ಕರ್ನಾಟಕ

karnataka

'ವೈಟ್ ಟ್ಯಾಪಿಂಗ್​ಗಿಂತ ಬಿಜೆಪಿ ಬ್ಲ್ಯಾಕ್ ಟ್ಯಾಪಿಂಗ್​ಗೆ 5 ಕೋಟಿಗೂ ಹೆಚ್ಚು ವೆಚ್ಚ..'

By

Published : Nov 18, 2019, 5:00 PM IST

ಇಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಪಾಲಿಕೆ ವಿಪಕ್ಷ ನಾಯಕ ವಾಜಿದ್ ಅವರು, ಬಿಜೆಪಿ ಸರ್ಕಾರ ಸ್ಮಾರ್ಟ್ ಸಿಟಿ ಯೋಜನೆಯಡಿ 36 ರಸ್ತೆಗಳಿಗೆ ಬ್ಲ್ಯಾಕ್ ಟ್ಯಾಪಿಂಗ್ ಮಾಡಲು ಬಿಜೆಪಿ ಮುಂದಾಗಿದೆ. ಇದು ಹೆಚ್ಚು ವೆಚ್ಚದಾಯಕವಾಗಿದೆ. ರಸ್ತೆ ನಿರ್ಮಾಣಕ್ಕೆ ಮೊದಲನೇ ಹಂತದಲ್ಲಿ 243 ಕೋಟಿ, 2ನೇ ಹಂತದಲ್ಲಿ 191 ಕೋಟಿ ರೂ.ವೆಚ್ಚ ಮಾಡಲು ಅಂದಾಜು ಮಾಡಲಾಗಿದೆ. ಪ್ರತಿ ಕಿ.ಮೀಟರ್​ಗೆ 14 ರಿಂದ 15 ಕೋಟಿ ರೂ. ಖರ್ಚು ಮಾಡುತ್ತಿದ್ದಾರೆ. ವೈಟ್ ಟ್ಯಾಪಿಂಗ್ ಕೆಲಸಕ್ಕಿಂತ ಬ್ಲ್ಯಾಕ್ ಟ್ಯಾಪಿಂಗ್​ಗೆ ನಾಲ್ಕು ಕೋಟಿಗೂ ಹೆಚ್ಚು ಖರ್ಚು ಮಾಡುತ್ತಿದ್ದಾರೆ. ಇದರ ಅಗತ್ಯ ಇದೆಯಾ ಎಂದು ಪ್ರಶ್ನಿಸಿದ್ದಾರೆ.

ವಾಜಿದ್, Vagid

ಬೆಂಗಳೂರು : ಕಾಂಗ್ರೆಸ್ ಅವಧಿಯಲ್ಲಿ ಮಾಡಿದ ವೈಟ್ ಟ್ಯಾಪಿಂಗ್ ರಸ್ತೆಗಳ ಬಗ್ಗೆ ತನಿಖೆ ನಡೆಸಿದ ಬಿಜೆಪಿ ಸರ್ಕಾರ ಕ್ಯಾಪ್ಟನ್ ದೊಡ್ಡಿಹಾಳ್ ಸಮಿತಿಗೆ ಕ್ಲೀನ್‌ಚಿಟ್ ನೀಡಿದೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಪಾಲಿಕೆ ವಿಪಕ್ಷ ನಾಯಕ ವಾಜಿದ್, ಸ್ಮಾರ್ಟ್ ಸಿಟಿ ಯೋಜನೆಯಡಿ 36 ರಸ್ತೆಗಳಿಗೆ ಬ್ಲ್ಯಾಕ್ ಟ್ಯಾಪಿಂಗ್ ಮಾಡಲು ಬಿಜೆಪಿ ಮುಂದಾಗಿದೆ. ಇದು ವೈಟ್ ಟ್ಯಾಪಿಂಗ್ ರಸ್ತೆಗಿಂತಲೂ ಹೆಚ್ಚು ವೆಚ್ಚದ ರಸ್ತೆಯಾಗಿದೆ. ಇದರ ಅಗತ್ಯವೇನಿದೆ ಎಂದು ಪ್ರಶ್ನಿಸಿದರು.

ಪಾಲಿಕೆ ವಿಪಕ್ಷ ನಾಯಕ ವಾಜಿದ್..

ರಸ್ತೆ ನಿರ್ಮಾಣಕ್ಕೆ ಮೊದಲನೇ ಹಂತದಲ್ಲಿ 243 ಕೋಟಿ, ಎರಡನೇ ಹಂತದಲ್ಲಿ 191 ಕೋಟಿ ರೂ. ವೆಚ್ಚ ಮಾಡಲು ಅಂದಾಜು ಮಾಡಲಾಗಿದೆ. ಪ್ರತಿ ಕಿ.ಮೀಟರ್​ಗೆ 14 ರಿಂದ 15 ಕೋಟಿ ರೂ. ಖರ್ಚು ಮಾಡುತ್ತಿದ್ದಾರೆ. ವೈಟ್ ಟ್ಯಾಪಿಂಗ್ ಕೆಲಸಕ್ಕಿಂತ ಬ್ಲ್ಯಾಕ್ ಟ್ಯಾಪಿಂಗ್​ಗೆ ನಾಲ್ಕು ಕೋಟಿಗೂ ಹೆಚ್ಚು ಖರ್ಚು ಮಾಡುತ್ತಿದ್ದಾರೆ. ಆಸ್ಫಾಲ್ಟ್ ಮಾಡಿದರೆ, ಡಾಂಬರು ಹಾಕಿದರೆ ಗುಂಡಿ ಬೀಳೋದು ಸಹಜ. ಹೀಗಾಗಿ ಇಷ್ಟೊಂದು ಮೊತ್ತದ ಯೋಜನೆಯಲ್ಲಿ ಅವ್ಯವಹಾರ ಆಗಿದಿಯಾ, ಕಿಕ್ ಬ್ಯಾಕ್ ತಗೊಂಡಿದ್ದಾರಾ, ಕಿ.ಮೀಟರ್ ರಸ್ತೆಗೆ 15 ಕೋಟಿ ಬೇಕಾ ಎಂದು ವಾಜಿದ್ ಪ್ರಶ್ನಿಸಿದರು.

