಅಶ್ವಥ ನಾರಾಯಣ, ಸಚಿವರಾದ ಆರ್.ಅಶೋಕ, ಸುರೇಶ್​ ಕುಮಾರ್, ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಸೇರಿದಂತೆ ಬೆಂಗಳೂರಿನ ಬಿಜೆಪಿ ಶಾಸಕರು ಭಾಗಿಯಾಗಿದ್ದರು.

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಆರ್​ಎಸ್​ಎಸ್ ಮುಖಂಡರಾದ ದತ್ತಾತ್ರೇಯ ಹೊಸಬಾಳೆ ಉಪಸ್ಥಿತಿಯಲ್ಲಿ ಸಭೆ ನಡೆಯಿತು. ಬೆಂಗಳೂರಿನ ಚೆನ್ನೇನಹಳ್ಳಿಯಲ್ಲಿ ಸೆಂಟರ್ ಫಾರ್ ಎಜ್ಯುಕೇಷನ್ ಎಕ್ಸ್​ಲೆನ್ಸ್ ಸ್ಥಾಪನೆ ಸಂಬಂಧವಾಗಿ ಆಂತರಿಕ ಸಭೆ ನಡೆಸಲಾಯಿತು ಎಂದು ತಿಳಿದುಬಂದಿದೆ.

ABOUT THE AUTHOR

...view details