ಕರ್ನಾಟಕ

karnataka

ETV Bharat / state

ಎಲ್ಲಾನೂ ನಿಮ್ಮ ಜತೆ ಹಂಚಿಕೊಳ್ಳೋಕಾಗುತ್ತಾ, ಮಾತಾಡೋಕಾಗುತ್ತಾ: ಬೆಂಗಳೂರಿನಲ್ಲಿ ಪರಮೇಶ್ವರ್ ಪ್ರಶ್ನೆ - undefined

ಯಾವ ಶಾಸಕರೂ ಅಸಮಾಧಾನಕ್ಕೊಳಗಾಗಿಲ್ಲ. ಅವರ ಕ್ಷೇತ್ರದಲ್ಲಿ ಕೆಲಸವಾಗಿಲ್ಲ ಎಂಬ ಬೇಸರವಷ್ಟೇ. ಅಷ್ಟಕ್ಕೇ ಶಾಸಕರ ಅಸಮಾಧಾನ ಎಂದು ಹೇಳುವುದು ತಪ್ಪು ಎಂದ ಡಿಸಿಎಂ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.

ಡಿಸಿಎಂ ಡಾ. ಜಿ. ಪರಮೇಶ್ವರ್

By

Published : May 27, 2019, 1:58 PM IST

Updated : May 27, 2019, 2:24 PM IST

ಬೆಂಗಳೂರು:ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಹಾಗೂ ಶಾಸಕ ಡಾ. ಕೆ ಸುಧಾಕರ್‌ ಅವರು ಎಸ್‌ಎಂ ಕೃಷ್ಣ ಅವರ ಭೇಟಿ ಸಂಬಂಧ ಖುದ್ದು ಹೇಳಿಕೆ ನೀಡಿದ್ದಾರೆ. ಆ ಭೇಟಿ ಕಾಕತಾಳೀಯವಷ್ಟೇ ಅಂತಾ ಡಿಸಿಎಂ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ಡಿಸಿಎಂ ಡಾ. ಜಿ. ಪರಮೇಶ್ವರ್

ಇಂದು ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಎಸ್‌ಎಂ ಕೃಷ್ಣ ಭೇಟಿ ವೇಳೆ ಬಿಜೆಪಿ ನಾಯಕರು ಕಾಕತಾಳೀಯವಾಗಿ ಆಗಮಿಸಿದ್ದಾರೆಯೇ ಹೊರತು ಇನ್ನಾವ ಉದ್ದೇಶವೂ ಇಲ್ಲ ಎಂದು ಅವರೇ ಸ್ಪಷ್ಟ ಪಡಿಸಿದ್ದಾರೆ. ರಮೇಶ್ ಅವರು ಕಾಂಗ್ರೆಸ್‌ ಪಕ್ಷ ಬಿಟ್ಟು ಹೋಗುವುದಿಲ್ಲ ಎಂಬ ಭರವಸೆ ಇದೆ. ಅವರ ಹೇಳಿಕೆ ಮೇಲೆ ನಂಬಿಕೆ ಇದೆ ಎಂದು ಹೇಳಿದ್ದಾರೆ.

ರಮೇಶ್ ಬಗ್ಗೆ ವಿಶ್ವಾಸವಿದೆ :

ರಮೇಶ್‌ ಜಾರಕಿಹೋಳಿ ಅವರು ಸರ್ಕಾರದ ಪರವಾಗಿಯೇ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಸಂಪುಟ ಸಹೋದ್ಯೋಗಿಗಳ ಬದಲಾವಣೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಆದರೆ, ರಾಜಕೀಯ ಬೆಳವಣಿಗೆಗೆ ಅನುಗುಣವಾಗಿ ಕೆಲ ಬದಲಾವಣೆ ಮಾಡಲಾಗುವುದು ಎಂದರು.

Last Updated : May 27, 2019, 2:24 PM IST

For All Latest Updates

TAGGED:

ABOUT THE AUTHOR

...view details