ಉಪಮೇಯರ್ ವಿರುದ್ಧ ವಿಪಕ್ಷ ನಾಯಕ ಗರಂ:
ಉಪಮೇಯರ್ ರಾಮ್ ಮೋಹನ್ ರಾಜು ಇಂದಿರಾ ಕ್ಯಾಂಟೀನ್​ಗೆ ಕೆಂಪೇಗೌಡ ಹೆಸರಿಡುತ್ತೇವೆ ಎಂದು ಹೇಳಿಕೆ ಕೊಡುತ್ತಾರೆ. ಮೇಯರ್ ಇವರೋ, ಗೌತಮ್ ಕುಮಾರೋ ಎಂಬ ಪ್ರಶ್ನೆ ಎದ್ದಿದೆ. ಆದರೆ, ಈವರೆಗೆ ಮೇಯರ್ ಆಗಲಿ, ಮುಖ್ಯಮಂತ್ರಿಗಳಾಗಲೇ ಈ ಬಗ್ಗೆ ಹೇಳಿಲ್ಲ. ಉಪಮೇಯರ್ ದಾರಿ ತಪ್ಪಿಸುವ ಕೆಲಸ ಮಾಡ್ತಿದ್ದಾರೆ. ಈ ಎಲ್ಲಾ ಆರೋಪಗಳಿಗೆ ಪ್ರತಿಕ್ರಿಯಿಸಲು ಉಪಮೇಯರ್ ರಾಮ್ ಮೋಹನ್ ರಾಜು ನಿರಾಕರಿಸಿದ್ದು, ಚುನಾವಣೆ ಮುಗಿದ ಮೇಲೆ ಉತ್ತರಿಸುತ್ತೇನೆ ಎಂದರು.

ಪ್ರತ್ಯೇಕ ಬಸ್ ಪಥ ನಿರ್ಮಾಣಕ್ಕೆ 24 ಕೋಟಿ ರೂ. ಕೆಲಸವನ್ನು ಮೂವರು ಗುತ್ತಿಗೆದಾರರಿಗೆ ಕೊಟ್ಟಿದ್ದಾರೆ. 21 ಕಿ.ಲೋ ಮೀಟರ್‌ಗೆ 24 ಕೋಟಿ ರೂ. ಖರ್ಚುಮಾಡುತ್ತಿದ್ದಾರೆ. ಆದರೆ, ಇದಕ್ಕೆ ಮೊದಲು ಟಿಇಸಿ ವಿಭಾಗದಿಂದ 30 ಕೋಟಿ ರೂ. ವೆಚ್ಚದ ಹೈಡೆನ್ಸಿಟಿ ಕಾರಿಡಾರ್ ನಿರ್ಮಾಣಕ್ಕೆ ಗುತ್ತಿಗೆ ನೀಡಲಾಗಿತ್ತು. ಇವರಿಗೆ ಮತ್ತೆ ಪ್ರತ್ಯೇಕ ಬಸ್ ಪಥ ನಿರ್ಮಾಣ ಕೊಟ್ಟಿದ್ದಾರೆ. ಟೆಂಡರ್ ಕರೆಯದೆ, ಪೂರ್ವ ಸಿದ್ಧತೆ ಯಾವುದೂ ಮಾಡಿಕೊಳ್ಳದೆ, ಗುತ್ತಿಗೆ ನೀಡಿರುವುದು ಎಷ್ಟು ಸರಿ. ಅಲ್ಲದೆ ಹೇಳಿರುವ ಡೆಡ್‌ಲೈನ್​ಗೆ ಕೆಲಸ ಮುಗಿಸುತ್ತಿಲ್ಲ. ವೆಂಕಟಾಚಲಪತಿ ಎಂಬ ಗುತ್ತಿಗೆದಾರ ಈಗಾಗಲೇ ಕೆಲಸ ಮುಗಿಸಿ ಪಾಲಿಕೆಯಿಂದ ದುಡ್ಡು ತಗೊಂಡ ಬಳಿಕ ಮತ್ತೆ ಅವನಿಗೆ ಕೆಲಸ ಕೊಡಲಾಗಿದೆ. ಇದೆಲ್ಲಾ ಅವ್ಯವಹಾರಕ್ಕೆ ಎಡೆಮಾಡಿದೆ ಎಂದರು ಆರೋಪಿಸಿದರು.

ABOUT THE AUTHOR

...view details